“ದೇವರ ಹಿಪ್ಪರಗಿ ತಾಲೂಕಾ ಅಕ್ಷರ ಜಾತ್ರೆ”…..

ದೇವರ ಹಿಪ್ಪರಗಿ ತಾಲೂಕಾ ಅಕ್ಷರ ಜಾತ್ರೆ
ನಾಡ ನುಡಿಯ ಮೆರಗು
ಶ್ರೀ ಜಗಜ್ಯೋತಿ ಬಸವ ಬೆಳಗಿದ
ವಚನ ರಕ್ಷಕ ಶರಣ ಮಡಿವಾಳ ಮಾಚೀದೇವ
ಜನಸಿದ
ದೇವರ ಹಿಪ್ಪರಗಿ ಪುಣ್ಯ ಭೂಮಿ
ಪುರ ದೇವ ಭಂಡಾರದ ಒಡೆಯ
ಜಗದ ರಕ್ಷಕ ಶ್ರೀರಾವುತರಾಯ
ಶ್ರೀ ಕಲ್ಮೇಶ್ವರ ನೆಲಸಿದ ಪವಿತ್ರ ಕ್ಷೇತ್ರ
ಜವಾರಿ ಬಾಳೆ ಜೋಳ ತೋಗರಿ
ರೈತರ ಶ್ರಮದ ಸುಕೃತ ಫಲ
ವಿವಿಧತೆಯಲಿ ಏಕತೆ ಸಾರುವ
ಜನತೆಯ ಭಾವ ಸುಂದರ
ಪತ್ರಿಕಾ ರಂಗದ ಭೀಷ್ಮ ಹಣಮಂತರಾಯ
ಮೊಹರೆ
ಘನತೆ ಜಗದಿ ತೋರಿದ
ಸ್ವಾತಂತ್ರ್ಯ ಕಿಚ್ಚು ಹಚ್ಚಿದ ದಂಡು
ಪಾಟೀಲ್ ಪಟೇಲ
ಹಾಲುಮತ ವಾಲ್ಮೀಕಿ
ಮನೆತನದವರ
ಗೌರವಿತ ಸೌಮ್ಯ ಸಹಬಾಳ್ವೆಯ
ವಿವಿಧತೆಯಲಿ ಏಕತೆಯ ಪ್ರತೀಕ
ಐತಿಹಾಸಿಕ ಗುಡಿ ಗೋಪುರ ಊರ ಉತ್ಸವ
ಹಬ್ಬ ಉತ್ಸಾಹ ಸರ್ವ ಜನ ಸಹಕಾರ
ಸಹಯೋಗ
ಪುರದ ಮೆರಗು
ಸಂತೆ ವ್ಯಾಪಾರ ವಹಿವಾಟ ಸುತ್ತಮುತ್ತ
ಗ್ರಾಮಗಳ
ಜನಮನ ಆಕರ್ಷಿತ
ದೇ ಹಿ ತಾಲೂಕಾ ಸಾಹಿತ್ಯ ಸಮ್ಮೇಳ
ಯುವ ಬರಹ ಕವಿ ಲೇಖರ
ನಾಡು ನುಡಿ
ನೆಲ ಜಲ ಸಂಸ್ಕೃತಿ ಪರಂಪರೆ
ಸಾಹಿತ್ಯ ಸಿರಿಯ ಹೊಂಗಿರಣ
ಕರುನಾಡ ತುಂಬೆಲ್ಲಾ ಹರಡಲಿ
ಸಾಹಿತ್ಯ ಸಮ್ಮೇಳನವು
ನಮ್ಮ ಊರು ನಮ್ಮ ಹೆಮ್ಮೆ
ಅಚ್ಚಳಿಯದ ಇತಿಹಾಸ ದೇಶ ನಾಡ ತುಂಬೆಲ್ಲಾ
ದೇ ಹಿ ಅಕ್ಷರ ಜಾತ್ರೆಯು ಜನಮನದ
ಬೆಳಕಾಗಲಿ.

-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ