ಕಂದಗಲ್ಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.
ಕಂದಗಲ್ಲು ಜೂನ್.06

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜ್ ನಲ್ಲಿ ದಿನಾಂಕ 5 ಜೂನ್ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಣೆ ಮಾಡಿದರು. ಈ ಶಾಲೆಯಲ್ಲಿ ಉತ್ತಮವಾದ ಪರಿಸರ ಅಂದರೆ ವಿಧ ವಿಧದ ತಳಿಯ ಗಿಡ ಮರಗಳು ಸುಂದರವಾದ ಕಟ್ಟಡಗಳು, ಶಾಲಾ ಸುತ್ತಲೂ ಕಾಂಪೌಂಡ್, ಒಳಗಡೆ ಶಾಲಾ ಆವರಣ ಉತ್ತಮವಾದ ಹುಲ್ಲಿನ ಹಾಸಿಗೆ, ಸಾಲು ಸಾಲಾಗಿ ನಿಂತಿರುವ ಗಿಡ ಮರಗಳು, ಆಟದ ಮೈದಾನಗಳು ಒಟ್ಟಿನಲ್ಲಿ ಹೇಳುವುದಾದರೆ ವಿದ್ಯಾರ್ಥಿಗಳಿಗೆ ಉತ್ತಮವಾದ ಪರಿಸರವನ್ನು ಹೊಂದಿರುವ ಶಾಲೆ ಇದಾಗಿದೆ. ಅಲ್ಲದೆ ಈ ಶಾಲೆಯಲ್ಲಿ ಓದಿದ ಮಕ್ಕಳು ಫಲಿತಾಂಶವು ಅತ್ಯುತ್ತಮ ಅಂದರೆ ಚೇತನ್ ಜಿ ಯವರು 625 ಕ್ಕೆ 612 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಅಲ್ಲದೆ ನಾಗವೇಣಿ ಮತ್ತು ಪ್ರಜ್ವಲ್ 625 ಕ್ಕೆ 611 ಅಂಕ ಗಳಿಸುವುದರ ಮೂಲಕ ಇಲ್ಲಿನ ಪರಿಸರ ಹಾಗೂ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಗುಣಮಟ್ಟವನ್ನು ತಿಳಿಯಬಹುದು.

ಮುರಾರ್ಜಿ ದೇಸಾಯಿ ವಸತಿ ಶಾಲೆ ಕಂದಗಲ್ಲು 2023-24 ನೇ. ಸಾಲಿನ ಫಲಿತಾಂಶದ ವೇಟೇಜ್ 91.12% ಅಂದರೆ ಒಟ್ಟು ಎಸ್ ಎಸ್ ಎಲ್ ಸಿ 43 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 24 ಫಸ್ಟ್ ಕ್ಲಾಸ್ 27 ಸೆಕೆಂಡ್ ಕ್ಲಾಸ್ 2 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯ ಸಂಪೂರ್ಣ ವಿದ್ಯಾರ್ಥಿಗಳು ಉತ್ತೀರಣರಾಗಿ ಶಾಲೆಗೂ ಹಾಗೂ ತಂದೆ ತಾಯಿಗಳಿಗೂ ಕೀರ್ತಿ ತಂದು ಕೊಟ್ಟಿರುವುದು ಸಂತೋಷವಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ಮತ್ತು ನಿಲಯ ಪಾಲಕರು ಹೇಳಿದರು.ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜ್ ಕಂದಗಲ್ಲು ವಿದ್ಯಾರ್ಥಿಗಳು 600 ಕ್ಕೆ 569 ಪ್ರಥಮ ಸ್ಥಾನ ಕವಡಿ ಮಂಜುನಾಥ್ ದ್ವಿತೀಯ ಸ್ಥಾನ 600 ಕ್ಕೆ 567 ಅರ್ಜುನ ಎಲ್ ಪಡೆದು ಕೊಂಡು ಒಟ್ಟು 74 ವಿದ್ಯಾರ್ಥಿಗಳಲ್ಲಿ 22 ಡಿಸ್ಟಿಂಕ್ಷನ್ 47 ಪ್ರಥಮ ಸ್ಥಾನ 3 ದ್ವಿತೀಯ ಸ್ಥಾನ ಎರಡು ತೃತೀಯ ಸ್ಥಾನ ಪಡೆದುಕೊಂಡು ಕಾಲೇಜಿಗೂ ಹಾಗೂ ತಂದೆ ತಾಯಿಗಳಿಗೂ ಕೀರ್ತಿ ತಂದು ಕೊಟ್ಟಿರುವುದು ಸಂತೋಷವಾಗಿದೆ ಎಂದು ಕೊಟ್ರೇಶ್ ಉಪನ್ಯಾಸಕರು ಹೇಳಿದರು.ಈ ಸಂದರ್ಭದಲ್ಲಿ ಶಿವಕುಮಾರ್ ಎಸ್ ಸಿ ಪ್ರಾಂಶುಪಾಲರು ಸುರೇಶ್ ಎವಿ ನಾಗರಾಜ್ ಎಸ್ ದೈಹಿಕ ಶಿಕ್ಷಕರು ಮಾರಣ್ಣ ಬಿ ಎಸ್ ನಿಲಯ ಪಾಲಕರು ರವಿ ಕ್ಲರ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್. ಕುಮಾರ್ ಸಿ. ಕೊಟ್ಟೂರು.