“ಸ್ವಾರ್ಥಿಗಳ ಲೋಕದಲಿ ಸ್ವಾಭಿಮಾನದಿ ಬೆಳಗು”…..

ಹೇ ಮನುಜ ನೀ ಸೆಣಸುವದಾದರೆ
ಮಾನವೀಯ ಗುಣಗಳೊಂದಿಗೆ ಸೆಣಸು
ಮನಸ್ಸು ಮಲೀನತೆಯಾಗದ ಹಾಗೇ ಇರಿಸು
ಸುಮನ ಸುಭಾವ ಗಳಿಸು
ದುಷ್ಟರ ಭ್ರಷ್ಟತೆಯ ಅಳಿಸು
ಪ್ರಾಮಾಣಿಕ ನ್ಯಾಯ ನೀತಿ ನಿಷ್ಠುರತೆಯ
ಗೆಲ್ಲಿಸು
ದುರಂಕಾರಿ ಮೂರ್ಖರ ಜೋತೆ ವಾದ ಬೇಡ
ಹಿರಿಯರ ಅನುಭವಿಗಳ ಜೋತೆ ಸೇರು
ವಯೋವೃದ್ಧರ, ಮಕ್ಕಳ ಜೋತೆ ಕಾಲ
ಕಳೆಯುವದು
ನಿನ್ನ ಜೀವನಕ್ಕೊಂದು ಶೋಭೆ
ನಿನ್ನಿಚ್ಛೆಗೆ ನೀನಿರು ಬೇರೆಯವರು ಮೆಚ್ಚಲಿ
ಮೆಚ್ಚದಿರಲಿ
ಸ್ವಾರ್ಥಿಗಳ ಲೋಕದಲಿ ಸ್ವಾಭಿಮಾನದಿ
ಬೆಳಗು
ನಿಸ್ವಾರ್ಥವು ಆದರ್ಶತನದ ಬದಕು
ಪರರ ಚಿಂತೆ ಬೀಡು ನಿನ್ನಿಷ್ಟದಂತೆ ನೀನಿರು
ನಿನ್ನೆಯ ನಾಳೆಯ ಗೋಡವೆ ಏಕೆ?!
ಇಂದಿನ ಸುಖ ಆನಂದ ಕ್ಷಣ ಅನುಭವಿಸು
-ಶ್ರೀದೇಶಂಸುಶ್ರೀ
ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
8618674872 ಬಾಗಲಕೋಟ.