ಬಾಣಂತಿಯರ ಕುಟುಂಬಕ್ಕೆ ಸರ್ಕಾರ ದಿಂದ 5, ಲಕ್ಷ ₹ ಪರಿಹಾರದ ಚೆಕ್ ವಿತರಿಸಿದ – ಶಾಸಕ ಡಾ, ಶ್ರೀನಿವಾಸ್ ಎನ್.ಟಿ

ಕೂಡ್ಲಿಗಿ ಡಿ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಆಜಾದ್ ನಗರದ ಬಾಣಂತಿಯಾದ ಸುಮಯಾ ಬಾನು (23) ಗಂಡ ಅಬ್ದುಲ್ ರೆಹಮಾನ್ ಅವರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇದೆ ಡಿಸೇಂಬರ್ 5 ರಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಸುಮಯಾ ಬಾನು ಅವರು ಕಳೆದ ನವೆಂಬರ್ ತಿಂಗಳ 11 ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಆ ಹಿನ್ನೆಲೆಯಲ್ಲಿ ಶಾಸಕರಾದ ಡಾ, ಶ್ರೀನಿವಾಸ್ ಎನ್.ಟಿ ಅವರು ಮತ್ತು ಆರೋಗ್ಯ ಇಲಾಖೆಯ ಸಚಿವರಾದ ದಿನೇಶ ಗುಂಡೂರಾವ್ ಅವರು ಕೂಡ್ಲಿಗಿಯ ಬಾಣಂತಿಯರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಸ್ಥರ ಜೊತೆಗೆ ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಸುದ್ದಿ ತಿಳಿಸಿ ಸರ್ಕಾರ ದೊಂದಿಗೆ ಚರ್ಚಿಸಿ, ಪರಿಹಾರವನ್ನು ಹೆಚ್ಚಿಸುವುದಾಗಿ ಹೇಳಿದರು.

ಕೊಟ್ಟ ಮಾತಿನಂತೆ ಶನಿವಾರ ರಂದು ಶಾಸಕರು ಪುನಃ ಬಾಣಂತಿ ಸುಮಯ ಬಾನು ರವರ ಮನೆಗೆ ತೆರಳಿ ಸರ್ಕಾರದಿಂದ 5, ಲಕ್ಷ ರೂಪಾಯಿಗಳನ್ನು ಪರಿಹಾರದ ಚೆಕ್ ಕೊಟ್ಟಿರುವುದರಿಂದ, ಶಾಸಕರು, ಬೆಳಗಾವಿ ವಿಧಾನ ಮಂಡಳದ ಚಳಿಗಾಲ ಅಧಿವೇಶನದ ನಡುವೆಯೂ, ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಮುಖಂಡರ ಜೊತೆಗೆ ತೆರಳಿ ಸುಮಯಾ ಬಾನು ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಚೆಕ್ ವಿತರಿಸಿ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಹಾಗೆಯೇ ಇದೇ ವೇಳೆ ಶಾಸಕರು ಮಗುವನ್ನು ಪ್ರೀತಿಯಿಂದ ಹೆತ್ತಿಕೊಂಡು ಮಗುವಿನ ಆರೋಗ್ಯ ಮತ್ತು ಪೋಷಣೆ ಕಡೆ ಗಮನ ಕೊಡಲು ಶಾಸಕರು ಕುಟುಂಬಸ್ಥರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಸಯ್ಯದ್ ಶೂಕರ್, ಮುಖಂಡರಾದ ವಕೀಲರು ಬಷಿರ್ ಅಹಮದ್, ಮಾದಿಹಳ್ಳಿ ನಜೀರ್ ಸಾಬ್ ಇನಾಯತ್ ಇಲಿಯಾಸ್, ಅಬ್ದುಲ್ , ಬ್ಯಾಂಕ್ ಶಪಿ,‌ ಜಯಮ್ಮನವರ ರಾಘವೇಂದ್ರ, ಶಫಿ ಉಲ್ಲ, ಅನ್ನಾನ್ ಶಫಿ ರಫಿಕ್, ದಾದು, ಇಬಾದುಲ್, ಚಾಂದು ಭಾಷಾ, ಮುನ್ನಾ, ಬಣವಿಕಲ್ಲು ಪ್ರಶಾಂತ ಗೌಡ, ಶಿವಪುರ ರಾಜಣ್ಣ, ಕಾಟೇರ ಲಂಕೇಶ, ಕಡ್ಡಿ ಮಂಜುನಾಥ, ಲಕ್ಷ್ಮೀದೇವಿ, ಪತ್ರಕರ್ತರು, ಹಿರಿಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ‌

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button