ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಗೆ – ಮತದಾರರಿಂದ ಛೀಮಾರಿ.

ಹರನಹಳ್ಳಿ ಡಿ.09

ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆಂದು ಮತ ಪಡೆದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹರನಹಳ್ಳಿ ಗ್ರಾಮಕ್ಕೆ ರಸ್ತೆ ನಿರ್ಮಿಸದ ಕಾರಣ ದುರ್ನಾತದ ನಡುವೆಯೆ ಜೀವನ ಕಳೆಯುತ್ತಿದ್ದಾರೆ, ಬಸನಗೌಡ ದದ್ದಲ್ ಅವರ ಕ್ಷೇತ್ರದ ಅಭಿವೃದ್ಧಿ ಇದೆ ನೋಡಿ ಎಂದು ಛೀಮಾರಿ ಹಾಕಿದ್ದಾರೆ.

ಮಾನ್ವಿ ತಾಲೂಕಿನ ಹರನಹಳ್ಳಿ ಗ್ರಾಮವು ಶಾಸಕ ಬಸನಗೌಡ ದದ್ದಲ್ ಸ್ವಗ್ರಾಮ ದದ್ದಲ್ ಬಳಿ ಇದ್ದರು, ಇದೆ ಮಾರ್ಗವಾಗಿ ಕಾರಲ್ಲಿ ಸಂಚಾರ ಮಾಡಿದರು ಅಭಿವೃದ್ಧಿ ಮಾಡಬೇಕು ಎನ್ನುವ ಇಚ್ಛಾಶಕ್ತಿ ಶಾಸಕ ಬಸನಗೌಡ ದದ್ದಲ್ ಗೆ ಇಲ್ಲವಾಗಿದೆ ಎಂದು ಕ್ಷೇತ್ರದ ಮತದಾರರೆ ಆರೋಪಿಸಿದ್ದಾರೆ.

ಶಾಸಕ ಬಸನಗೌಡ ದದ್ದಲ್ ಅವರೆ ನಿಮಗೆ ಎರಡು ಭಾರಿ ಮತದಾರರು ಗೆಲ್ಲಿಸಿರುವುದು ನಿಮ್ಮನ್ನು ಅಭಿವೃದ್ಧಿ ಮಾಡಲೆಂದು. ಆದರೆ ಕ್ಷೇತ್ರದ ಜನರು ದುರ್ನಾತದಲ್ಲಿ ಬಿದ್ದು ಸತ್ತರು ನಿಮಗೆ ಸ್ವಲ್ಪನಾದರು ಕಾಳಜಿ ಇಲ್ಲವೆಂದರೆ ನೀವು ಕೆಲಸ ಮಾಡುತ್ತಿರುವುದಾದರು ಏನಕ್ಕೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಕೂಗಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button