ಲಾಠಿ ಬೀಸಿದ ಸರ್ಕಾರದ ಕ್ರಮ ಖಂಡನೀಯ – ಎಸ್ಪಿ, ಡಿಸಿ ಅಮಾನತಿಗೆ ಒತ್ತಾಯ.
ನರೇಗಲ್ ಡಿ.13

ನರೇಗಲ್ಲನ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಜನರು ಮೀಸಲಾತಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಸ್ಥಳೀಯ ಪಂಚಮಸಾಲಿ ಸಂಘದ ವತಿಯಿಂದ ಬಸ್ ನಿಲ್ದಾಣದ ಹತ್ತಿರ ಗುರುವಾರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಪ್ರಾರಂಭದಲ್ಲಿ ರ್ಯಾಲಿ ಮುಖಾಂತರ ಸಂತಿ ಬಜಾರದ ಗಣೇಶನ ಗುಡಿಯ ಮುಖಾಂತರ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಸಾಗಿ ನರೇಗಲ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಕಾರರು ಗುಂಪು ಕೂಡಿ ಜೋರಾಗಿ ಪ್ರತಿಭಟನೆ ಆರಂಭಿಸಿದರು. ಈ ಸಮಯದಲ್ಲಿ ನರೇಗಲ್ ಪಟ್ಟಣದ ಪಂಚಮಸಾಲಿ ಸಂಘದ ವತಿಯಿಂದ ಸಮುದಾಯದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಉಪ ತಹಶೀಲ್ದಾರ ಎಸ್.ಜಿ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.ಈ ಸಮಯದಲ್ಲಿ ಮುಖಂಡ ಅಶೋಕ ಬೇವಿನಕಟ್ಟಿ ಮಾತನಾಡಿ, ಪ್ರತಿಭಟನಾಕಾರರ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಲಾಠಿಚಾರ್ಜ್ ಮಾಡಲು ಕಾರಣರಾದ ಎಡಿಜಿಪಿ, ಎಸ್ಪಿ, ಡಿಸಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ಬಸವರಾಜ ಕೊಟಗಿ ಮಾತನಾಡಿ, ಬೆಳಗಾವಿಘಟನೆಯಿಂದ ಇಡೀ ಸಮಾಜಕ್ಕೆ ಅಪಾರ ನೋವಾಗಿದೆ. ಪಂಚಮಸಾಲಿ ಸಮಾಜ ಬಾಂಧವರು ಸಾತ್ವಿಕರು. ಸರ್ಕಾರಕ್ಕೆ ಕೆಟ್ಟ ಹೆಸರು ತರಲಿಕ್ಕೆ ಹೋರಾಟ ನಡೆಸಿಲ್ಲ. ನ್ಯಾಯಯತ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಬಂದವರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಖಂಡನೀಯ ಎಂದರು.ಶಶಿಧರ ಸಂಕನಗೌಡ್ರ ಮಾತನಾಡಿದರು. ಗಂಗಾಧರ ಕೊಟಗಿ, ಮಲ್ಲಿಕಾರ್ಜುನ ಭೂಮನಗೌಡ್ರ, ಮುದಿಯಪ್ಪ ಮುಗಳಿ, ಶ್ರೀಶೈಲಪ್ಪ ಬಂಡಿಹಾಳ, ಚನ್ನಬಸಪ್ಪ ಕುಷ್ಟಗಿ, ಮುತ್ತಣ್ಣ ಪಲ್ಲೇದ, ಚನ್ನಪ್ಪ ಮ್ಯಾಗೇರಿ, ವೀರಣ್ಣ ಧರಣೆಪ್ಪಗೌಡ್ರ, ಕಲ್ಮಶ ತೊಂಡಿಹಾಳ, ಆನಂದ ಕೊಟಗಿ, ಸಂಗಪ್ಪ ಕಾಮನಕರಿ ಮತ್ತಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ