ವಿ.ಎಸ್.ಎಸ್.ಎನ್ ಗೆ ನೂತನ ಅಧ್ಯಕ್ಷರಾಗಿ – ಕೆ.ರಾಘವೇಂದ್ರ ರಾವ್ ಅವಿರೋಧವಾಗಿ ಆಯ್ಕೆ.

ಗುಡೇಕೋಟೆ ಜ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಗುಡೇಕೋಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಿಂದ ಈ ದಿನ ಶನಿವಾರ ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದದ್ದು ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ 5 ಜನ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ 12 ಜನ ಸದಸ್ಯರಗಳಲ್ಲಿ ಅಧ್ಯಕ್ಷರಾಗಿ ಕೆ.ರಾಘವೇಂದ್ರ ರಾವ್ ರವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು. ಹಾಗೆ ಉಪಾಧ್ಯಕ್ಷರಾಗಿ ಯಾರೋಬನಹಟ್ಟಿ ಗಂಗಾಧರ (ವಜ್ರಪ್ಪ) ಇವರನ್ನು ಸರ್ವ ಸದಸ್ಯರು ಹಾಗೂ ಚುನಾವಣೆ ಅಧಿಕಾರಿಗಳಾದ ಆರ್.ವೆಂಕಟೇಶ್ ಮತ್ತು ಕಾರ್ಯದರ್ಶಿ ಬಸವರಾಜ್ ಮತ್ತು ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ ಹಾಗೂ ಊರಿನ ಮುಂಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಊರಿನ ಮುಂಖಂಡರುಗಳಾದ ಬಷೀರ ಸಾಬ್, ಕೆ.ಇ.ಬಿ ಗೋವಿಂದಪ್ಪ, ನಾಗೇಂದ್ರಪ್ಪ, ಸಿ.ಪಿ.ಐ ಮಂಜುನಾಥ್, ನಾರಾಯಣಪ್ಪ, ಬೊಮ್ಮಣ್ಣ, ಜ್ಯೋತಿ ಗೌಡ, ಎಸ್. ಇಬ್ರಾಹಿಂ ಎಸ್. ಶುಕೂರು, ಜಯರಾಮ್, ಶ್ರೀನಿವಾಸ್, ನಿಜಲಿಂಗಪ್ಪ.ಡಿ ಮುತ್ಯಾಪಾಲಯ್ಯ, ಬೇಕ್ರಿ ಸುರೇಶ, ಕೆ ಇ ಬಿ. ಅಜಯ್ ಕುಮಾರ ಇನ್ನೂ ಮುಂತಾದವರು ಇದ್ದರು ಹಾಗೆ ಈ ಸಂದರ್ಭದಲ್ಲಿ ಗುಡೇಕೋಟೆ ಆರಕ್ಷಕ ಠಾಣೆಯ ಸಿಬ್ಬಂದಿಗಳು ಬಂದೋಬಸ್ತ್ ನೀಡುವುದರೊಂದಿಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಕೆ ರಾಘವೇಂದ್ರರಾವ್ ಅವರು ಪ್ರಾಮಾಣಿಕವಾಗಿ ಎಲ್ಲಾ ರೈತರಿಗೆ ಹಾಗೂ ಊರಿನ ಜನತೆಗೆ ಕೆಲಸ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button