ಡಿ 15, ರಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ – ಮುಖ್ಯಮಂತ್ರಿ ಸಿದ್ದರಾಮಯ್ಯ.

ರೋಣ ಡಿ.14

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಡಿ 15, ರಂದು ಮತ ಕ್ಷೇತ್ರದ ಅಭಿವೃದ್ಧಿಗಾಗಿ 200 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜಿ.ಎಸ್ ಪಾಟೀಲ ಹೇಳಿದ್ದಾರೆ.ಪಟ್ಟಣದ ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಭಿವೃದ್ಧಿಯ ವಿವಿಧ ಕಾಮಗಾರಿಳಾದ 6798 ಲಕ್ಷ ರೂ, ವೆಚ್ಚದಲ್ಲಿ ಅಮೃತ ಯೋಜನೆಯಡಿಯಲ್ಲಿ ರೋಣ, ಗಜೇಂದ್ರಗಡ, ಮತ್ತು ನರೇಗಲ್ಲ ಪಟ್ಟಣಗಳಿಗೆ ಕುಡಿಯುವ ನೀರಿನ ಯೋಜನೆ 5000 ಲಕ್ಷ ರೂ, ವೆಚ್ಚದಲ್ಲಿ ರೋಣ ಪಟ್ಟಣದಲ್ಲಿ ಜಿ.ಟಿ.ಟಿ.ಸಿ ಕಾಲೇಜು ಕಟ್ಟಡ ನಿರ್ಮಾಣ 2000 ಲಕ್ಷ ರೂ, ವೆಚ್ಚದಲ್ಲಿ ಮುನವಳ್ಳಿ-ಕೋಟುಮಚಗಿ ರಾ-ಹೆ 83.95.90 ಕಿ.ಮೀ ದಿಂದ 104.50 ಕಿ.ಮೀ ಹಾಗೂ 107.00 ದಿಂದ 110 ರವರೆಗೆ ರಸ್ತೆ ಸುಧಾರಣೆ,995 ಲಕ್ಷ ರೂ, ವೆಚ್ಚದಲ್ಲಿ ಜಕ್ಕಲಿ ಗ್ರಾಮದಲ್ಲಿ ಶ್ರೀ ಅಂದಾನಪ್ಪ ದೊಡ್ಡಮೇಟಿ ಯವರ ಸ್ಮಾರಕ ನಿರ್ಮಾಣ 860 ಲಕ್ಷ ರೂ, ವೆಚ್ಚದಲ್ಲಿ ಗಜೇಂದ್ರಗಡ ತಾಲೂಕ ಪ್ರಜಾಸೌಧ ಕಟ್ಟಡ ನಿರ್ಮಾಣ 800 ಲಕ್ಷ ರೂ, ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯಗಳ ಕಟ್ಟಡ ನಿರ್ಮಾಣ ಮತ್ತು ಗಜೇಂದ್ರಗಡ ಹಾಗೂ ನರೇಗಲ್ಲ ಪಟ್ಟಣಗಳ ಎರಡು ವಸತಿ ನಿಲಯಗಳ ಪ್ರಾರಂಭೋತ್ಸವ 650 ಲಕ್ಷ ರೂ, ವೆಚ್ಚದಲ್ಲಿ ಡಂಬಳ, ಪೇಟಾಲೂರು ಮತ್ತು ಜಂತ್ಲಿ ಶಿರೂರು ಗ್ರಾಮಗಳ ಕೆರೆ ಅಭಿವೃದ್ಧಿ ಹಾಗೂ ಸವಡಿ-ಹೊನ್ನಾಪುರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ 395 ಲಕ್ಷ ರೂ, ವೆಚ್ಚದಲ್ಲಿ ರೋಣ ಪಟ್ಟಣದಲ್ಲಿ ಪ್ರವಾಸಿ ಮಂದಿರ ಕಟ್ಟಡ 287 ಲಕ್ಷ ರೂ, ವೆಚ್ಚದಲ್ಲಿ ರೋಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣ ಹಾಗೂ ಡಂಬಳ ಗ್ರಾಮದಲ್ಲಿ ಕಸ್ತೂರಿಬಾ ಗಾಂಧಿ ಬಾಲಿಕರ ವಿದ್ಯಾಲಯ 93.81 ಲಕ್ಷ ರೂ,ವೆಚ್ಚದಲ್ಲಿ ಡಂಬಳ ಗ್ರಾಮದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ 50 ಲಕ್ಷ ರೂ, ವೆಚ್ಚದಲ್ಲಿ ಜಿಗಳೂರು ಕೆರೆ ಪಕ್ಕದಲ್ಲಿ ಪ್ರವಾಸಿ ಉದ್ಯಾನನವ ಶಂಕು ಸ್ಥಾಪನೆ ಕಾಮಗಾರಿಗಳು ನಡೆಯಲಿದೆ.

ಬಾಕ್ಸ್:-

ಉದ್ಘಾಟನಾ ಕಾಮಗಾರಿಗಳು:-

1000 ಲಕ್ಷ ರೂ, ವೆಚ್ಚದಲ್ಲಿ ಮೇವುಂಡಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ, ಗಜೇಂದ್ರಗಡದಲ್ಲಿ ವಸತಿ ನಿಲಯ, ಹಾಗೂ ರೋಣ ಪಟ್ಟಣದಲ್ಲಿ ವಸತಿ ಶಾಲೆ ಪ್ರಾರಂಭೋತ್ಸವ 392 ಲಕ್ಷ ರೂ‌, ವೆಚ್ಚದಲ್ಲಿ ರೋಣ, ಗಜೇಂದ್ರಗಡ ಮತ್ತು ನರೇಗಲ್ಲ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ 250 ಲಕ್ಷ ರೂ, ವೆಚ್ಚದಲ್ಲಿ ಹಿರೇವಡ್ಡಟ್ಟಿ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ 91.75 ಲಕ್ಷ ರೂ, ವೆಚ್ಚದಲ್ಲಿ ಸವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವಸತಿ ಗೃಹ 27 ಲಕ್ಷ ರೂ, ವೆಚ್ಚದಲ್ಲಿ ಅಬ್ಬಿಗೇರಿ ಸಾರ್ವಜನಿಕ ಗ್ರಂಥಾಲಯದ ಕಾಮಗಾರಿಗಳಿಗೆ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.ಇನ್ನೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿ.ಕೆ ಶಿವಕುಮಾರ, ಬಸವರಾಜ ಹೊರಟ್ಟಿ, ಡಾ, ಎಚ್.ಕೆ ಪಾಟೀಲ, ದಿನೇಶ. ಗುಂಡುರಾವ್, ಸತೀಶ. ಜಾರಕಿಹೊಳಿ, ಕೃಷ್ಣ. ಬೈರೇಗೌಡ, ಪ್ರಿಯಾಂಕ. ಖರ್ಗೆ, ಬಿ.ಝೆಡ್ ಜಮೀರ ಅಹ್ಮದ ಖಾನ್ ರಹೀಂ ಖಾನ್, ಡಾ, ಶರಣ ಪ್ರಕಾಶ, ರುದ್ರಪ್ಪ.ಪಾಟೀಲ, ತಂಗಡಗಿ.ಶಿವರಾಜ್, ಸಂಗಪ್ಪ,ಸುರೇಶ, ಬಿ.ಎಸ್ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ, ಮಧು.ಬಂಗಾರಪ್ಪ, ಎನ್.ಎಸ್ ಬೋಸರಾಜ್, ಮುಖ್ಯ ಅಥಿಗಳಾಗಿ ಬಸವರಾಜ. ಬೊಮ್ಮಾಯಿ, ಸಲೀಂ ಅಹ್ಮದ, ಬಸವರಾಜ.ರಾಯರೆಡ್ಡಿ, ವಿನಯ.ಕುಲಕರ್ಣಿ, ಪಿ.ಸಿ ಗದ್ದಿಗೌಡರ, ಎಸ್.ವಿ ಸಂಕನೂರ, ಪ್ರದೀಪ.ಶೆಟ್ಟರ್, ಸಿ.ಸಿ ಪಾಟೀಲ, ಲಕ್ಷ್ಮಣ. ಸವದಿ, ಡಾ, ಚಂದ್ರು.ಲಮಾಣಿ ಅವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button