ಸಂಸ್ಕೃತಿ ಇಲಾಖೆಯು ನಿಜವಾದ ಕನ್ನಡ ಸಂಘ ಸಂಸ್ಥೆಗಳ ವಿಕಿಪೀಡಿಯ ಯೋಜನೆ ಜಾರಿಗೆ ತರಲು ಮುಂದಾಗ ಬೇಕಿದೆ – ಸಾಹಿತಿ ಸತೀಶ್ ಜವರೇಗೌಡ.
ಬೆಂಗಳೂರು ಡಿ.25

ಕನ್ನಡ ಕರ್ನಾಟಕದ ಹೆಸರು ಉಳಿಸುವ ನಿಟ್ಟಿನಲ್ಲಿ ಯಾವುದೇ ಆರ್ಥಿಕ ಸಹಾಯ ಸಹಕಾರ ಪ್ರೋತ್ಸಾಹ ಇಲ್ಲದೆ ನಿಜವಾದ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಂಸ್ಕೃತಿಕ ಸಂಘ ಸಂಸ್ಥೆಗಳ ವಿಕಿಪೀಡಿಯ ಯೋಜನೆಯನ್ನು ಜಾರಿಗೆ ತಂದು ಆ ಸಂಸ್ಥೆಗಳಿಗಳನ್ನು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಿ ಬೆಳೆಸ ಬೇಕಾಗಿದೆ ಎಂದು ಕವಿ ಅಧ್ಯಾಪಕ ಸತೀಶ್ ಜವರೇಗೌಡ ಅವರು ಅಭಿಪ್ರಾಯ ಪಟ್ಟರು. ಅವರು ಕಾವ್ಯ ಶ್ರೀ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಾಗೆಯೇ ಯುವ ಕವಿ ಸಂಗಮನಾಥ ಟಿ.ಸಜ್ಜನ ಅವರು ಬರೆದಿರುವ “ಜೇನುಗೂಡು” ಕವನ ಸಂಕಲನ ಕುರಿತು ಮಕ್ಕಳಿಗಾಗಿಯೇ ಬರೆದ ಈ ಕೃತಿಯು ಉತ್ತಮ ಗುಣಮಟ್ಟದ ಕವಿತೆಗಳು ಮನ ಮುಟ್ಟುವಂತೆ ಸರಳವಾಗಿವೆ ಎಂದು ಶುಭ ಹಾರೈಸಿದರು.

ಡಾ, ಆರೂಢ ಭಾರತಿ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಪತ್ರಕರ್ತರು, ರಂಗಭೂಮಿ ಹಿರಿಯ ಕಲಾವಿದರಾದ ರಮೇಶ್ ಸುರ್ವೆ ಕೃತಿ ಲೋಕಾರ್ಪಣೆ ಮಾಡಿದರು. ಸಮಾರಂಭವನ್ನು ಚಲನ ಚಿತ್ರ ನಟಿ, ರಂಗಭೂಮಿ ಹಿರಿಯ ಕಲಾವಿದೆ ಮಾಲತಿ ಶ್ರೀ ಮೈಸೂರು ಅವರು ಉದ್ಘಾಟಿಸಿ ಮಕ್ಕಳಿಗೆ ಕಲೆ, ಸಂಸ್ಕೃತಿ ಜಾಗೃತಿ ಮೂಡಿಸುವ ಕೆಲಸ ಇವತ್ತಿನ ದಿನಗಳಲ್ಲಿ ಹೆಚ್ಚಿನ ಅಗತ್ಯ ಇದೆ ಎಂದರು. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ, ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರತಿಯೊಬ್ಬರ ಮನೆಗಳಲ್ಲಿ ಪುಟ್ಟ ಪುಟ್ಟ ಪುಸ್ತಕ ಕಪಾಟುಗಳನ್ನು ನಿರ್ಮಿಸಿರಿ ಜ್ಞಾನ ಬಹಳ ದೊಡ್ಡದು, ಸಾಹಿತ್ಯ, ಕಲೆ, ಸಂಸ್ಕೃತಿ, ಸಂಗೀತದ ಕಡೆಗೆ ನಮ್ಮ ಮಕ್ಕಳಿಗೆ ಕಲಿಸಬೇಕು, ಇದರಿಂದ ಸಂಸ್ಕಾರ ವಂತರಾಗಲು ಸಾಧ್ಯ ಎಂದರು. ವೇದಿಕೆಯಲ್ಲಿ ಡಾ, ಜಿ.ಶಿವಣ್ಣ, ಸಾಹಿತಿ ಚಂದ್ರಶೇಖರ ಮಾಡಲಗೇರಿ, ಜೇನುಗೂಡು ಕೃತಿಕಾರ ಸಂಗಮೇಶಪಿ ಸಜ್ಜನ, ಡಿ.ವೆಂಕಟೇಶ್, ಎಸ್.ಮಿಥುನ್, ಕೆ.ಎಸ್.ವೀರೇಶ್, ಹೇಮಾವತಿ ಮುಂತಾದವರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಕಾಡೆಮಿಗಳು , ಮಾಧ್ಯಮಗಳು ನಿಜವಾಗಿಯೂ ತಮ್ಮ ಸ್ವಂತ ತನು ಮನ ಧನ ಅರ್ಪಿಸಿ ಕೊಂಡು ಸಮಾಜ , ಸಂಸ್ಕೃತಿ, ಕನ್ನಡಪರ ಕೆಲಸ ಮಾಡುವವ ಪ್ರಾಮಾಣಿಕ, ನಿಜದ ಸೇವಕರನ್ನು ಗುರುತಿಸಿ ಪ್ರಶಸ್ತಿ, ಗೌರವ ನೀಡಬೇಕೆಂದು ಡಾ, ಸಿಸಿರಾ ಒತ್ತಾಯಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ