“ಬದುಕು ಬಂಡಿ” ಚಲನಚಿತ್ರ ಬಿಡುಗಡೆ.

ಧಾರವಾಡ ಡಿ.22

ಬಾಬಾ ಸಿನಿ ಕ್ರಿಯೇಷನ್ಸ್ ರವರ ಕರ್ನಾಟಕ ಸರಕಾರದ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಅಕ್ಷರತಾಯಿ, ದತ್ತಿದಾನಿ ಎಂದೇ ಹೆಸರು ವಾಸಿಯಾದ ಶ್ರೀಮತಿ ಲೂಸಿ ಕೆ ಸಾಲ್ಡಾನಾ ಅವರ ಜೀವನ ಕುರಿತಾದ “ಬದುಕು ಬಂಡಿ” ಚಲನ ಚಿತ್ರ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾ ವರ್ಧಕ ಸಂಘದಲ್ಲಿ ನೆರವೇರಿತು. ಶ್ರೀಮತಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ, ನವರಸ ಸ್ನೇಹಿತರ ವೇದಿಕೆ (ರಿ) ಧಾರವಾಡ ಇವರ ಸಹಯೋಗದಲ್ಲಿ ಕರ್ನಾಟಕ ವಿದ್ಯಾ ವರ್ಧಕ ಸಂಘದ ಸಹಕಾರದೊಂದಿಗೆ ಭಾವೈಕ್ಯತೆ ಸಾರುವ ರೀತಿಯಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ ಗುರುಗಳ ಸಾನಿಧ್ಯದಲ್ಲಿ ಶಂಕರ ಹಲಗ್ತತಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ ತಮ್ಮ ದುಡಿತದ ಹಣವನ್ನು ಶಿಕ್ಷಣ ರಂಗಕ್ಕೆ ದಾನವಾಗಿ ನೀಡುತ್ತಿರುವ ಲೂಸಿ ಸಾಲ್ಡಾನ ಅವರ ಕಾರ್ಯ ಶ್ಲಾಘನೀಯ ಎಂದರು. “ಬದುಕು ಬಂಡಿ” ಚಲನ ಚಿತ್ರ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನ ಅವರು ೧೧೨ ಸರಕಾರಿ ಶಾಲೆಗಳಿಗೆ ೮೦ ಲಕ್ಷ ದತ್ತಿ ನೀಡಿದ್ದು ಇದು ಶಿಕ್ಷಣದ ಬಗೆಗಿನ ಅವರ ಕಾಳಜಿ ತೋರುತ್ತದೆ ಎಂದರು. ಶಿಕ್ಷಕ ಸಾಹಿತಿ ವೈ.ಬಿ ಕಡಕೋಳ ರವರ ಸಂಪಾದಿತ ಕೃತಿ ಯಾಧರಿಸಿ ನಿರ್ಮಿಸಲಾದ ಚಿತ್ರವನ್ನು ಧಾರವಾಡ, ಹೊನ್ನಾಪೂರ, ಅರವಟಗಿ, ಅಂಬೊಳ್ಳಿ, ಇನಾಮ ಹೊಂಗಲ್, ಹೆಬ್ಬಳ್ಳಿ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ, ಚಿತ್ರದಲ್ಲಿ ಎರಡು ಹಾಡುಗಳಿವೆ ಎಂದು ಸಹ ನಿರ್ದೇಶಕ ಎನ್.ಬಿ ದ್ಯಾಪೂರ ತಿಳಿಸಿದರು. ರಜಾ ದಿನಗಳಲ್ಲಿ ತಮ್ಮ ಎಲ್ಲಾ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ೫೦ ಕ್ಕೂ ಮಿಕ್ಕಿ ಶಿಕ್ಷಕರು ಇಲಾಖೆ ಗಳವರ ಸಹಕಾರದೊಂದಿಗೆ ಸರಕಾರಿ ಶಾಲೆಯಲ್ಲೇ ಓದುತ್ತಿರುವ ೫೦ ಕ್ಕೂ ಮಿಕ್ಕಿ ಮಕ್ಕಳನ್ನು ಚಿತ್ರದಲ್ಲಿ ಅಭಿನಯಕ್ಕೆ ಅವಕಾಶ ಕಲ್ಪಿಸುವ ಮೂಲಕ ಚಿತ್ರ ತಂಡದವರು ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತಂದಿರುವುದು ವಿಶೇಷ ಎಂದು ನಿರ್ದೇಶಕ ಬಾಬಾಜಾನ ಮುಲ್ಲಾ ಹೇಳಿದರು. ಪಾತ್ರ ವರ್ಗದಲ್ಲಿ ಫಾದರ್ ಡಾ, ಮೈಕೆಲ್ ಸೋಜ್, ಶ್ರೀಮತಿ ಲೂಸಿ.ಕೆ ಸಾಲ್ಡಾನ್, ಶ್ರೀಮತಿ ಪ್ರಮೀಳಾ ಜಕ್ಕಣ್ಣವರ, ಜೆ.ಎಮ್ ಗಾಮನಗಟ್ಟಿ, ರಾಜೀವಸಿಂಗ್ ಹಲವಾಯಿ, ಲಕ್ಷ್ಮೀ. ಎಸ್.ಬಿ ಶಾರುಕ್ ಮುಲ್ಲಾ, ಶಶಿಕುಮಾರ ಪತಂಗೆ, ಹುಸೇನ್ ಶ್ಯಾನವಾಡ, ಮಹಾಂತೇಶ ಹುಬ್ಬಳ್ಳಿ, ಮಹೇಶ್ವರಿ ಡಿ.ಯು, ದಿವ್ಯಾ ಶಾಂಬೇಕರ, ಮೌನೇಶ್ವರಿ ದ್ಯಾಪೂರ, ಚಂದ್ರವ್ವ ಹರತಕ್ಕಡಿ, ಐಶ್ವರ್ಯ ಬಿರಾದಾರ, ಎಲ್.ಐ ಲಕ್ಕಮ್ಮನವರ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಛಾಯಾಗ್ರಹಣ ಮಹ್ಮದಯುಸೂಫ್ ಮುಲ್ಲಾ , ಗೀತ ಸಾಹಿತ್ಯ ಮಹಾದೇವ ಬಸರಕೋಡ, ಧ್ವನಿ ಮುದ್ರಣ ಮತ್ತು ಹಿನ್ನೆಲೆ ಸಂಗೀತ ವೈಭವಭಟ್, ರಕ್ಷಿತಾ ಭಟ್, ನೃತ್ಯ ಸಂಯೋಜನೆ ಮಲ್ಲನಗೌಡ ಪಾಟೀಲ, ಎಡಿಟಿಂಗ್, ಡಿ.ಐ, ಪವನ ಕುಲಕರ್ಣಿ ,ಹಿನ್ನೆಲೆ ಧ್ವನಿ ಆರತಿ ದೇವಶಿಕಾಮಣಿ, ಪತ್ರಿಕಾ ಸಂಪರ್ಕ ಡಾ, ಪ್ರಭು.ಗಂಜಿಹಾಳ, ಡಾ, ವಿರೇಶ ಹಂಡಗಿ, ಸಹ ನಿರ್ದೇಶನ ಎನ್.ಬಿ ದ್ಯಾಪೂರ, ಚಿತ್ರಕಥೆ -ಸಂಭಾಷಣೆ- ನಿರ್ದೇಶನ ಬಾಬಾಜಾನ ಮುಲ್ಲಾ ಅವರದಿದೆ.

*****

-ಡಾ.ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button