ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ರವರು ಹೇಳಿಕೆಗೆ ಖಂಡಿಸಿ, ಕೂಡಲೇ ರಾಜೀನಾಮೆ ನೀಡಬೇಕು – ದುರ್ಗಾ ದಾಸ್.

ಬೆಂಗಳೂರು ಡಿ.20

ರಾಜ್ಯ ಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ನಾನು ತೀವ್ರವಾಗಿ ಒತ್ತಾಯಿಸುತ್ತೇನೆ. ಮತ್ತು ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಹಾಗೂ ಅಮಿತ್ ಶಾ ಅವರ ಈ ವಿವಾದಾತ್ಮಕ ಹೇಳಿಕೆಯನ್ನ ನಾನು ಒಬ್ಬ ಅಂಬೇಡ್ಕರ್ ಅನುವಾಯಿಯಾಗಿ ಭಾರತದ ಒಬ್ಬ ನಾಗರಿಕನಾಗಿ ತೀವ್ರವಾಗಿ ವಿರೋಧ ಮಾಡುತ್ತೇನೆ ಅಮಿತ್ ಶಾ ಅವರು ಒಬ್ಬ ಉನ್ನತವಾದ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ರಾಜ್ಯ ಸಭೆಯಲ್ಲಿ ಅಂಬೇಡ್ಕರ್ ಅವರನ್ನು ಅಪಮಾನಿಸುವುದು ಎಷ್ಟರ ಮಟ್ಟಿಗೆ ಸರಿ ಅಮಿತ್ ಶಾ ಅವರು ಒಂದು ವಿಚಾರವನ್ನು ಮನಗಾಣಬೇಕು ಮೊದಲನೆಯದಾಗಿ ಅವರು ಈ ಸ್ಥಾನಕ್ಕೆ ಬರುವುದಕ್ಕೆ ದೇವರು ಕಾರಣನಾ ಅಥವಾ ಸಂವಿಧಾನ ಕಾರಣನಾ ಅನ್ನುವುದನ್ನು ಅರಿತು ಕೊಳ್ಳಬೇಕು ಇವತ್ತು ಅಮಿತ್ ಶಾ ಅವರ ಈ ನಡವಳಿಕೆಯನ್ನು ಅವರ ವ್ಯಕ್ತಿತ್ವವನ್ನ ಇಡೀ ಭಾರತ ದೇಶ ಕಣ್ಣಾರೆ ನೋಡುತ್ತಿದೆ ಭಾರತದಲ್ಲಿ ಸಂವಿಧಾನ ಬರುವುದಕ್ಕಿಂತ ಮೊದಲು ಶೋಷಿತರು ದೀನ ದಲಿತರು ಅಸ್ಪೃಶ್ಯ ವರ್ಗದವರು ಯಾವ ರೀತಿ ಕಸಕ್ಕಿಂತ ಕಡೆಯಾಗಿ ತುಂಬಾ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದರೂ ಎಂಬುವ ವಿಚಾರ ಅಮಿತ್ ಶಾ ಅವರಿಗೆ ತಿಳಿದಿಲ್ಲವೇ ಆಗ ಯಾವುದೇ ದೇವರಗಳ ಕೈಯಿಂದ ಅವರನ್ನು ಈ ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗಲಿಲ್ಲ ಆದರೆ ನಮ್ಮ ಶೋಷಿತ ಅಸ್ಪೃಶ್ಯ ದಲಿತರು ಮಾತ್ರ ಆ ದೇವರನ್ನ ದ್ವೇಷಿಸಲಿಲ್ಲ ಅವಾಗಲೂ ಕೂಡ ಆ ದೇವರಗಳ ನಾಮ ಸ್ಮರಣೆಯನ್ನು ಪ್ರತಿ ದಿನ ಪ್ರತಿಕ್ಷಣ ಪಠಿಸುತ್ತಲೇ ಇದ್ದರೂ ಅವರಿಗೆ ಶೋಷಣೆಯಿಂದ ಮುಕ್ತಿ ಸಿಕ್ಕಿರುವುದಿಲ್ಲ. ನಾನು ಮೇಲು ನೀನು ಕೀಳು ಅನ್ನುವ ನರಕದಲ್ಲಿನೇ ಜೀವಿಸಬೇಕಾಯಿತು. ಶೋಷಿತ ವರ್ಗಗಳ ಪಾಲಿಗೆ ದೇವರಾಗಿ ಬಂದವರೇ ಡಾ, ಬಿ.ಆರ್ ಅಂಬೇಡ್ಕರ್ ಅವರು ಹಾಗೂ ಅವರು ಬರೆದು ಕೊಟ್ಟಂತ ಸಂವಿಧಾನ. ಆ ಸಂವಿಧಾನ ದಿಂದ ತಾವು ಗೃಹ ಸಚಿವರಾಗಿರುವಿರಿ, ಹಾಗಾಗಿ ಅಂಬೇಡ್ಕರ್ ರವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ನೀವು ಕೂಡಲೇ ರಾಜೀನಾಮೆ ಕೊಟ್ಟು ಹೊರ ನಡೆಯಬೇಕು ಹಾಗೂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ದಲಿತ ಮತ್ತು ಶೋಷಿತ ಅಸ್ಪೃಶ್ಯರ ಪರವಾಗಿ ನಾನು ಒತ್ತಾಯ ಮಾಡುತಿದ್ದೇನೆ ಹಾಗೂ ನಿಮ್ಮ ಈ ನಡವಳಿಕೆಗೆ ನಮ್ಮ ವಿರುದ್ಧವಿದೆ. ಸಮಾಜಿಕ ಹಾಗೂ ದಲಿತಪರ ಹೋರಾಟಗಾರ ದುರ್ಗಾ ದಾಸ ಬೆಂಗಳೂರು ಇವರಿಂದ ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button