28 ಜನ ನಿರ್ಗತಿಕ ಕುಟುಂಬಕ್ಕೆ ಧರ್ಮಸ್ಥಳ ಸಂಘದ – ವತಿಯಿಂದ ಕಿಟ್ ವಿತರಣೆ.
ಕೊಟ್ಟೂರು ಡಿ. 13

ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾಗಿರುವ ಮಾತೃ ಶ್ರೀ ಡಾ, ಹೇಮಾವತಿ ವಿ ಹೆಗ್ಗಡೆಯವರ ಆಶಯದಂತೆ ಸಮಾಜದ ದುರ್ಬಲ ನಿರ್ಗತಿಕ ಫಲಾನುಭವಿಗಳಿಗೆ ಜೀವನ ನಿರ್ವಹಣೆಗೆ ವಾತ್ಸಲ್ಯ ಕಾರ್ಯಕ್ರಮ ಅಡಿಯಲ್ಲಿ ಮಾಶಾಸನ ನೀಡುತಿದ್ದು. ಅದರಲ್ಲಿ ಅರ್ಹ ಫಲಾನುಭವಿಗಳಿಗೆ ಈ ದಿನ ಬಟ್ಟೆ ಮತ್ತು ಪಾತ್ರೆ ಕಿಟ್ ನ್ನು ಯೋಜನೆಯ ಕಾರ್ಯಕರ್ತರ ಮೂಲಕ ವಿತರಣೆ ಮಾಡಿಸಲು ಇವತ್ತು ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ 39 ಯೋಜನಾ ಕಚೇರಿಗಳಲ್ಲಿ ಸಮಾಜದ ಅತಿ ಕಡು ಬಡವರಿಗೆ 342 ಮಾಶಾಸನ ಸದಸ್ಯರಿಗೆ ದಿನ ನಿತ್ಯ ಬಳಕೆಗೆ ಬೇಕಾಗಿರುವ ಬಟ್ಟೆ ಮತ್ತು ಪಾತ್ರೆ ಕಿಟ್ ವಿತರಣೆ ಮಾಡಲು ಪ್ರಾರಂಭಿಸಿದ್ದು.

ಇದರಲ್ಲಿ ಕೊಟ್ಟೂರು ತಾಲೂಕಿನಲ್ಲಿ 28 ಜನ ನಿರ್ಗತಿಕ ಕುಟುಂಬಕ್ಕೆ ತಿಂಗಳಿಗೆ 1000 ರಂತೆ ವರ್ಷಕ್ಕೆ 326000 ಮೊತ್ತದ ಮಾಶಾಸನ ವನ್ನು ನೀಡುತ್ತಿದ್ದು ಇಂತಹ ಮಾಶಾಸನ ಪಡೆಯುವ ಸದಸ್ಯರಿಗೆ ವಾತ್ಸಲ್ಯ ಕಾರ್ಯಕ್ರಮದಡಿ ಅನಾರೋಗ್ಯಕ್ಕೆ ಈಡಾದಾಗ ಔಷಧಿ ಉಪಚಾರವನ್ನು ಮನೆಗಳ ದುರಸ್ತಿ ಮನೆ ನಿರ್ಮಾಣವನ್ನು ಮಾಡಿ ಕೊಡಲಾಗುತ್ತಿದ್ದು. ಇವರುಗಳಲ್ಲಿ ಈ ದಿನ 6 ಜನರಿಗೆ ವಾತ್ಸಲ್ಯ ದಿನ ಬಳಕೆಯ ವಸ್ತುಗಳು ದಿನ ಪಾತ್ರೆ ಸಾಮಾನು ಸಿರಿ ಧಾನ್ಯದ ಆಹಾರ ಮಿಕ್ಸನ್ನೂ ಮಾಶಾಸನ ಸದಸ್ಯರಿಗೆ ಕಿಟ್ ಮತ್ತು ಪಾತ್ರೆ ವಿತರಣೆ ಮಾಡಲಾಯಿತು.

ಯೋಜನಾಧಿಕಾರಿಗಳು ನವೀನ ಕುಮಾರ ಅವರು ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು. 6 ಜನ ಮಾಶಾಸನ ವಿತರಣೆಗೆ ಪಟ್ಟಣ ಪಂಚಾಯಿತಿ ಸದಸ್ಯರು ಚನ್ನಪ್ಪ ಪಂಚಾಯಿತಿ ಸದಸ್ಯರು ಲಿಂಗರಾಜ, ದೊಡ್ಡವಿರಪ್ಪ್ , ಗಾದೆಪ್ಪ್ ಒಕ್ಕೂಟದ ಅಧ್ಯಕ್ಷರಾದ ಉಮಾ, ಲೋಕೇಶ, ವಲಯದ ಮೇಲ್ವಿಚಾರಕರು ರುದ್ರೇಶ, ಸಾವಿತ್ರಿ, ಯಶೋಧ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸೌಮ್ಯ, ಸೇವಾ ಪ್ರತಿ ನಿಧಿಗಳು ಪೂರ್ಣಿಮಾ, ಯೋಗೀಶ, ತಿಪ್ಪಮ್ಮ, ಊರಿನ ಗಣ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು