ಪಶು ವೈದ್ಯಾಧಿಕಾರಿ ಚಂದ್ರ ನಾಯ್ಕ್ ಅವರ – ನಿರ್ಲಕ್ಷ್ಯತನ ದಿಂದ ಕುರಿಗಳ ಸಾವು.

ಕೊಟ್ಟೂರು ಡಿ. 01

ಲಬೋ… ಲಬೋ… ಲಬೋ… ಲಬೋ…..

ಪಟ್ಟಣದ ಪಶು ಆಸ್ಪತ್ರೆ ಮುಂದೆ ಕುರಿ ಕಾಯುವವರು ಚಂದ್ರನಾಯ್ಕ್ ಸಹಾಯಕ ನಿರ್ದೇಶಕರ ವಿರುದ್ಧ ಆಕ್ರೋಶ, ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡ ಕುರಿಗಾಹಿಗಳು ಮತ್ತು ಮಾಲೀಕರು. ಕೊಟ್ಟೂರು ತಾಲೂಕಿನ ಹೊಸಕೋಡಿಹಳ್ಳಿ, ಸುಟ್ಟಕೋಡಿಹಳ್ಳಿ, ರಾಂಪುರ, ಬೋರನಹಳ್ಳಿ, ಹಾರಾಳು ಇನ್ನೂ ಸುತ್ತಮುತ್ತಲು ಹಳ್ಳಿಗಳಲ್ಲಿ ಕಾಲುಬಾಯಿ, ನೀಲಿ ನಾಲಿಗೆ ರೋಗ, ಮುಂತಾದ ರೋಗಗಳಿಂದ ಸುಮಾರು ಈ ಭಾಗದಲ್ಲಿ 1500 ಕುರಿಗಳು ಸತ್ತಿರುತ್ತವೆ. ಕುರಿಯ ಮಾಲೀಕರು ಕೊಟ್ಟೂರಿನಲ್ಲಿ ಪಶು ಆಸ್ಪತ್ರೆ ಇದೆ ಎಂದು ತಿಳಿದು. ಪಶು ವೈದ್ಯರಿಗೆ ಫೋನು ಮಾಡಿ ಕರೆದರೆ ಬರುವುದಿಲ್ಲ ನಮಗೆ ಕುರಿ ಬದುಕಿಸಿ ಕೊಳ್ಳಲು ಔಷಧಿ ನೀಡುತ್ತಿಲ್ಲ ನೆಪ ಮಾತ್ರಕ್ಕೆ ಆಸ್ಪತ್ರೆಯಲ್ಲಿ ಕೆಲವು ಔಷಧಿಗಳನ್ನು ಇಟ್ಟು ಇಂದು ನಾಳೆ ಬಾ ಎನ್ನುತ್ತಾರೆ. ನಮ್ಮ ಗೋಳು ಕೇಳುವರು ಯಾರು…..? ಚಂದ್ರನಾಯ್ಕ್ ವೈದ್ಯಾಧಿಕಾರಿ ತಿರುಪತ್ತಿಗೆ ತಲೆ ಬೊಳಿಸಿ ಕೊಳ್ಳಲು ಹೋಗಿ ಕುರಿಗಳ ಸಾವಿನ ಮೂಲಕ ಕೊಟ್ಟೂರು ತಾಲೂಕನ್ನು ಬಳುಸುತ್ತಿರುವರಂತೆ. ದಯವಿಟ್ಟು ಕಾರ್ಯಕ್ರಮಗಳಲ್ಲಿ ಕುರಿಗಳನ್ನು ಹೊತ್ತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪೋಸ್ ಕೊಡುವುದಲ್ಲ ನಮ್ಮಂತ ಬಡವರ ಕಣ್ಣೀರು ಒರೆಸುವ ಅಧಿಕಾರಿಗಳನ್ನು ಕೊಡಿ ಎಂದು ಮೂಗಣ್ಣ ಪರಸಪ್ಪ ಮಲ್ಲಿಕಾರ್ಜುನ ಇನ್ನೂ ಮುಂತಾದ ಕುರಿ ಕಾಯುವವರು ನಮ್ಮ ಸುದ್ದಿ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button