ಎ.ಪಿ.ಎಂ.ಸಿಯ ಸರ್ವ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ – ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ್.
ಕೊಟ್ಟೂರು ನ. 26

ಎಪಿಎಂಸಿ ಸಭಾಂಗಣದಲ್ಲಿ ನವೆಂಬರ್ 25 ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕರ್ನಾಟಕ ಸರ್ಕಾರ ದಿಂದ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ ಸನ್ಮಾನ್ಯ ಶ್ರೀ ಭೀಮನಾಯ್ಕ್ ಕೆಎಂಎಫ್ ಅಧ್ಯಕ್ಷರು ಮತ್ತು ಡಾ, ಶ್ರೀನಿವಾಸ್ ಎನ್.ಟಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ರವರು ಕೊಟ್ಟೂರು ದೊರೆ ಶ್ರೀ ಕೊಟ್ರೇಶನ ಆಶೀರ್ವಾದ ದಿಂದ ಹಾಗೂ ಕೃಷಿ ಉನ್ನತ ಮಾರುಕಟ್ಟೆ ಇರುವುದರಿಂದ ವ್ಯಾಪಾರ ವಹಿವಾಟು ಆರ್ಥಿಕ, ಸಾಮಾಜಿಕ ಮನ್ನಣೆಗೆ ಸಹಕಾರಿಯಾಗಿದೆ ಎಂದು ಅಭಿನಂದನಾ ಸ್ವೀಕರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಂತರ ಮಾತನಾಡಿ ಎಲ್ಲಾ ಸದಸ್ಯರು ಕೃಷಿ ಉತ್ಪನ್ನ ಮಾರಾಟ ನೀತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತಂದು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಿ, ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನಾಗಿಸಿ ಎಂದು ಹೇಳಿದರು.

ನಂತರ ಎಪಿಎಂಸಿಯ ಉಪಾಧ್ಯಕ್ಷರು ಪ್ರಾಸ್ತಾವಿಕ ನುಡಿ ನುಡಿದರು ಮತ್ತು ಅಧ್ಯಕ್ಷರು ಕೊಟ್ಟೂರು ಎಪಿಎಂಸಿ ಮಾರುಕಟ್ಟೆ ರೈತರಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ಶುದ್ಧ ನೀರಿನ ಘಟಕ, ಹೈಟೆಕ್ ಶೌಚಾಲಯ, 100 ಎಂ.ಟಿ ಸಾಮರ್ಥ್ಯದ ವೇಬ್ರಿಡ್ಜ್ ಇನ್ನೂ ಮುಂತಾದ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಅಭಿನಂದನೆ ಸಲ್ಲಿಸುವುದರ ಮೂಲಕ ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ದಾರುಕೇಶ್ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು,ರಾಜೇಂದ್ರ ಪ್ರಸಾದ್ ರಾಜ್ಯ ಬೀಜ ನಿಗಮದ ನಿರ್ದೇಶಕರು, ಬದ್ದಿ ರೇಖಾ ರಮೇಶ್ ಪ.ಪಂ ಅಧ್ಯಕ್ಷರು, ಎ.ನಂಜಪ್ಪ ಎಪಿಎಂಸಿಯ ಅಧ್ಯಕ್ಷರು, ಎಂ ಶಿವಣ್ಣ ಉಪಾಧ್ಯಕ್ಷರು ಎಪಿಎಂಸಿ, ವೀರಣ್ಣ ಎಪಿಎಂಸಿ ಕಾರ್ಯದರ್ಶಿ, ಗೂಳಿ ಮಲ್ಲಿಕಾರ್ಜುನ್ ಕೆಪಿಸಿಸಿ ಸದಸ್ಯರು, ಮರಿರಾಮಪ್ಪ ಪುರಸಭೆ ಅಧ್ಯಕ್ಷರು, ಅಡಿಕಿ ಮಂಜುನಾಥ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ, ಗೂಳಿ ಬಸಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬುದ್ಧಿ ಮರಿಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು, ತಾ.ಪಂ ನಾಮ ನಿರ್ದೇಶಕರು ಕಂದಗಲ್ಲು ಪರಶುರಾಮ್, ಶಿರಿಬಿ ಕೊಟ್ರೇಶ್, ಎಂ.ಓ ಕೊಟ್ರಯ್ಯ ಹಾಗೂ ಸರ್ವ ಸದಸ್ಯರು ಅಕ್ಕಿ ತೋಟೇಶ್, ಡಿಶ್ ಮಂಜುನಾಥ್, ಕೊಟ್ಟೂರು ತಾಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು