ಅವಳಿ ಶ್ರೀಗಳ ತುಲಾಭಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ 31 ದಂಪತಿಗಳಿಗೆ ಆದರ್ಶ – ದಂಪತಿಗಳ ಅವಾರ್ಡ್ 2024.
ಹಿರೇ ಹೆಗ್ಡಾಳ್ ಡಿ.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಕಲಾ ಭಾರತಿ ಕಲಾ ಸಂಘ ಹಿರೇ ಹೆಗ್ಡಾಳ್ ಇವರ ವತಿಯಿಂದ ಅವಳಿ ಶ್ರೀಗಳ ತುಲಾಭಾರ ಕಾರ್ಯಕ್ರಮ ಐದನೇ ಸಾಂಸ್ಕೃತಿಕ ಕಲೋತ್ಸವ 31 ದಂಪತಿಗಳಿಗೆ ಆದರ್ಶ ದಂಪತಿಗಳ ಅವಾರ್ಡ್ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಕಲಾ ಭಾರತಿ ಕಲಾ ಸಂಘ ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ಬಣಕಾರ ಮೂಗಪ್ಪ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂತೋಷ್ ಕುಮಾರ್ ಐ.ವೈ ಬಳ್ಳಾರಿ ಸ್ಥಳ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಿರೇ ಹೆಗ್ಡಾಳ್ ಧಾರ್ಮಿಕವಾಗಿ ಸಾಮಾಜಿಕವಾಗಿ ಲೋಕ ಕಲ್ಯಾಣಾರ್ಥವಾಗಿ 31 ದಂಪತಿಗಳಿಗೆ ಉಡಿ ತುಂಬ ಕಾರ್ಯಕ್ರಮ ನೆರವೇರಲಿದ್ದು. ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲ ಜ್ಞಾನ ಶ್ರೀ ಡಾ, ಶರಣಬಸವ ಮಹಾಸ್ವಾಮಿಗಳು ಸಂಸ್ಥಾನ ಕೋಡಿಮಠ ಗಜೇಂದ್ರಗಡ ಹಾಗೂ ಪರಮ ಪೂಜ್ಯ ಡಾ, ಕಲ್ಲಯ್ಯಜ್ಜ ವೀರೇಶ್ವರ ಪುಣ್ಯಾಶ್ರಮ ಗದಗ ಇವರ ದಿವ್ಯ ಸಾನಿಧ್ಯದಲ್ಲಿ ನೆರವೆರಲ್ಲಿದ್ದು ಉದ್ಘಾಟನೆಯನ್ನು ಬಳ್ಳಾರಿ ಲೋಕಸಭಾ ಸದಸ್ಯರಾದ ಈ ತುಕಾರಾಂ , ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ, ಎನ್. ಟಿ. ಶ್ರೀನಿವಾಸ್, ಮಾಜಿ ಸಚಿವರಾದ ಬಿ.ಶ್ರೀರಾಮುಲು ಸೇರಿದಂತೆ ಇನ್ನಿತರ ಗಣ್ಯ ಮಾನ್ಯರು ನೆರವೇರಿಸಲಿದ್ದು. ಮುಖ್ಯ ಅತಿಥಿಗಳಾಗಿ ಗಣ್ಯಾತಿ ಗಣ್ಯ ವ್ಯಕ್ತಿಗಳು ಮತ್ತು ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಂದು ಕಲಾ ಭಾರತಿ ಕಲಾ ಸಂಘದ ಅಧ್ಯಕ್ಷರು ತಿಳಿಸಿದರು. ಮತ್ತು ಈ ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಸಂತೋಷ ಕುಮಾರ ಐ.ವೈ ಬಳ್ಳಾರಿ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷರಾದ ಸುನಿಲ್ ಗೌಡ್ರು ಕೂಡ್ಲಿಗಿ. ಸ್ವಂದನ ಸಂಸ್ಥೆ ಸಂಸ್ಥಾಪಕರು ಅಧ್ಯಕ್ಷರು ಡಾ, ಜಿ.ಎಸ್ ಗಿರೀಶ. ಕಾರ್ಯಕ್ರಮದ ಸಂಚಾಲಕರಾದ. ಕೌದಿ.ವಿಜಯ್ ಕುಮಾರ್ ಎಂ.ಬಸವರಾಜ್ ಕಕ್ಕುಪ್ಪೆ. ಎಚ್ ವೀರಭದ್ರಪ್ಪ. ಈಶಪ್ಪ.ಬಿ. ಇತರರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ