ವಿದ್ಯಾರ್ಥಿಗಳು ಉತ್ತಮ ಸಮಾಜನಿ ರ್ಮಾಣದತ್ತ ಸಾಗಬೇಕು – ಪಿ.ಎಸ್.ಐ ಪ್ರಕಾಶ ಬಣಕಾರ.
ರೋಣ ಡಿ.10

ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಯುವ ಜನತೆ ಅಗತ್ಯಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದು, ಜಾಲತಾಣಗಳಲ್ಲಿ ವೈಯಕ್ತಿಕ ವಿಚಾರ ಹಂಚಿ ಕೊಳ್ಳಬೇಡಿ. ವಿಚಾರಗಳನ್ನು ಮೂಲಕ ಸೈಬರ್ ಅಪರಾಧಗಳ ತಡೆ ಗಟ್ಟುವಿಕೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದು ರೋಣ ಪಿ.ಎಸ್.ಐ ಪ್ರಕಾಶ ಬಣಕಾರ ಹೇಳಿದರು.ಪಟ್ಟಣದ ಕೆ.ಎಸ್.ಎಸ್ ಮಹಾ ವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯಡಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸೈಬರ್ ಅಪರಾಧ ಪ್ರಕರಣಗಳು ಹಳ್ಳಿಗಳಿಗೂ ವ್ಯಾಪಿಸುತ್ತಿವೆ. ಸೈಬರ್ ಅಪರಾಧ ಪ್ರಕರಣದಲ್ಲಿ ತೊಡಗಿರುವ ಎಲ್ಲಾ ಅಪರಾಧಿಗಳು ಇಲಾಖೆಗಿಂತ ಬುದ್ದಿವಂತರಾಗಿ ಅಪರಾಧ ಪ್ರಕರಣಗಳನ್ನು ನಡೆಸುತ್ತಿದ್ದು, ದಿನ ನಿತ್ಯ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದಾರೆ. ಇಂತಹ ವಂಚನೆಗಳಿಂದ ರಕ್ಷಿಸಿ ಕೊಳ್ಳಲು ಮೊಬೈಲ್ಗಳಲ್ಲಿ ಯಾವುದೇ ಅನಧಿಕೃತ ಆ್ಯಪ್ ಅಥವಾ ಲಿಂಕ್ಗಳಿಗೆ ಪ್ರತಿಕ್ರಿಯೆ ನೀಡಬಾರದು. ಅಪರಿಚಿತ ಆನ್ಲೈನ್ ಮಿತ್ರರ ಜೊತೆ ಜಾಗರೂಕರಾಗಿ ವರ್ತಿಸಬೇಕು ವಂಚನೆಗೊಳಗಾದ ಕೆಲವೇ ನಿಮಿಷಗಳಲ್ಲಿ 1930 ನಂಬರ್ಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ತಿಳಿಸಿದರು.ಯುವಜನತೆ ಅಪರಾಧ ಪ್ರಕರಣಗಳಲ್ಲಿ ಭಾಗಿ ಯಾಗುತ್ತಿರುವ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಮಾದಕ ವಸ್ತುಗಳೇ ಪ್ರಮುಖ ಕಾರಣವಾಗಿವೆ. ಮಾದಕ ಬಳಕೆಯಿಂದ ದೂರ ಇರಬೇಕು. ಯಾರಾದರೂ ನಿಷೇಧಿತ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ ಎಂದು ಕಂಡುಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಹೇಳಿದರು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನುಷ್ಯನ ದೇಹದಲ್ಲಿ ತಲೆ ಅತ್ಯಂತ ಪ್ರಮುಖ ಅಂಗ. ಅಪಘಾತ ಸಮಯದಲ್ಲಿ ಮೊದಲು ತಲೆಗೆ ಪೆಟ್ಟು ಬೀಳುವ ಕಾರಣ ಸಂಚಾರದ ಸಮಯದಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಕೊಳ್ಳುವ ಮೂಲಕ ನಿಮ್ಮ ಜೀವ ಹಾಗೂ ನಿಮ್ಮನ್ನು ನಂಬಿರುವ ಕುಟುಂಬದ ಇತರರ ಜೀವನ ಕಾಪಾಡಿ ಕೊಳ್ಳಬೇಕು ಎಂದರು.ಕನಕದಾಸ ಶಿಕ್ಷಣ ಸಮಿತಿಯ ಸ್ಥಾನಿಕ ಮುಖ್ಯಸ್ಥ ಐ.ಬಿ ದಂಡಿನ, ಕೆ.ಎಸ್.ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಬಿ ಪೊಲೀಸ್ ಪಾಟೀಲ, ಎನ್.ಎಸ್.ಎಸ್ ಶಿಬಿರಾಧಿಕಾರಿ ಎಸ್.ಆರ್ ನದಾಫ, ಉಪನ್ಯಾಸಕರಾದ ಎಸ್.ವಿ ಸಂಕನಗೌಡ್ರ, ಎಸ್.ಎ ನದಾಫ, ಕೆ.ಕೆ ಹಿರೇಕಲ್ಲಪ್ಪನವರ, ವಿದ್ಯಾರ್ಥಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ