ಅಧಿಕಾರಿಗಳಿಗೆ ಹೋರಾಟಗಾರರಿಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಅಂಬೇಡ್ಕರ್ – ಡಾ, ಕೆ.ಜೆ ಕಾಂತರಾಜ್.

ತರೀಕೆರೆ ಡಿ.07

ಪ್ರಪಂಚದಲ್ಲಿ ಪ್ರತಿ ದಿನ ಪ್ರತಿ ಕ್ಷಣ ಗೌರವಿಸಲ್ಪಡುತ್ತಿರುವ ವ್ಯಕ್ತಿ ಎಂದರೆ ಡಾ, ಬಿ.ಆರ್ ಅಂಬೇಡ್ಕರ್ ಅವರು ಎಂದು ಉಪ ವಿಭಾಗಾಧಿಕಾರಿ ಡಾ, ಕೆ.ಜೆ ಕಾಂತರಾಜ್ ರವರು ಹೇಳಿದರು. ಅವರು ಅಂಬೇಡ್ಕರ್ ಅಭಿಮಾನಿಗಳು ವಿವಿಧ ದಲಿತ ಪರ ಸಂಘಟನೆಗಳು ಶುಕ್ರವಾರ ರಾತ್ರಿ ಪಟ್ಟಣದ ಪುರಸಭಾ ಆವರಣದಿಂದ ಮಿನಿ ವಿಧಾನ ಸೌದದ ಎದುರು ಇರುವ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ವರೆಗೂ ಮೇಣದ ಬತ್ತಿ ಬೆಳಕು ಹಿಡಿದು ಮೆರವಣಿಗೆ ಬಂದು ಪುತ್ತಳಿ ಬಳಿ ಮೇಣದ ಬತ್ತಿ ಹಚ್ಚಿ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದ ನಂತರ ಮಾತನಾಡಿದರು. ಡಾ, ಬಿ.ಆರ್ ಅಂಬೇಡ್ಕರ್ ರವರು ಸರ್ಕಾರಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಗೆ ಹೋರಾಟಗಾರರಿಗೆ ವಕೀಲರಿಗೆ ಜನ ಪ್ರತಿನಿಧಿಗಳಿಗೆ ಹೀಗೆ ವಿವಿಧ ರಂಗದ ಎಲ್ಲರಿಗೂ ಸ್ಪೂರ್ತಿ ಯಾಗಿದ್ದಾರೆ.

ಅವರು ನೀಡಿದ ಸಂವಿಧಾನ ಸರ್ವರು ಸಹಬಾಳ್ವೆ ಯಿಂದ ಇರ ಬೇಕೆಂಬುದಾಗಿದೆ ಎಂದುರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಅಂಬೇಡ್ಕರ್ ರವರು ಜ್ಞಾನದ ಭಂಡಾರ ಅವರು ಅಭ್ಯಾಸ ಮಾಡಿದ ವಿಷಯವಿಲ್ಲ, ಬ್ಯಾರಿಸ್ಟರ್ ಆಗಿ ಆರ್ಥಿಕ ತಜ್ಞರಾಗಿ ವಕೀಲರಾಗಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಮಹಿಳೆಯರ ಸಮಾನತೆಗಾಗಿ ಹೋರಾಟ ಮಾಡಿ ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದರು. ಪ್ರಪಂಚದ ಹೆಚ್ಚು ದೇಶಗಳು ಅಂಬೇಡ್ಕರ್ ಅವರನ್ನು ಸ್ಮರಿಸುತ್ತದೆ ಎಂದು ಹೇಳಿದರು. ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಕೃಷ್ಣಮೂರ್ತಿ ರವರು ಹಾಗೂ ತಹಸಿಲ್ದಾರ್ ವಿಶ್ವಜಿತ್ ಮೆಹ್ತಾ, ಡಿಪ್ಟಿ ತಹಶೀಲ್ದಾರ್ ಕೃಷ್ಣಮೂರ್ತಿ, ಶಿಕ್ಷಕರಾದ ಶೇಖರಪ್ಪ, ಚೆನ್ನ ನಾಯಕ, ಎಸ್.ಎನ್ ಸಿದ್ದರಾಮಪ್ಪ ದಲಿತ ಸಂಘಟನೆಗಳ ವಿವಿಧ ಮುಖಂಡರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button