ಭಾರತ ತಂಡ ವಿಶ್ವಕಪ್ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದ ಯು. ನಾಗೇಶ್.
ಕಾನಾ ಹೊಸಹಳ್ಳಿ ನವೆಂಬರ್.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ಆರ್.ಗ್ರೂಪ್ ಸಂಸ್ಥಾಪಕರಾದ ಯು ನಾಗೇಶ್ ಪಟ್ಟಣದ ಶ್ರೀ ಸಾಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಆರ್ ಗ್ರೂಪ್ ನ ಸಂಸ್ಥಾಪಕರಾದ ಯು ನಾಗೇಶ್ ಮಾತನಾಡಿ ಇಂದು ನಡೆಯಲಿರುವ ವಿಶ್ವಕಪ್ ನ ಮೊದಲನೇ ಸೆಮಿ ಫೈನಲ್ ಪಂದ್ಯಾವಳಿ ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಜಯ ಸಾಧಿಸಲೆಂದು ಮತ್ತು ಈ ವಿಶ್ವಕಪ್ ನಲ್ಲಿ ಭಾರತ ತಂಡ ವಿಶ್ವಕಪ್ ವಿಜಯಶಾಲಿ ಆಗಲೆಂದು ಸಾಲೇಶ್ವರ ದೇವಸ್ಥಾನದಲ್ಲಿವಿಶೇಷ ಅಭಿಷೇಕ ಪೂಜಾ ಕೈಂಕರ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹಿರಿಯರಾದ ಬಸವರಾಜ್ ಸಿದ್ದನಕೋಟೆ. ಯುವ ಮುಖಂಡರಾದ ಎ ಟಿ ಬಸವರಾಜ್. ಸಾಲೇಶ್. ಗಜೇಂದ್ರ ಆಚಾರಿ. ಯು ಏನ್ ಜೀವನ್. ಯು.ಎನ್. ಬಾಲಾಜಿ. ಅನಿಲ್ ಕುಮಾರ್ ಬಾಬು. ದೇವೇಂದ್ರ. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ