ಸಂವಿಧಾನ ಸಮರ್ಪಣಾ – ದಿನಾಚರಣೆ ಆಚರಣೆ.
ಬಳ್ಳಾರಿ ನ.26

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ದಿನಾಂಕ 26/11/2024 ರಂದು ಬಳ್ಳಾರಿ ನಗರದಲ್ಲಿ ಇರುವಂತ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ರವರ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ನಂದಿಹಾಳ 1949 ನೇ ನವಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದರೆ 1950 ರ ಜನವರಿ 26 ರಂದು ಅನುಷ್ಠಾನಕ್ಕೆ ತರಲಾಯಿತು. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತ ಗೊಳಿಸಿದ ಸರ್ವರಿಗೂ ಸಮಾನತೆಯಾಗಿದೆ ಮೂಲಭೂತ ಹಕ್ಕುಗಳು ಕರ್ತವ್ಯಗಳನ್ನು ನೀಡಿದೆ ಭಾರತಕ್ಕೆ ಸಂವಿಧಾನವೇ ದೊಡ್ಡ ಫಲ ಸಂವಿಧಾನ ಜಾರಿಯಿಂದ ನಮ್ಮ ದೇಶದಲ್ಲಿ ಹೊಸ ಶಕೆಯ ಉದಯವಾಯಿತು. ಭಾರತ ದೇಶಕ್ಕೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ರಚಿಸಿ ದಂತ ಸಂವಿಧಾನವು ವಿಶ್ವಕ್ಕೆ ಶ್ರೇಷ್ಠವಾಗಿದೆ ಯಾಕೆಂದರೆ ಭಾರತವನ್ನು ಸಾರ್ವಭೌಮ ಜಾತ್ಯತೀತ ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಈ ದೇಶದ ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ನ್ಯಾಯ ಮತ್ತು ಸ್ವಾತಂತ್ರ ಅಧಿಕಾರವಿದೆ ಎಲ್ಲಾ ಧರ್ಮದ ಪಂಗಡಗಳು ನಾಗರಿಕರು ರಕ್ಷಣೆಯ ಸಂವಿಧಾನ ಸಂರಕ್ಷಿಸುತ್ತಿದೆ ಆದುದರಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ದೇಶದ ನಾಗರಿಕರೆಲ್ಲರೂ ಚಿರ ಋಣಿಯಾಗಿ ಇರಬೇಕಾಗಿದೆ. ಮಲ್ಲಿಕಾರ್ಜುನ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು, ವಿಲಾಸ್ ಮಾನ್ಕರ್ ಯುವ ದಲಿತ ಮುಖಂಡರು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.