ನಿಮಗೆ ಹೇಳೋರು ಕೇಳೋರು ಯಾರು ಇಲ್ವಾ ಸಮಯ 10 ಗಂಟೆ ಆದರೂ ಶಾಲೆಯ ಬಾಗಿಲು ತೆಗೆದಿಲ್ಲಾ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನ ವಿರುದ್ಧ – ಮಲ್ಲಿಕಾರ್ಜುನ್ ಅವರಾದಿ ಆಕ್ರೋಶ.
ಇಜೇರಿ ನ.14

ಇಜೇರಿಯಲ್ಲಿ ನಡೆದ ಘಟನೆ ಸರ್ಕಾರಿ ಶಾಲೆಯಲ್ಲಿ ಸಮಯ 10 ಗಂಟೆಯಾದರೂ ಶಾಲೆಯ ಬಾಗಿಲು ತೆರೆದೆ ಇಲ್ಲಾ ವಿದ್ಯಾರ್ಥಿಗಳು ಶಾಲೆಯ ಮುಂದೆ ಕುಳಿತು ಕೊಳ್ಳಬೇಕು ನೀವು ಯಾವಾಗ ಬರುತ್ತೀರೋ ಏನೋ ನೀವುಗಳು ಬಂದಾಗ ಮಕ್ಕಳು ಶಾಲೆ ಒಳಗೆ ಬರಬೇಕು ಮಕ್ಕಳಿಗೆ ಶಾಲೆಯಲ್ಲಿ ಸರಿಯಾದ ಆಸನ ವ್ಯವಸ್ಥೆ ಇಲ್ಲ . ನಮ್ಮ ದೇಶ ನಮ್ಮ ಕನ್ನಡ ನಾಡು ಮತ್ತು ನಮ್ಮ ಮಕ್ಕಳು ಅಥವಾ ವಿದ್ಯಾರ್ಥಿಗಳು ಉದ್ದಾರ ಆಗ್ಬೇಕು ಅಂದ್ರೆ ಹೇಗಾಗಬೇಕು ರ್ರೀ ಸರ್ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಇಜೇರಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅವರಾದಿ ಯವರು ಮುಖ್ಯ ಶಿಕ್ಷಕರನ್ನು ಪ್ರಶ್ನೆ ಮಾಡಿದ್ದಕ್ಕೆ ಶಿಕ್ಷಕರು ನೀವು ಏನ್ ಮಾಡ್ಕೋತೀರಾ ಮಾಡ್ಕೊಳ್ಳಿ.

ನಾನು ಬರುವುದೇ ಇದೇ ಸಮಯಕ್ಕೆ ಎಂದು ಹೇಳಿದ್ದಾರೆ. ಅದಕ್ಕೆ ಟಕ್ಕರ್ ಕೊಟ್ಟ ಅಧ್ಯಕ್ಷ ನಿಮಗೆ ಹೇಳೋರು ಕೇಳೋರು ಯಾರು ಇಲ್ವಾ ಎಂದು ಪ್ರಶ್ನಿಸಿದಕ್ಕೆ ಶಿಕ್ಷಕರುಗಳು ಮೌನಕ್ಕೆ ಜಾರಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಇಜೇರಿ ಹೋಬಳಿಯ ವಲಯದ ಅಧ್ಯಕ್ಷ ಹಣಮಂತ ನಾಯಕ , ಉಪಾಧ್ಯಕ್ಷ ಅಮಿದ, ಮತ್ತು ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಶಂಕರ್.ಎನ್.ನೀಲಕೋಡ.ಇಜೇರಿ.ಜೇವರ್ಗಿ