ಸಂವಿಧಾನ ದಿನಾಚರಣೆ ಪ್ರಯುಕ್ತ ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಪ್ರತಿಭಟನೆ, AIBF B.T Act-1949 ರದ್ದುಗೊಳಿಸಿ – ದೇಶದಾದ್ಯಂತ ಜಿಲ್ಲಾಧಿಕಾರಿಗಳ ಮೂಲಕ ಪ್ರತಿಭಟನಾ ಮನವಿ.

ಹೊಸಪೇಟೆ ನ.27

ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ಸಂಘದ ವತಿಯಿಂದ ಸಂವಿಧಾನ ದಿನಾಚರಣೆ ಪ್ರಯುಕ್ತ ದೇಶವ್ಯಾಪಿ ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಪ್ರತಿಭಟನೆ ನಡೆಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್ ಬಣ್ಣದ ಮನೆಯವರು ಮಾತನಾಡಿ ಬುದ್ಧಗಯಾ ಜಗತ್ತಿನ ಬೌದ್ಧರಿಗೆಲ್ಲ ಪರಮ ಪವಿತ್ರವಾದ ಸ್ಥಳ. ರಾಜಕುಮಾರ ಸಿದ್ಧಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ. ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜ್ಯನಿಯವಾಗಿದೆ. ಸಾಮ್ರಾಟ್ ಅಶೋಕನು ಸೇರಿ ಈ ದೇಶದ ಅನೇಕ ರಾಜ ಮಹಾರಾಜರು ಮತ್ತು ಭರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಬೌದ್ಧ ಉಪಾಸಕರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರದ್ಧಾ ಪೂರ್ವಕ ಕೊಡುಗೆ ನೀಡಿರುವುದು ಇತಿಹಾಸ, ಕ್ರಿ.ಶ 1150 ರಿಂದ ಕ್ರಿ.ಶ 1800 ರನ್ನು ಬೌದ್ಧ ಚರಿತ್ರೆಯಲ್ಲಿ ಕತ್ತಲೆಯುಗ ಎಂದು ದಾಖಲಿಸಲಾಗಿದೆ. ಈ ಕರಾಳ ಕಾಲಘಟ್ಟದಲ್ಲಿ ಶಂಕರಾಚಾರ್ಯರ ಪಂಥಕ್ಕೆ ಸೇರಿದ ಗೋಸಾಯಿ ಗಮಂಡಿಗಿರಿ ಎಂಬ ಶೈವ ಬ್ರಾಹ್ಮಣ ಬುದ್ಧಗಯಾದ ಮಹಾಬೋಧಿ ಮಹಾವಿಹಾರ ಕ್ಷೇತ್ರವನ್ನು ಅತೀಕ್ರಮಣ ಮಾಡಿ ತನ್ನ ನೆಲೆ ಸ್ಥಾಪಿಸಿದನು.

ಭಾರತದ ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೆ ನಿರ್ವಹಿಸುತ್ತಿದ್ದಾರೆ. ಸಿಕ್ ಗುರುದ್ವಾರ ಕಾಯ್ದೆ 1925 ರ ಪ್ರಕಾರ ಕೇಶದಾರಿ ಸಿಖ್ ರಲ್ಲದವರು ಗುರುದ್ವಾರ ಆಡಳಿತ ಮಂಡಳಿ ಸದಸ್ಯರಾಗಲು ಸಾಧ್ಯವಿಲ್ಲ. ದಿ-ದರ್ಗಾ ಸ್ವಾಜಾ ಕಾಯ್ದೆ -1955 ರಂತೆ ಅನಾಫಿ ಮುಸ್ಲಿಂಮರು ಮಾತ್ರ ಅಜೀರ್ ದರ್ಗಾ ಕಮೀಟಿ ಸದಸ್ಯರಾಗುತ್ತಾರೆ. ಓರಿಸ್ಸಾದ ಜಗನ್ನಾಥ ಮಂದಿರ ಕಾಯ್ದೆ 1905, ಕೇರಳದ ಗುರುವಾಯುರ್ ದೇವಸ್ಥಾನ ಕಾಯ್ದೆ 1978, ಮಧ್ಯಪ್ರದೇಶದ ಮಹಾಕಾಲೇಶ್ವರ ದೇವಸ್ಥಾನ ಕಾಯ್ದೆ (ಉಜೈನಿ) 1982. ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ ಕಾಯ್ದೆ (ವಾರಣಾಸಿ) 1983, ಕಾಶ್ಮೀರದ ಶ್ರೀ ಮಾತಾ ವೈಷ್ಣವಿದೇವಿ ಮಂದಿರ ಕಾಯ್ದೆ 1988 ಮತ್ತು ತಿರುಪತಿ, ಶ್ರೀಶೈಲ ಹಾಗೂ ಇನ್ನಿತರ ಹಿಂದೂ ಧಾರ್ಮಿಕ ಕ್ಷೇತ್ರಗಳ ಕಾನೂನು ಪ್ರಕಾರ ಕೇವಲ ಹಿಂದೂಗಳು ಮಾತ್ರ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಆದರೇ, ಬೋದಗಯಾ ಟೆಂಪಲ್ ಆಕ್ಟ್ 1949 ರ ಪ್ರಕಾರ ಬೌದ್ಧರಿಗೆ ತಮ್ಮ ದೇವಾಲಯದ ನಿರ್ವಹಣೆ ಮಾಡಲು ಅಧಿಕಾರವಿಲ್ಲ. ಬುದ್ಧವಿಹಾರ ಹಿಂದೂಗಳ ನಿಯಂತ್ರಣದಲ್ಲಿದೆ. ಇದು ಬೌದ್ಧ ಧರ್ಮಿಯರ ಮತ್ತು ಅಂಬೇಡ್ಕರ್ ಅನುಯಾಯಿಗಳ ಹಾಗೂ ಭಾರತದ ಸಂವಿಧಾನವಾದಿ ಪ್ರಗತಿಪರ ಚಿಂತಕರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಆದ್ದರಿಂದ ಈ ದೇಶದ ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಸಂವಿಧಾನದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ-3,25,26 ಮತ್ತು 29 ನ್ನೂ ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ.ಆಕ್ಟ್ 1949 ನ್ನು ರದ್ದುಪಡಿಸಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸುತ್ತೇವೆ ಹೇಳಿದರು.ಈ ಸಂದರ್ಭದಲ್ಲಿ ಜೈಭೀಮ್ ವಿದ್ಯಾರ್ಥಿ ಯುವ ಜನ ಒಕ್ಕೂಟ ಜಿಲ್ಲಾಧ್ಯಕ್ಷರಾದ ಜೆ.ಶಿವಕುಮಾರ್, ಚಿಂತಕರಾದ ಪೀರ್‌ಬಾಷ, ಸಣ್ಣ ಮಾರೆಪ್ಪ, ಕಾಂಗ್ರೆಸ್ ಮುಖಂಡರಾದ ನಿಂಬಗಲ್ ರಾಮಕೃಷ್ಣ, ಜಯಪ್ಪ ಪಟ್ಟಿ, ನಿವೃತ್ತ ಶಿಕ್ಷಕರಾದ ಚಂದ್ರಶೇಖರ್, ಈರಣ್ಣ, ಕಾರಿಗನೂರು ರಾಮಕೃಷ್ಣ, ಆಟೋ ಯೂನಿಯನ್ ಮುಖಂಡರಾದ ರಾಮಚಂದ್ರ, ವೀರಭದ್ರನಾಯಕ, ವಿಶಾಲ್‌ಮ್ಯಾಸರ್‌, ಅಂಜಲಿಬೆಳಗಲ್, ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button