“ಅಂದದ ಚಂದದ ಜೀವನವು ನಿಜ ಕ್ಷಣಗಳ ಬಳಕೆ”…..

ಅಂದದ ಅರಮನೆಗಿಂತ
ಆನಂದದ ಮನ ಚಂದ
ಇರಬೇಕ ಸೃಷ್ಠಿಯ ಸೌಂದರ್ಯ ಸಿರಿಯ
ಮಡಿಲಲಿ
ಈಶ್ವರನ ನೆನೆದೊಡೆ ಜೀವನ ಪಾವನ
ಉತ್ತಮತನ ಜೀವಮಾನದ ಶ್ರೇಷ್ಠತನ
ಊರಿಗೆ ಉಪಕಾರಿಯಾದರೂ
ಜನ ತೆಗಳೊದು ಶತಸಿದ್ಧ
ಎಲ್ಲರಲ್ಲೂ ಬೆರೆಯುವ ಗುಣವಂತನೆ ನಿಜ
ನಾಯಕ
ಏತ್ತಣ ಸಾಗಿದರೂ ಚಿತ್ತ ಚಂಚಲತೆ
ಇರಬಾರದು
ಐರಾವತ ಏರಿದರೂ ಇಳಿಯೋದು ಖಚಿತ
ಒಂಟಿ ಸಲಗದಂತೆ ನಿಜ ಹೋರಾಟ
ಮಾಡಬೇಕು
ಓದುವುದರಿಂದ ಬುದ್ಧಿ ಜ್ಞಾನದ ಶಿಖರ
ಔಷಧವೇ ಜೀವನವಾಗಬಾರದು
ಸಮತೋಲ ಪೋಷಕಾಂಶಯುಕ್ತ
ಆಹಾರ ಸೇವನೆಯೇ ಆರೋಗ್ಯ ಅಮೃತ
ಅಂದದ ಚಂದದ ಜೀವನವು
ನಿಜ ಕ್ಷಣಗಳ ಬಳಕೆ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.