ಶ್ರೀ ಶರಣ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ದಿಂದ ವಿನೂತನ ಕಾರ್ಯಕ್ರಮ – ಉಪನ್ಯಾಸಕರ ನಡೆ ವಿದ್ಯಾರ್ಥಿ ನಿಲಯದ ಕಡೆ.

ರೋಣ ಡಿ.08

ನಗರದ ಪ್ರತಿಷ್ಠಿತ ಶ್ರೀ ಶರಣ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮುಂಬರುವ ವಾರ್ಷಿಕ ಪರೀಕ್ಷೆಯ ಹಾಗೂ ವಿದ್ಯಾರ್ಥಿಗಳ ಫಲಿತಾಂಶದ ದೃಷ್ಟಿಕೋನ ದಿಂದ ಮಹಾವಿದ್ಯಾಲಯ ದಂತೆ ವಿನೂತನ ಕಾರ್ಯಕ್ರಮ ಒಂದನ್ನು ಇಂದು ಹಮ್ಮಿಕೊಳ್ಳಲಾಯಿತು. ಆ ಕಾರ್ಯಕ್ರಮವೇ ಉಪನ್ಯಾಸಕರ ನಡೆ ವಿದ್ಯಾರ್ಥಿ ನಿಲಯಗಳ ಕಡೆ ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ರೋಣ ನಗರದಲ್ಲಿರುವ ಬಿಸಿಎಂ ಹಾಗೂ ಎಸ್/ಸಿ ಎಸ್/ಟಿ ವಿದ್ಯಾರ್ಥಿ ನಿಲಯ ಹಾಗೂ ಬಿಸಿಎಂ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಹೇಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು ಹಾಗೂ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಹಾಗೂ ವಿದ್ಯಾರ್ಥಿಗಳ ಅಂಕ ಗಳಿಸುವ ಕಡೆ ಗಮನ ವಹಿಸಬೇಕು ಎಂಬುದನ್ನು ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗದವರ ಸಲಹೆ ಸೂಚನೆಯ ಮೇರೆಗೆ ಮಾರ್ಗದರ್ಶನ ನೀಡಲಾಯಿತು. ಅದೇ ರೀತಿಯಾಗಿ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ ಅವರ ಪರೀಕ್ಷೆ ಫಲಿತಾಂಶ ಹೇಗೆ ಸುಧಾರಣೆ ಯಾಗಬೇಕೆಂದು ಅವರ ಜೊತೆಯೂ ಸಹ ಚರ್ಚಿಸಲಾಯಿತು.

ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ರೋಣ ನಗರದ ಏಕೈಕ ಮಹಾವಿದ್ಯಾಲಯ ಶ್ರೀ ಶರಣ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಎಂಬ ಹೆಗ್ಗಳಿಕೆಗೆ ಈ ಮಹಾವಿದ್ಯಾಲಯ ಸಾಕ್ಷಿ ಆಯಿತು. ಇವರ ಈ ನಡೆಗೆ ಎಲ್ಲಾ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎ.ಎಚ್ ನಾಯ್ಕರ್ ಹಾಗೂ ಉಪನ್ಯಾಸಕರಾದ ಶ್ರೀ ಎಸ್.ವಿ ಸಂಕನಗೌಡ್ರ, ಸಿ.ಬಿ ಪೊಲೀಸ್ ಪಾಟೀಲ್, ಡಾ, ಎಸ್.ಆರ್ ನದಾಫ್, ಎಂ.ಎಚ್ ನಾಯ್ಕರ್, ಕೆ.ಕೆ ಕಲ್ಲಪ್ಪನವರ್, ಕುಮಾರಿ ಲಲಿತಾ.ನಂದ್ಯಪ್ಪ ಗೌಡ್ರಮೇಡಂ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button