68 ನೇ. ಮಹಾ ಪರಿನಿರ್ವಾಣ ದಿಬ್ಬಾಣದ ಪ್ರಯುಕ್ತ ಮೇಣದ ದೀಪ ಹಚ್ಚುವುದರ ಮೂಲಕ ಗೌರವ ಪೂರ್ವಕ – ನೀಲಿ ನಮನ ಸಲ್ಲಿಸಿದ ಮುಖಂಡರು.
ಹೊಸಕೆರೆ ಡಿ.07

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ 68 ನೇ. ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕತ್ತಲಿನಿಂದ ಬೆಳಕಿನ ಕಡೆಗೆ ಹಿಂದುಳಿದವರ ಶೋಷಿತರ ಧಮನಿತರ ಹಾಗೂ ಪ್ರಪಂಚನೇ ಮೆಚ್ಚುವಂತ ಮಹಾ ನಾಯಕ ಡಾ, ಬಿ.ಆರ್ ಅಂಬೇಡ್ಕರ್ ರವರಿಗೆ ಮೇಣದ ಬತ್ತಿ ಹಚ್ಚಿ ಹೊಸಕೇರಿಯ ದಲಿತ ಮುಖಂಡರಗಳು ಗೌರವ ಪೂರ್ವಕ ನೀಲಿ ನಮನವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಎಸ್.ಮರಿಸ್ವಾಮಿ, ಹೆಚ್.ಜಿ ಸ್ವಾಮಿ, ಹೆಚ್.ಹೆಚ್. ಪರುಶು ರಾಮ್, ಬರ್ಮಪ್ಪ, ದೊಡ್ಡ ಬಸಪ್ಪ, ಸಕ್ರಪ್ಪ, ಮಾಜಿ ಸದಸ್ಯರು ಮರಿಯಪ್ಪ, ಪ್ರಭು, ವೀರೇಶ್, ವೀರಪ್ಪ, ಕೋಟೆಪ್ಪ, ಪಕ್ಕೀರಪ್ಪಾ ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ