ಕಲಾ ಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ – ‘ದೇವು’ ಆಯ್ಕೆ.
ಬೆಂಗಳೂರು ನ.27

ನೂರಾರು ಚಲನ ಚಿತ್ರಗಳಿಗೆ ಪೋಸ್ಟರ ಡಿಸೈನ್ ಮೂಲಕವೆ ಜೀವಕಳೆ ತುಂಬಿ ಪ್ರೇಕ್ಷಕರನ್ನು ಸೆಳೆದು ಚಿತ್ರಗಳ ಯಶಸ್ಸಿಗೆ ಕಾರಣರಾಗುತ್ತಿರುವ ತೆರೆ ಮರೆಯ ಚಲನ ಚಿತ್ರ ಪ್ರಚಾರ ಕಲಾವಿದರಾದ ‘ದೇವು’ ಕಲಾ ಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ಹಾಸನ ಜಿಲ್ಲೆಯವರಾದ ದೇವು ಚಲನ ಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರಿನ ಕಲಾ ಭೂಮಿ ಪ್ರತಿಷ್ಠಾನ, ಕಲಾ ಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಬೆಂಗಳೂರಿನ ಕಲಾ ಗ್ರಾಮ ಸಂಸ್ಕೃತಿಕ ಭವನದಲ್ಲಿ ನವಂಬರ್ 29 ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ. ಇದಕ್ಕಾಗಿ ದೇವು ಆಪ್ತರು, ಹಿತೈಸಿಗಳು, ಚಲನ ಚಿತ್ರ ಪತ್ರಕರ್ತರಾದ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಮೊದಲಾದವರು ಅಭಿನಂದಿಸಿದ್ದಾರೆ.
*****
-ಪ್ರಭು ಗಂಜಿಹಾಳ.
ಮೊ-9448775346