ಕನ್ನಡ ನಾಡಿನ ಹಿರಿಯರು ಸಾಹಿತಿಗಳು ಬುದ್ದಿ ಜೀವಿಗಳ ಅವಿರತ ಹೋರಾಟದ ಫಲ ಈ ನಮ್ಮ ನಮ್ಮ ಕನ್ನಡ ನಾಡು ಸಾಹಿತಿ – ಎಂ.ಎನ್ ರವಿಕುಮಾರ್.

ಎಂ.ಬಿ ಅಯ್ಯನಹಳ್ಳಿ ನ.15

ಹರಿದು ಹಂಚಿ ಹೋದ ಕನ್ನಡ ನಾಡನ್ನು ಒಂದು ಗೂಡಿಸಲು ನಡೆದ ಹೋರಾಟ ರೋಚಕವಾದುದ್ದು, ನಾಡಿನ ಹಿರಿಯರು ಸಾಹಿತಿಗಳು ಬುದ್ಧಿ ಜೀವಿಗಳು ಅವಿರತ ಹೋರಾಟದ ಫಲವಾಗಿ ಸುಂದರ ಕನ್ನಡ ನಾಡು ಒಂದುಗೂಡಿ ಕನ್ನಡಿಗರ ಬದುಕು ಹಸನಾಗಿದೆ ಎಂದು ಸಾಹಿತಿ ಎನ್.ಎಂ ರವಿಕುಮಾರ್ ನುಡಿದರು. ಎಮ್.ಬಿ ಅಯ್ಯನಹಳ್ಳಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ. ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಜಲ ನೆಲ ನಾಡು ನುಡಿಯನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ, ಅದಕ್ಕಾಗಿ ಪ್ರತಿ ಶಾಲಾ ಕಾಲೇಜುಗಳಲ್ಲಿ ಪ್ರತಿ ಗ್ರಾಮಗಳಲ್ಲಿ ನಾಡಹಬ್ಬ ಆಚರಿಸುವುದು ಅಗತ್ಯವಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಎಂ ಸಿದ್ದ ನಾಯ್ಕ್ ವಹಿಸಿದ್ದರು, ಸಹಶಿಕ್ಷಕ ವೀರಣ್ಣ ಪ್ರಾಸ್ತವಿಕವಾಗಿ ಮಾತನಾಡಿದರು, ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಸಾ.ಮ. ಸಂಗಮೇಶ್ವರಯ್ಯ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಚ್ ಅರುಣ್ ಕುಮಾರ್ ಹೊಸಮನಿ, ಸರ್ಕಾರಿ ನೌಕರ ಸಂಘದ ಸದಸ್ಯ ಮುತ್ತುರಾಜ್ ಮಾತನಾಡಿದರು, ಶಿಕ್ಷಕರಾದ ಕೆ.ಎಂ. ವಿರೇಶ, ಬೀ ಗಾಯಿತ್ರಿ, ಕೆ ತೇಜೇಶ್ವರಿ,ಜಿ ಬಸವೇಶ್ವರ, ರಾಮಾಂಜನೇಯ, ಪವನ್ ಕುಮಾರ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಬಿ.ಗಾಯತ್ರಿ ಕಾರ್ಯಕ್ರಮದ ನಿರೂಪಿಸಿದರು, ಇದೇ ಸಮಯದಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button