ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ.

ಬಳ್ಳಾರಿ ನ.12

ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಬಿ ಗೋನಾಳ್ 17 ನೇ. ವಾರ್ಡ್ ದಿನಾಂಕ 11/11/2024 ರಂದು ಸಾಯಂಕಾಲ ವೀರ ವನಿತೆ ಒನಕೆ ಓಬವ್ವ ಜಯಂತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ವೀರ ವನಿತೆ ಒನಕೆ ಓಬವ್ವ ಭಾವ ಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಮಾನಯ್ಯ ಬಿ.ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ವೀರ ವನಿತೆ ಒನಕೆ ಓಬವ್ವ ನಮ್ಮ ಜಿಲ್ಲೆಯ ನಮ್ಮ ಸಮುದಾಯದ ಮಹಿಳೆ ಗುಡೆಕೋಟೆ ಇತಿಹಾಸಿಕ ನೆಲೆಯಾಗಿದ್ದಂತ ಇವರ ತವರು ಮನೆಯಾಗಿದು ಗುಡೆಕೋಟೆ ಪಾಳೆಗಾರರು ಆಳಿದ ನಾಡಾಗಿದ್ದು ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದಂತ ನಮ್ಮ ಛಲವಾದಿ ಸಮಾಜದ ಇಂಥ ಸಾಹಸಗಾರ್ತಿಯ ಜಯಂತಿಯನ್ನು ಮಾಡಿ ನೆನಪಿಸಿ ಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿ.ಶಿವಕುಮಾರ್ ಜಿಲ್ಲಾಧ್ಯಕ್ಷರು ಛಲವಾದಿ ಮಹಾಸಭಾದ ಕನ್ನಡ ನಾಡಿನ ಚಿತ್ರದುರ್ಗದ 12 ನೇ. ಶತಮಾನದಲ್ಲಿ ರಾಜ ವೀರ ಮದಕರಿ ನಾಯಕ ಆಳ್ವಿಕೆಯನ್ನು ನಡೆಸುವ ಸಂದರ್ಭದಲ್ಲಿ ಹೈದರಾಲಿಯು ಚಿತ್ರದುರ್ಗದ ಏಳು ಸುತ್ತಿನ ಕೋಟೆ ಮೇಲೆ ದಂಡೆತ್ತಿ ಬಂದನು ಅವನ ಗೂಢಾಚಾರಿ ಸೈನಿಕರು ಕಳ್ಳ ಕಿಂಡಿಯಲ್ಲಿ ಇಣುಕಿ ನೋಡುವಾಗ ಕೋಟೆಯ ಕಾವಲುಗಾರ ಕಹಳೆ ಮದ್ದ ಹನುಮಪ್ಪನ ಹೆಂಡತಿ ಓಬವ್ವ ನೀರಿಗೆಂದು ಬಂದಾಗ ಕಳ್ಳ ಕಿಂಡಿಯ ಹಿಂದೆ ಹೈದರಾಲಿಯ ಸೈನಿಕರ ಪಿಸು ಮಾತುಗಳನ್ನು ಕೇಳಿ ಒನಕೆಯನ್ನು ತಂದು ವೀರ ವೇಷದಿಂದ ನುಸುಳಿ ಬಂದ ಸುಮಾರು ಸೈನಿಕರನ್ನು ಒನಕೆಯಿಂದ ಹೊಡೆದು ಸಾಯಿಸಿ ನಂತರ ವೀರ ವನಿತೆ ಒನಕೆ ಓಬವ್ವಳ ಹೈದರಾ ಲಿಯು ಸೈನಿಕರಲ್ಲಿ ಸಂಚು ಹಾಕಿ ಒಬ್ಬನು ಹಿಂದಿನಿಂದ ಬಂದು ಮೋಸದಿಂದ ಚಾಕುನಿಂದ ತಿಳಿದು ಸಾಯಿಸಿದನು ಆದರೆ ವೀರ ವನಿತೆ ಒನಕೆ ಓಬವ್ವ ಸಾಹಸಿಗಾರ್ತಿ ವೀರಮರಣ ಹೊಂದಿದಳು ಛಲಗಾರ್ತಿ ಇಂತಾ ವೀರ ವನಿತೆ ಒನಕೆ ಓಬವ್ವ ಇವರ ಜಯಂತಿಯನ್ನು ಇವತ್ತು ಈ ಗ್ರಾಮದಲ್ಲಿ ಮಾಡಿದ್ದು ಬಹಳ ಸಂತೋಷ ಎಂದು ಹೇಳಿದರು. ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ ಮನೆತನದ ಹೆಣ್ಣು ಮಗಳಲ್ಲ ಯಾವುದೇ ರೀತಿಯ ಶಸ್ತ್ರ ತರಬೇತಿ ಇಲ್ಲದ ಸಾಮಾನ್ಯ ಕಹಳೆ ಊದುವವನ ಹೆಂಡತಿ ಓಬವ್ವ ಚಿತ್ರದುರ್ಗದ ಮದಕರಿ ನಾಯಕನ ಏಳು ಸುತ್ತಿನ ಕೋಟೆಯನ್ನು ನುಗ್ಗುತ್ತಿದ್ದ ಶತ್ರು ಸೈನ್ಯವನ್ನು ಒನಕೆಯಿಂದ ಸದೆ ಬಡೆದ ವೀರ ವನಿಕೆ ಓಬವ್ವ ಸಾಹಸ ಮಹಿಳೆಯ ಜನಿಸಿದ ಕನ್ನಡ ನಾಡಿನ ಎಂದು ಹೇಳಿ ಕೊಳ್ಳಲು ಹೆಮ್ಮೆ ಎನಿಸುತ್ತದೆ. ಇದು ಬಹುದೊಡ್ಡ ಸಾಧನೆ ಓಬವ್ವ ಒಂದು ಜಾತಿಗೆ ಸೀಮಿತವಾದ ಮಹಿಳೆ ಯಾಗದೆ ಎಲ್ಲಾ ಸಮುದಾಯ ಮೆಚ್ಚುವ ವೀರ ಮಹಿಳೆಯನಾಗಿ ನೆನೆಯಬೇಕು ಎಂದು ಹೇಳಿದರು. ವೆಂಕಟೇಶ್ ಜಿಲ್ಲಾ ಜಂಟಿ ಕಾರ್ಯದರ್ಶಿ ಛಲವಾದಿ ಮಹಾಸಭಾ ಮಲ್ಲಿಕಾರ್ಜುನ್ ಬೀ ಗೋನಾಳ ಛಲವಾದಿ ಮುಖಂಡ ಮರಿ ಬಸಪ್ಪ ರಾಮಾಂಜನಿ ಸಣ್ಣ ಈರಣ್ಣ ಪರಮೇಶ್ ಮೌನೇಶ್ ಶೇಖರ್ ಸಿ ಮೌನೇಶ್ ವೀರೇಶ್ ಹುಲಿಗೇಶ್ ತಾಯಣ್ಣ ನಾರಾಯಣ ವಿರೂಪಣ್ಣ ನಾಗರಾಜ್ ಮೌನೇಶ್ ಗೆಲು ವಿನೋದ್ ಕುಮಾರ್ ಗೌತಮ್ ನಗರ್ ವೀರೇಶ್ ಸುಮಾರು ಮಹಿಳೆಯರು ಒನಕೆ ಓಬವ್ವನ ವೇಶ ಧರಿಸಿದ ಮುದ್ದು ಮಕ್ಕಳು ಹಿರಿಯ ಮುಖಂಡರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button