ಶ್ರೀ ವೀರಘಂಟೈ ಮಡಿವಾಳೇಶ್ವರ ಜಾತ್ರಾ ನಿಮಿತ್ಯವಾಗಿ ಎತ್ತಿನ ಗಾಡಿ ಎಳೆದು ಸಾಧನೆ ಗೈದ – ದೇವಪ್ಪ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಲಕೇರಿ ಡಿ.18

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತ ವತಿಯಿಂದ ಶ್ರೀ ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಮುಂದೆ ಮಹಾ ಸಾಧನೆ ಮಾಡಿದಂತ ದೇವಪ್ಪ ಶಿವಪುತ್ರಪ್ಪ ಕುದರೆಕಾರ ಕಲಕೇರಿ ಗ್ರಾಮ ದಿಂದ ತಿಳಗೂಳ ಗ್ರಾಮದವರೆಗೆ 11, ಕ್ವಿಂಟಲ್ ತೊಗರಿಯನ್ನು ಎತ್ತಿನ ಗಾಡಿಯಲ್ಲಿ ಗಾಡಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಎಳೆದ ಸಾಧನೆ ಮಾಡಿದಂತ ಯುವಕನಿಗೆ ಗ್ರಾಮ ಪಂಚಾಯತಿ ವತಿಯಿಂದ ದೇವಪ್ಪ ಶಿವಪುತ್ರಪ್ಪ ಕುದರೆಕಾರ ಇವರಿಗೆ ಹೃದಯ ಪೂರ್ವಕವಾಗಿ ತುಂಬಾ (ಪಟ್ಟಿ) ಆಯೇರಿ ಮಾಡಿದರು.

ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಪರಶುರಾಮ್ ಬೇಡರ. ಸದಸ್ಯರು ಅನಿಲ್ ಬಡಿಗೇರ. ನಬಿಲಾಲ್ ನಾಯ್ಕೋಡಿ. ದೇವೇಂದ್ರ ಬಡಿಗೇರ. ಭೀಮಣ್ಣ ವಡ್ಡರ.ಚಾಂದ್ ಪಾಷ ಹವಾಲ್ದಾರ್. ಪರಶುರಾಮ್ ಕುದರ ಕಾರ. ಸುಧಾಕರ್ ಅಡಿಕಿ. ಹಾಜಿ ಪಾಷಾ ಜಾಗೀರ್ದಾರ್. ಅನೇಕ ಊರಿನ ಗ್ರಾಮಸ್ಥರು ಸೇರಿದಂತೆ ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ.ತಾಳಿಕೋಟೆ