ಪ್ಲಾಸ್ಟಿಕ್ ಮುಕ್ತ ತರೀಕೆರೆ ಮಾಡುತ್ತೇವೆ – ವಸಂತ್ ಕುಮಾರ್.
ತರೀಕೆರೆ ಡಿ. 07

ಪ್ಲಾಸ್ಟಿಕ್ ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ರವರು ಹೇಳಿದರು. ಅವರು ಇಂದು ಪುರಸಭಾ ಸಿಬ್ಬಂದಿ ಧಿಡೀರ್ ಎಂದು ಅಂಗಡಿಗಳ, ಹೋಟೆಲ್ ಗಳ, ಮಧ್ಯದ ಅಂಗಡಿಗಳ ಮೇಲೆ ತಪಾಸಣಾ ಮಾಡಿದಾಗ ಸುಮಾರು 40 ಕೆ.ಜಿ ಪ್ಲಾಸ್ಟಿಕ್ ಚೀಲಗಳು ಉತ್ಪನ್ನಗಳನ್ನು ಅಮಾನತ್ತು ಮಾಡಲಾಗಿದೆ. ಸುಮಾರು 32 ಸಾವಿರ ರೂ.ಗಳು ದಂಡವನ್ನು ವಸಲಿ ಮಾಡಲಾಗಿದೆ ಎಂದು ಹೇಳಿದರು. ತರೀಕೆರೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡುತ್ತೇವೆ ಎಂದು ಹೇಳಿದರು. ಈ ಕುರಿತು ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ ರವರು ಮಾತನಾಡಿ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಸಾರ್ವಜನಿಕರು ಅಂಗಡಿ ಮುಗ್ಗಟ್ಟುಗಳು ಮತ್ತು ಹೋಟೆಲ್ ಮಾಲೀಕರು ಹಾಗೂ ಮಧ್ಯದ ಅಂಗಡಿಗಳ ಮಾಲೀಕರುಗಳು ಸಹಕರಿಸ ಬೇಕು ತಪ್ಪಿದಲ್ಲಿ ನಿಮಗೆ ನೀಡಿರುವ ಪರವಾನಿಗೆ ಗಳನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು. ಪುರಸಭಾ ಪರಿಸರ ಅಭಿಯಂತರರಾದ ತಸ್ಲೀಮ್ ಮಾತನಾಡಿ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಗಮನ ನೀಡುತ್ತಿದ್ದೇವೆ ಎಂದು ಹೇಳಿದರು. ಪುರಸಭಾ ನಾಮನಿರ್ದೇಶನ ಸದಸ್ಯರಾದ ಆದಿಲ್ ಪಾಷಾ ರವರು ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತಿದೆ ಪ್ರಾಣಿ ಸಂಕುಲಗಳು ಸಂಕಷ್ಟದಲ್ಲಿ ಸಿಲುಕುತ್ತಿವೆ ಆದ್ದರಿಂದ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸ ಬೇಕೆಂದು ಕಾಯ್ದೆ ತಂದಿದ್ದರು ಸಾರ್ವಜನಿಕರು ಪಾಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮುಖಂಡರಾದ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಪ್ಲಾಸ್ಟಿಕ್ ವಸ್ತುಗಳು ಸಾವಿರಾರು ವರ್ಷಗಳ ಕಾಲ ಕೊಳೆಯುವುದಿಲ್ಲ ಹಾಗೆಯೇ ಭೂಮಿಯಲ್ಲಿ ಉಳಿದು ಭೂಮಿಯ ಫಲವತ್ತತೆಯನ್ನು ಹಾಳು ಮಾಡುತ್ತದೆ ಇದರಿಂದ ಭೂಮಿಯ ಮೇಲೆ ವ್ಯತಿರಿಕ್ತವಾದ ಪರಿಣಾಮಗಳು ಬೀರುತ್ತಿವೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು