“ಚೈತನ್ಯದ ಚಿಲುಮೆಗೆ ಮನದ ಸ್ಥಿರತೆ ಇರಲಿ”…..

ಮೋಸದ ಕಿಂಕರನ ನಾಶ ಮಾಡು
ಚಿಕ್ಕ ಸಹಾಯವಿದ್ದರೂ ಸೇವಕ
ಕಾಯಕದಲಿ ಪರಮಾನಂದವಿದೆ
ವಿಶ್ವಾಸ ನಂಬಿಕೆ ಆಚಾರವೇ ಶ್ರೇಷ್ಠ
ಸುಗುಣದ ಒಡಯನಾಗು
ಸುಮಾತು ಹೂವುಮಾಲೆ
ಮನಗಳು ಮೆಚ್ಚಿಸಲು ಟೊಳ್ಳುತನ ಬೇಡ
ಬೆಳವಣಿಗೆಗೆ ಋಣದ ಆಗಾಧತೆ ಸೇವೆ
ಮಾಡುವ ಅವಕಾಶ ಪರಮ ಭಾಗ್ಯ
ಸೋಹಂ ಇಲ್ಲದವನೇ ಯೋಗಿ
ನೀರು ಗಾಳಿ ಪ್ರಸಾದ ನಿದ್ರೆ ಪರಮಸುಖ
ಮನಸಾಕ್ಷಿ ಮನಮುಟ್ಟಿ ಹೇಳು ಮಾಡು
ವಿಕಲತೆ ಇರುವವರ ಮುಂದೆ ಕುಚೇಷ್ಟೆ ಬೇಡ
ಚೈತನ್ಯದ ಚಿಲುಮೆಗೆ ಮನದ ಸ್ಥಿರತೆ ಇರಲಿ
ಉತ್ತಮತನ ಯಾವುದಾದರೇನು ಶರಣಾಗಿ
ಜಗದ ಸರ್ವಸ್ವವೂ ನನ್ನದೆನಬೇಡ
ದೈರ್ಯವೇ ಧರ್ಮವಂತನ ಮಾರ್ಗ
ಸಂತಸದ ಕ್ಷಣಗಳೇ ಅತ್ಯುತ್ಸಾಹ
ತಲ್ಲೀನತೆಯೇ ಉಲ್ಲಾಸಿತ ಮನ.
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.