ಎನ್‌.ಪಿ ಸಂಕೀರ್ತಿ ಕುಮಾರ್ ಶ್ರೀಮತಿ ಹಿಂದುಮತಿ ಇವರ ವಿವಾಹ ಬಳ್ಳಾರಿ – ಅಲ್ಲಂ ಭವನದಲ್ಲಿ ಜರುಗಿತು.

ಮೊಳಕಾಲ್ಮುರು ಡಿ.07

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಎನ್.ವೈ ಗೋಪಾಲಕೃಷ್ಣ ಅವರ ಸಹೋದರ ಮಗನಾದ ಎನ್.ಪಿ. ಸಂಕೀತ್೯ ಕುಮಾರ್ ಜೊತೆ ಶ್ರೀಮತಿ ಹಿಂದುಮತಿ ಅವರ ವಿವಾಹ ಮಹೋತ್ಸವವನ್ನು ಬಳ್ಳಾರಿ ನಗರದ ಅನಂತರಪುರ ರಸ್ತೆಯಲ್ಲಿ ಬರುವ ಅಲ್ಲಂ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.‌ ದಿನಾಂಕ; 06/12/2024 ರಂದು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್. ಎನ್.ಟಿ ಅವರು ಪಾಲ್ಗೊಂಡು ನವ ದಂಪತಿಗಳು ಸುಖ, ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯಿಂದ ನೂರು ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಲಿ ಎಂದೂ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಎನ್. ವೈ ಗೋಪಾಲಕೃಷ್ಣ, ಮಾಜಿ ಸಂಸದರಾದ ಎನ್.ವೈ ಹನುಮಂತಪ್ಪ, ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಟಿ.‌ರಘುಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ವೆಂಕಟೇಶ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ಕೆ.ಟಿ. ತಿಪ್ಪೇಸ್ವಾಮಿ, ಬಂಧು ಮತ್ತು ಬಳಗದವರು, ಮುಖಂಡರು ಉಪಸ್ಥಿತರಿದ್ದರು. ‌ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button