ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ – ಜನರಿಗೆ ಇನ್ನೂ ಮುಟ್ಟದ ಪಡಿತರ ಭಾಗ್ಯ.
ಮಾನ್ವಿ ನ 18

ರಾಜ್ಯ ಸರಕಾರ ಪ್ರತಿ ತಿಂಗಳು 10 ನೇ. ತಾರೀಖಿ ನೊಳಗೆ ನ್ಯಾಯಬೆಲೆ ಅಂಗಡಿಗೆ ಪಡಿತರ ಧಾನ್ಯವನ್ನು ಸರಬರಾಜು ಮಾಡಬೇಕೆಂದು ಸುತ್ತೋಲೆ ಹೊರಡಿಸಿದೆ. ಆದರೆ ರಾಯಚೂರು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಹಾಗು ಮಾನ್ವಿ ಆಹಾರ ಇಲಾಖೆ ಅಧಿಕಾರಿಗಳ ಕಳ್ಳಾಟ ದಿಂದಾಗಿ ಇದುವರೆಗೂ ಸರಬರಾಜು ಮಾಡದಿರುವುದು ಬೆಳಕಿಗೆ ಬಂದಿದೆ.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಹೆಚ್ಚು ಕಾರ್ಮಿಕರಿದ್ದಾರೆ. ಸರಕಾರ ಕೊಡುವ ಪಡಿತರ ಧಾನ್ಯವನ್ನೆ ನೆಚ್ಚಿಕೊಂಡು ಗ್ರಾಮೀಣ ಭಾಗದವರು ಜೀವನ ಮಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರ ಹತ್ತಿರ ನಮಗೆ ಸರಕಾರದ ಅಕ್ಕಿ ಯಾವಾಗ ಕೊಡುತ್ತೀರಾ ಎಂದು ಕೇಳಿದರೆ ಸರಕಾರದಿಂದ ಇನ್ನೂ ಬಂದಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲಕರು ಹೇಳುತ್ತಿಂದ್ದ ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ.ಸರಕಾರದ ಸುತ್ತೋಲೆ ರಾಜ್ಯದ ತಾಲೂಕ ಮತ್ತು ಜಿಲ್ಲೆಗಳಿಗೆ ಅನ್ವಹಿಸುವುದು ಬೇರೆ ಮಾನ್ವಿ ತಾಲೂಕಲ್ಲಿ ಇರುವುದು ಬೇರೆ, ಯಾಕಂದರೆ ರಾಯಚೂರು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಮಾನ್ವಿ ತಾಲೂಕ ಆಹಾರ ಇಲಾಖೆ ಅಧಿಕಾರಿಗಳು ಕುತಂತ್ರ ಮಾಡಿ ಕೊಂಡು ಪ್ರತಿ ತಿಂಗಳು ಪಡಿತರ ಎತ್ತುವಳಿಯನ್ನು ತಡವಾಗಿ ಪ್ರಾರಂಭ ಮಾಡಿ ಸರಕಾರದ ಹಿರಿಯ ಅಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚ್ಯುತಿ ಕೆಲಸ ಮಾಡುತ್ತಿದ್ದಾರೆ.

ಮಾನ್ವಿ ತಾಲೂಕು ಸೇರಿದಂತೆ ಸಿರಿವಾರ ತಾಲೂಕಲ್ಲಿ ನೂರಾರು ನ್ಯಾಯಬೆಲೆ ಅಂಗಡಿಗಳಿಗೆ ಮಾನ್ವಿ ಗೋದಾಮಿ ನಿಂದ ಸಾಗಣೆಯಾಗಬೇಕು. ಆದರೆ ಆಹಾರ ಇಲಾಖೆ ಅಧಿಕಾರಿಗಳ ಕಳ್ಳಾಟ ದಿಂದಾಗಿ ಜನರಿಗೆ ಪಡಿತರ ಮುಟ್ಟಿಸಬಾರದು ಎಂಬ ಉದ್ದೇಶ ಇಟ್ಟು ಕೊಂಡು ತಡವಾಗಿ ಎತ್ತುವಳಿ ಮಾಡುತ್ತಿದ್ದಾರೆಂದು ದಲಿತ ಸಂಘಟನೆ ಮುಖಂಡರ ಆರೋಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ನೀವು ಬಡ ಜನರಿಗೆ ತಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಮಾನ್ವಿ ತಾಲೂಕಿನ ಜನತೆಗೆ ಮುಟ್ಟಿಲ್ಲವೆಂದರೆ ಏನಿದರ ಅರ್ಥ, ಮಾನ್ವಿ ತಾಲೂಕಿನ ಜನತೆ ಸಿದ್ದರಾಮಯ್ಯ ಮಾಡಿದ ಅಕ್ಕಿ ಎಂದು ಅಮಾಯಕರು ಕೂಲಿ ಕಾರ್ಮಿಕರು ನೆನೆಸುತ್ತಾರೆ ನಿಮ್ಮನ್ನ. ಆದರೆ ನವೆಂಬರ್ ತಿಂಗಳ ಅಕ್ಕಿ ಇನ್ನೂ ನ್ಯಾಯ ಬೆಲೆ ಅಂಗಡಿಗೆ ಸೇರಿಲ್ಲ ಪಡಿತರ ಧಾನ್ಯ ಯಾವಾಗ ಮುಟ್ಟಬೇಕು ಜನರಾದರು ಸರತಿ ಸಾಲಲ್ಲಿ ನಿಂತು ಯಾವಾಗ ಪಡೆಯಬೇಕು ನೀವೆ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ. ಮಾನ್ವಿಯಲ್ಲಿ ಪಡಿತರ ಅಕ್ಕಿ ಸಾಗಣೆ ವಿಳಂಬವಾಗುವುದಕ್ಕೆ ಆಹಾರ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಹಾಗುಉ ಮಾನ್ವಿಯ ಆಹಾರ ಇಲಾಖೆ ಅಧಿಕಾರಿಗಳು ಸರಿಯಾಗಿ ಡ್ಯೂಟಿ ಮಾಡದೆ ಇರುವುದೆ ಈ ದುರಂತಕ್ಕೆ ಕಾರಣ ಎಂದು ಸಾಮಾಜಿಕ ಕಾರ್ಯಕರ್ತರ ಆರೋಪವಾಗಿದೆ.
ಕೋಟ್:-
ಮಾನ್ವಿಯಲ್ಲಿ ಆಹಾರ ಇಲಾಖೆ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರ ಬೇ ಜವಾಬ್ದಾರಿಯಿಂದಾಗಿ ಜನರಿಗೆ ಇದುವರೆಗೂ ಪಡಿತರ ಮುಟ್ಟಿಲ್ಲ. ತಿಂಗಳ ಕೊನೆಯ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗೆ ಸರಬರಾಜು ಮಾಡುತ್ತಾರೆ ಇದು ದೊಡ್ಡ ದುರಂತ.
:- ರಿಯಾಜ್ ನಾಯ್ಕ,
ಸಾಮಾಜಿಕ ಕಾರ್ಯಕರ್ತರು ಮಾನ್ವಿ.ಮಾನ್ವಿ ತಾಲೂಕಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸರ ಬರಬರಾಜುಗಿಲ್ಲದ ಕಾರಣ ಜನರಿಗೆ ನವೆಂಬರ್ ತಿಂಗಳ ಪಡಿತರ ಇದುವರೆಗೂ ಮುಟ್ಟಿಲ್ಲ. ಈ ದುರಂತಕ್ಕೆ ಮಾನ್ವಿಯ ಆಹಾರ ಇಲಾಖೆ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರ ದೌರ್ಬಲ್ಯವೇ ಕಾರಣ- ರಮೇಶ ಕರೇಗುಡ್ಡ, ದಲಿತ ಸೇನಾ ತಾಲೂಕ ಅಧ್ಯಕ್ಷರು ಮಾನ್ವಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ