ದೇಶಕ್ಕೆ ಅತಿ ಶ್ರೇಷ್ಠ ಸಂವಿಧಾನ ನೀಡಿದಂತ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಎಲ್ಲಾರು ಚಿರ ಋಣಿಯಾಗಿರ ಬೇಕು – ಪಿ.ಎಸ್.ಐ ಎಂ.ಎನ್ ಸಿಂಧೂರ.
ಬಳ್ಳಾರಿ ಡಿ.07

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಹಾಗೂ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವ ಜ್ಞಾನಿಯಾದಂತ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ 68 ನೇ. ಮಹಾ ಪರಿನಿರ್ವಾಣ ಅಂಗವಾಗಿ ದಿನಾಂಕ 6/12/2024 ರಂದು ಸಾಯಂಕಾಲ ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಹಾಗೂ ಛಲವಾದಿ ಮಹಾಸಭಾ ಸುಮಾರು ವಿದ್ಯಾರ್ಥಿಗಳು ಸೇರಿಕೊಂಡು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಮೇಣದ ಬತ್ತಿ ಹಚ್ಚಿ ಪೂಜಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಎಂ.ಎನ್ ಸಿಂಧೂರ ಇವರು ಬಹುದೊಡ್ಡ ಭಾರತ ದೇಶಕ್ಕೆ ಜಗತ್ತಿಗೆ ಶ್ರೇಷ್ಠವಾದಂತ ಸಂವಿಧಾನವನ್ನು ಬರೆದಂತ ಈ ಶ್ರೇಷ್ಠ ಸಂವಿಧಾನದಿಂದಲೇ ಎಲ್ಲಾ ಧರ್ಮದ ಹಾಗೂ ಎಲ್ಲಾ ಪಂಗಡಗಳ ನಾಗರೀಕರು ಸುರಕ್ಷಿತವಾಗಿ ಜೀವನ ಸಾಗಿಸಲಿಕ್ಕೆ ಕಾರಣವಾಗಿದೆ ಹಾಗೂ ಭಾರತ ದೇಶದ ಸಂವಿಧಾನದಿಂದಲೇ ದೇಶ ಅಭಿವೃದ್ಧಿ ದೇಶವಾಗಿ ಮುನ್ನಡೆದು ಕೊಂಡು ಹೋಗುತ್ತಿದೆ ಹಾಗೂ ಸಂವಿಧಾನದಿಂದಲೇ ಮಾತ್ರ ಎಲ್ಲರಿಗೂ ನ್ಯಾಯವನ್ನು ಒದಗಿಸಿ ಕೊಡ ಬೇಕೆಂದರೆ ಸಂವಿಧಾನವೇ ಕಾರಣ ಎಂದು ಹೇಳಿದರು. ರಾಜಕುಮಾರ್ ಮೋರೆ ಬೀದರ್ ದಲಿತರ ಮೇಲೆ ನಿರಂತರವಾಗಿ ಶೋಷಣೆ ದಬ್ಬಾಳಿಕೆ ಅತ್ಯಾಚಾರ ಅನ್ಯಾಯಕ್ಕೆ ಒಳ ಪಟ್ಟಿದ್ದು ಜಾತಿನಿಂದಲೇ ಅವಮಾನ ಈ ಎಲ್ಲವನ್ನು ಮಟ್ಟ ಹಾಕ ಬೇಕಾದರೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ದಲಿತರ ಎಲ್ಲರೂ ಉನ್ನತ ಶಿಕ್ಷಣ ಪಡೆದು ಕೊಂಡು ಎಲ್ಲಾ ಶೋಷಣೆಗಳು ಅನ್ಯಾಯಗಳು ತಡೆದು ನಿಲ್ಲಿಸಲಿಕ್ಕೆ ಸಾಧ್ಯವಾಗುತ್ತದೆ ಏಕೆಂದರೆ ಶಿಕ್ಷಣ ಎಂಬುದು ಹುಲಿಯ ಹಾಲಿನಂತಿದ್ದಂತೆ ಹುಲಿಯ ಹಾಲನ್ನು ಕುಡಿದವರು ಹುಲಿಯ ಹಾಗೆ ಗರ್ಜಿಸಲೇ ಬೇಕಾಗುತ್ತದೆ ಎಂದು ಹೇಳಿದರು. ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಹು ಸಂಖ್ಯಾತ ಅತಿ ಹೆಚ್ಚಿನ ಜನ ಸಂಖ್ಯೆಯಲ್ಲಿ ಈ ದೇಶದಲ್ಲಿ ದಲಿತರಿದ್ದೇವೆ ದಲಿತರೇಲ್ಲಾರು ಒಟ್ಟುಗೂಡಿ ಕೊಂಡು ಒಮ್ಮತಕ್ಕೆ ಬಂದರೆ ಈ ದೇಶವನ್ನು ದಲಿತರೆ ಆಳುವಂತರಾಗುತ್ತಾರೆ ಎಂದು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸಾಗಿತ್ತು ಆದರೆ ದುರದೃಷ್ಟ 3/4 ಪರ್ಸೆಂಟ್ ಜನ ಸಂಖ್ಯೆಯಲ್ಲಿ ಇರುವಂತಹ ಮೇಲ್ವರ್ಗದವರು ಇವತ್ತು ಈ ದೇಶವನ್ನು ಆಳುತ್ತಿದ್ದಾರೆ ಇದು ದುರಂತದ ಸಂಗಾತಿಯಾಗಿದೆ. ಸಿ.ಶಿವಕುಮಾರ ಜಿಲ್ಲಾಧ್ಯಕ್ಷರು ಛಲವಾದಿ ಮಹಾ ಸಭಾ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಓದಲಿಕ್ಕೆ ನಾನಾ ರೀತಿಯ ಕಷ್ಟಗಳಿದ್ದರೂ ಸಹ ಕಷ್ಟಗಳಿಗೆ ಎದೆಗುಂದದೆ ಈ ದೇಶದಲ್ಲಿ ಅತಿ ಹೆಚ್ಚಿನ ಉನ್ನತ ಶಿಕ್ಷಣ ಪಡೆದು ಬಹುದೊಡ್ಡ ಭಾರತ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಬರೆದು ಕೊಟ್ಟರು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಂದಂತ ಬಡ ನೂರಾರು ಸುನಿತಾ ರಾಜ್ ಮೋರೆ ಅಧ್ಯಕ್ಷರು ಸುಬೇದರಾಮ್ ಜಿ ಮೆಮೊರಿಯಲ್ ಆಫ್ ರಾಷ್ಟ್ರೀಯ ಎಜುಕೇಶನ್ ಟ್ರಸ್ಟ್ ವತಿಯಿಂದ ನೂರಾರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಿಸಿ ಇಲ್ಲಿ ಸೇರಿದಂತಹ ಎಲ್ಲಾ ಈ ನನ್ನ ವಿದ್ಯಾರ್ಥಿಗಳೇ ನೀವು ಸಮಯವನ್ನು ವ್ಯರ್ಥ ಮಾಡಲಾರದೆ ಶಿಕ್ಷಣಕ್ಕೆ ಬಹಳ ಮಹತ್ವ ಕೊಡಿ ಎಂದು ಹೇಳಿದರು. ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜಶೇಖರ ನಿರ್ದೇಶಕರು ಐಎಎಸ್ ಐಪಿಎಸ್ ಕೆಎಎಸ್ ತರಬೇತಿ ಸಂಸ್ಥೆ ಮಾನಯ್ಯ ಬಿ.ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಲೋಕೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಛಲವಾದಿ ಮಹಾಸಭಾ ವೆಂಕಟೇಶ್ ಜಿಲ್ಲಾ ಜಂಟಿ ಕಾರ್ಯದರ್ಶಿ ಛಲವಾದಿ ಮಹಾ ಸಭಾ ಡಿ.ರಾಮಕೃಷ್ಣ ಜಿಲ್ಲಾ ಕಾರ್ಯದರ್ಶಿ ಛಲವಾದಿ ಮಹಾ ಸಭಾ ಮಲ್ಲಿಕಾರ್ಜುನ ಬಿ.ಗೋನಾಳ್ ದಲಿತ ಮುಖಂಡ ಪೊಲೀಸ್ ಅಂಜಿನಪ್ಪ ರೆಡ್ಡಿ ಪೊಲೀಸ್ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ನೀಡಿ ಅನುಕೂಲ ಮಾಡಿದ್ದಕ್ಕೆ ಪೋಲಿಸ್ ಇಲಾಖೆಗೆ ಅಭಿನಂದನೆಗಳನ್ನು ಹೇಳಲಾಯಿತು. ಇನ್ನಿತರ ಮುಖಂಡರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.