ಶಾಲೋಮ್ ಪ್ರಾರ್ಥನಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಸತತ 5 ನೇ. ವರ್ಷದಲ್ಲಿ 109 ಜನರು – ರಕ್ತದಾನ ಮಾಡಿದ ಶಿಬಿರಾರ್ಥಿಗಳು.
ಕೂಡ್ಲಿಗಿ ಡಿ.21

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಎನ್.ಎಚ್ 50 ಪಕ್ಕದಲ್ಲಿ ರಾಜೀವ್ ಗಾಂಧಿನಗರ ಹಿಂಭಾಗದಲ್ಲಿ ಬರುವ ಶಾಲೋಮ್ ಪ್ರಾರ್ಥನಾಲಯ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಶುಕ್ರವಾರ ರಂದು ನಡೆದ 5 ನೇ. ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದ್ದು, ಈ ಶಿಬಿರದ ಪ್ರಮುಖ ಮುಖಂಡತ್ವ ಪರಶುರಾಮ್ ಸೇವಕರು ಹಾಗೂ ಸಭೆಯ ಸಹಚರರಾದ ಸೋಮಶೇಖರ್, ಗಣೇಶ್, ಇನ್ನು ಇತರರು ವಹಿಸಿ ಕೊಂಡಿದ್ದು, ಪರಶುರಾಮ್ ಸೇವಕರು ಶಿಬಿರದ ಕುರಿತು ಮಾತನಾಡತ್ತ ಪ್ರತಿಯೊಬ್ಬ ನಾಗರಿಕರಿಗೂ ಈಗ ನಡೆಯುವಂತ ದಿನ ಮಾನಗಳಲ್ಲಿ ಅನಾರೋಗ್ಯದಿಂದ ಅಥವಾ ಅಪಘಾತ ಆದಂತ ಸಮಯದಲ್ಲಿ ಹಾಗೂ ಮಹಿಳೆ ಯರಿಗೆ ಗರ್ಭಿಣಿಯಿಂದ ಹೆರಿಗೆಯ ಸಮಯದಲ್ಲಿ ರಕ್ತ ಹೀನತೆಯಿಂದ ಬಳಲುತ್ತಿರುವಂತ ಕೆಲವರು ಮಹಿಳೆಯರಿಗೆ ಅವಶ್ಯಕತೆ ಇರುವುದು ರಕ್ತ, ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿಯ ಜೀವಕ್ಕೆ ಬೇಕಾಗುವಂತಹ ರಕ್ತವನ್ನು ನೀಡುವುದು ಒಳ್ಳೆಯ ಸೇವೆ, ಆದ್ದರಿಂದ ಈ ಒಂದು ಉತ್ತಮ ಸೇವೆಯ ಶಿಬಿರವನ್ನು ನಮ್ಮ ಸಭೆಯ ಮೂಲಕ ಈ ಬಾರಿ 5 ನೇ. ವರ್ಷವಾಗಿ ಪ್ರತಿ ವರ್ಷಕೊಮ್ಮೆ ಹೆಚ್ಚು ಹೆಚ್ಚಾಗಿ ಹತ್ತರಿಂದ ಇಪ್ಪತ್ತು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ನಮ್ಮ ಶಾಲೋಮ್ ಪ್ರಾರ್ಥನಾಲಯದಲ್ಲಿ ನಡೆಸುವಂತಹ ಶಿಬಿರಕ್ಕೆ ಕಾರ್ಯಕ್ರಮಕ್ಕೆ ಯುವಕರು ಯುವತಿಯರು ಹಾಗೂ ವಿವಾಹವಾದ ಮಹಿಳೆಯರು ಸಹ ರಕ್ತದಾನ ಮಾಡುತಿದ್ದರೆ, 2023-24 ರಲ್ಲಿ 80 ಜನರು ರಕ್ತ ದಾನ ಮಾಡಿದ್ದರು. ಆದರೆ ಈ ವರ್ಷ ಅಂದರೆ 2025 ರಲ್ಲಿ ಒಟ್ಟು 109 ಜನರು ಈ ಶಿಬಿರದಲ್ಲಿ ಭಾಗವಸಿ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು.

ಹಾಗೆ ಪ್ರತಿಯೊಬ್ಬ ಮನುಷ್ಯನು ಹೆಣ್ಣು ಗಂಡೆಂಬ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಒಳ್ಳೆಯದು ಹಾಗೂ 50 ಕೆ.ಜಿ ಕಿಂತ ಮೇಲ್ಪಟ್ಟು ಇರುವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಅವರವರ ಆರೋಗ್ಯವು ಕಾಲ ಕಳೆದಂತೆಲ್ಲ ಬಿಪಿ, ಶುಗರ್, ಕೊಲಸ್ಟ್ರಾ, ಇನ್ನಿತರೆ ಸಮಸ್ಯೆಗಳಿಂದ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ, ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ರಕ್ತದಾನ ಮಾಡುವುದು ಉತ್ತಮ ಸೇವೆ ಎಂದು ಪರಶುರಾಮ್ ಸೇವಕರು ತಿಳಿಸಿದರು. ಹಾಗೆ ಶಾಲೋಮ್ ಪ್ರಾರ್ಥನಾಲಯಕ್ಕೆ ಬಂದು ರಕ್ತದಾನ ಮಾಡಿದ ಎಲ್ಲರಿಗೂ ಸಭೆಯ ಮೂಲಕ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಸಭೆಯ ಸದಸ್ಯರುಗಳಾದ ಸೋಮಶೇಖರ್, ಎ. ಗಣೇಶ್, ಕುಮಾರ, ನವೀನ್ ಕುಮಾರ್, ಬಸವರಾಜ್, ಮಹೇಂದ್ರ, ಅವಿನಾಶ್, ಶಶಿ, ಶಾಂತಕುಮಾರ್ ಹಾಗೂ ಮಹಿಳೆಯರಾದ ರೂತು ಫಾಸ್ಟರಮ್ಮ, ಗೌರಮ್ಮ, ಬೊಮ್ಮಕ್ಕ, ಗಾಯಿತ್ರಿ, ಲಕ್ಷ್ಮಿ, ಸಿದ್ದಮ್ಮ, ಉಮಾ, ಇನ್ನು ಅನೇಕ ಸಮಯ ಸದಸ್ಯರುಗಳು ಸಂಪೂರ್ಣ ಜವಾಬ್ದಾರಿಯತವಾಗಿ ಈ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ ಕೂಡ್ಲಿಗಿ.ವಿಜಯನಗರ