ಬಳ್ಳಾರಿ To ಕಲಕೇರಿ ವಿಜಯಪುರ (ರೂ.ಸಂ.12 13) ಬರುವ ಬಸ್ ಸರಿಯಾದ ಸಮಯಕ್ಕೆ – ಪೂರೈಸಲು ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಆಗ್ರಹ.

ಕಲಕೇರಿ ನ.12

ಬಳ್ಳಾರಿ To ಕಲಕೇರಿ ವಿಜಯಪುರ (ರೂ.ಸಂ:12 13) ಬರುವ ಬಸ್‌ ಸರಿಯಾದ ಸಮಯ ಹಾಗೂ ದಿನನಿತ್ಯ ಬಾರದಿರುವುದರಿಂದ ಕಲಕೇರಿ ಸಾರ್ವಜನಿಕ ಜನರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಆಗದ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗುತ್ತಿದೆ ಹಾಗೂ ಕಲಕೇರಿ ಗ್ರಾಮಸ್ಥರಿಗೂ ಕೂಡ ಬೇರೆ ಬೇರೆ ಊರುಗಳಿಗೆ ಹಾಗೂ ವೈಯಕ್ತಿಕ ಕೆಲಸ ವಿರುವುದರಿಂದ ಕಛೇರಿ ಗಳಿಗೆ ಹೋಗಲು ಆಗುತ್ತಿಲ್ಲ.

ಕೆ.ಎಸ್.ಆರ್.ಸಿ ವ್ಯವಸ್ಥಾಪಕರು ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸಿ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸರಿಯಾಗಿ ಟೈಮ್ To ಟೈಮ್ ಬಸ್ಸ್ ಗಳನ್ನ ಬಿಡುವ ವ್ಯವಸ್ಥೆ ಬಳ್ಳಾರಿ ಕಲಕೇರಿ ವಿಜಯಪುರಕ್ಕೆ ಬರುವ ಬಸ್‌ನ್ನು ಸರಿಯಾದ ಸಮಯ ಹಾಗೂ ದಿನನಿತ್ಯ ಬಿಡುವಂತೆ ಮಾಧ್ಯಮ ಮೂಲಕ ಊರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಕೋರಿಕೆಯಾಗಿದೆ.ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ. ಮನಗೂಳಿ. ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button