ಸರ್ಕಾರ ದಿಂದ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿಲ್ಲ – ಬಲಿಷ್ಠ ಮಹಿಳೆ ವಿಜಯವಾಣಿ ಯಿಂದ ಅಸಮಾಧಾನ.

ಹೊಸಪೇಟೆ ಡಿ.07

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ದಿಂದ ಕ್ರೀಡೆಗಳಿಗೆ ಮತ್ತು ಮಹಿಳಾ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವೆಟ್ ಲಿಫ್ಟಿಂಗ್ ನಲ್ಲಿ ಭಾರತದ ಬಲಿಷ್ಠ ಮಹಿಳೆ ಎಂದು ಬಿರುದು ಪಡೆದಿರುವ ವಿಜಯವಾಣಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ನಗರದ ಡಾನ್ ಬಸ್ಕೊ ಸಂಸ್ಥೆ ಐ.ಸಿ.ಎಸ್.ಐ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರಿಡೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದು ಸರ್ಕಾರಗಳಿಂದ ಕ್ರೀಡೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದು. ವ್ಯಾಯಾಮ ಮಾಡುವುದರಿಂದ ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳಲು ಮತ್ತು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಒಂದು ಸಮಯದಲ್ಲಿ ನಾನು ಥೈರಾಯಿಡ್ ನಿಂದ ಬಳುಲುತ್ತಿರುವಾಗ ಗಾಯಗೊಂಡು ಸಾಯುವ ಹಂತಕ್ಕೆ ತಲುಪಿದ್ದೆ ವೈದ್ಯರ ಸಲಹೆ ಮೇರೆಗೆ ಬದುಕ ಬೇಕೆನ್ನುವ ಛಲ ದಿಂದ ತೂಕ ಇಳಿಸಲು ಜಿಮ್ ಗೆ ಹೋಗಿ ನಿರಂತರ ವ್ಯಾಯಾಮ ಮಾಡಿ ವೆಟ್ ಲಿಫ್ಟಿಂಗ್ ಆಯ್ಕೆ ಮಾಡಿ ಕೊಂಡು ನಿರಂತರ ಶ್ರಮದಿಂದ ಇಂದು ದೇಶದ ಬಲಿಷ್ಠ ಮಹಿಳೆಯಾಗಿ ಹೊರ ಹೊಮ್ಮಿದ್ದೇನೆ ಎಂದು ತಮ್ಮ ಅನುಭವ ಹಂಚಿ ಕೊಂಡರು. ಛತ್ರಪತಿ ಶಿವಾಜಿಯನ್ನು ಸೋಲಿಸಿದ್ದು ಕರ್ನಾಟಕದ ಮಲ್ಲಮ್ಮ ಬಾಗೇವಾಡಿ ಎನ್ನುವ ಒಬ್ಬ ವೀರ ಮಹಿಳೆ ಅವರು ಶಿವಾಜಿಯ ವಿರುದ್ಧ 27 ದಿನಗಳ ಕಾಲ ಯುದ್ಧ ಮಾಡಿ ಜಯಿಸಿದವರು. ಇಲ್ಲಿ ಶಿವಾಜಿಯನ್ನು ಮಾತ್ರ ಪ್ರಚಾರ ಮಾಡಲಾಗಿದೆ ಆ ಮಹಿಳೆಯ ಸುಳಿವೇ ಇಲ್ಲಿ ಇಲ್ಲ, ಪಿ.ಟಿ ಉಷಾ ಅವರನ್ನೇ ಸೋಲಿಸಿದ ಅಶ್ವಿನಿ ನಾಚಪ್ಪ ಯಾರಿಗೂ ಗೊತ್ತಿಲ್ಲ ಇಂಥ ಮಹಿಳೆಯರ ಸಾಧನೆಗಳು ಮುಚ್ಚಿ ಹೋಗುವುದಕ್ಕೆ ಕಾರಣ ನಮ್ಮ ಕರ್ನಾಟಕದಲ್ಲಿ ಕ್ರೀಡೆಗೆ ಪ್ರೋತ್ಸಾಹ ಸಿಗದಿರುವುದೇ ಕಾರಣವಾಗಿದೆ ಎಂದರು. ಕ್ರೀಡೆಯನ್ನು ಮೈಗೂಡಿಸಿ ಕೊಂಡು ಪೊಲೀಸ್ ಹುದ್ದೆಗೆ ಸೇರಿ ಸೇವೆ ಸಲ್ಲಿಸುತ್ತಿರುವ ದುರುಗಮ್ಮ, ಸುಧಾ, ರಂಜಿತಾ, ವಾಣಿ, ಶಾಂತ ಎನ್ನುವ ಪೊಲೀಸ್ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ರೋಷನ್, ಪ್ರವೀಣ್, ಎಲಿಜಿಬೆತ್ ರಾಣಿ ನೂರಾರು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button