ಅವಳಿ ಶ್ರೀಗಳ ತುಲಭಾರ ಕಾರ್ಯಕ್ರಮಕ್ಕೆ ಶಾಸಕರಿಗೆ – ಕಲಾ ಭಾರತಿ ಕಲಾ ಸಂಘದ ಅಧ್ಯಕ್ಷರಿಂದ ಆಹ್ವಾನ.
ನರಸಿಂಹಗಿರಿ ಡಿ.06

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಡಾ, ಎನ್.ಟಿ ಶ್ರೀನಿವಾಸ್ ನಿವಾಸದಲ್ಲಿ ಶಾಸಕರನ್ನು ಭೇಟಿಯಾಗಿ ಅವಳಿ ಶ್ರೀಗಳ ತುಲಾಭಾರ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಚಾಲನೆ ನೀಡಲಾಯಿತು. ದಿನಾಂಕ 23.12.2024 ನೇ. ಸ್ಥಳ ಬಸವೇಶ್ವರ ಶಾಲಾ ಅವರಣ ಹಿರೇ ಹೆಗ್ಡಾಳ್. ಕಲಾ ಭಾರತಿ ಕಲಾ ಸಂಘ ಹಿರೇ ಹೆಗ್ಡಾಳ್ ಇವರ ವತಿಯಿಂದ ಅವಳಿ ಶ್ರೀಗಳ ತುಲಾಭಾರ ಕಾರ್ಯಕ್ರಮ ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು. ಮಾನ್ಯ ಶಾಸಕರಿಗೆ ಸಂಘದ ವತಿಯಿಂದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲಾಯಿತು. ಈ ಕಾರ್ಯಕ್ರಮದ ಅಂಗವಾಗ ಮಾನ್ಯ ಜನಪ್ರಿಯ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ಇವರು ಮಾತನಾಡಿ ಅವಳಿ ಶ್ರೀಗಳ ತುಲಾಭಾರ ಕಾರ್ಯಕ್ರಮ ಮಾಡುವುದು ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ಇಂಥ ಕಾರ್ಯಕ್ರಮಗಳನ್ನು ಹಾಗೂ ಪ್ರತಿಭೆಗಳನ್ನು ಗುರುತಿಸುವುದು ಸಾಮಾನ್ಯ ಮಾತಲ್ಲ ಹಾಗೂ ಕ್ಷೇತ್ರದ ಕಲಾವಿದರಿಗೆ ಬೈಲಾಟ ನಾಟಕ ಇಂತಹ ಪ್ರತಿಭೆಗಳಿಗೆ ಶ್ರಮಿಸುವೆ ಸಾರ್ವಜನಿಕರಿಗೆ ಪ್ರತಿಯೊಬ್ಬ ನಾಗರಿಕರಿಗೂ ನಮ್ಮ ಸೇವೆ ಇರುತ್ತದೆ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಮಾಡುವುದರಿಂದ ಅರ್ಥ ಪೂರ್ಣವಾಗಿ ಮಾಡಿ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ಸಂತೋಷ್ ಕುಮಾರ್ ಐ.ವೈ ಬಳ್ಳಾರಿ ಬಣಕಾರ್ ಮೂಗಪ್ಪ ರಂಗಭೂಮಿ ಕಲಾವಿದರು ಕಲಾ ಭಾರತಿ ಕಲಾ ಸಂಘದ ಅಧ್ಯಕ್ಷರು ಹಾಗೂ ಪತ್ರಕರ್ತರು ಈ ಸಂದರ್ಭದಲ್ಲಿ ಗುಂಡಮುಣುಗು ತಿಪ್ಪೇಸ್ವಾಮಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಪಾಪಣ್ಣ ಪಟ್ಟಣ ಪಂಚಾಯತಿ ಸದಸ್ಯರಾದ ಸಚಿನ್ ಕುಮಾರ್ ಹಿರೇ ಹೆಗ್ಡಾಳ್ ಗ್ರಾಮದ ಮುಖಂಡರಾದ ಬತ್ತನಹಳ್ಳಿ ಬಸವರಾಜ್ ಕೌದಿ ವಿಜಯ್ ಕುಮಾರ್ ಇತರರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ