“ದಕ್ಷಿಣ ಭಾರತದ ಕುಂಭಮೇಳ – ಕೊಪ್ಪಳದ ಜಾತ್ರೋತ್ಸವ”…..

ಕೊಪ್ಪಳದ ಜಾತ್ರೆ ಎಂದರೆ ಅದು ಬರೆ ಜಾತ್ರೆಯಲ್ಲೋ ಜನಗಳ ಮಹಾ ಸಾಗರ ಜನೋತ್ಸವದ ಸಮೂಹ ಈ ಜಾತ್ರೆ ನೋಡಲು ಎರಡು ಕಣ್ಣುಗಳು ಸಾಲದು ಇಡೀ ದೇಶಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್ ದಲ್ಲಿ ಸದ್ಯ ನಡೆಯುತ್ತಿರುವ ಪೂರ್ಣ ಕುಂಭ ಮೇಳ ಒಂದೆಡೆಯಾದರೆ ಇದೇ ಸಮಯಕ್ಕೆ ನಡೆಯುವ ಕೊಪ್ಪಳದ ಜಾತ್ರೆ ದಕ್ಷಿಣ ಭಾರತ ಕುಂಭ ಮೇಳಕ್ಕೆ ಸಾಕ್ಷಿಯಾಗುತ್ತಿದೆ. ಗವಿಮಠ ಜಾತ್ರೆ ಉತ್ತರದ ಕುಂಭ ಮೇಳಕ್ಕೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಬಿಂಬಿತವಾಗಿರುವ ಈ ಜನಗಳ ರಾಸಿಯ ದೊಡ್ಡ ಪ್ರಮಾಣ ಜನ ಸಮೂಹವೇ ಸಮ್ಮಿಲನವಾಗುವ ಗವಿಮಠದ ಜಾತ್ರೆಗೆ ಮಾರು ಹೋಗದವರೇ ಇಲ್ಲ, ದಕ್ಷಿಣದ ಕಾಶಿ, ಉತ್ತರ ಕರ್ನಾಟಕದ ಸಿದ್ದಗಂಗೆ, ನಡೆದಾಡುವ ದೇವರು, ಸರ್ವ ಭಕ್ತರ ಭಾಗ್ಯ ವಿಧಾತ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಿದ ಮಹಾಯೋಗಿ. ಹೀಗೆ ಅನೇಕ ಬಿರುದುಗಳನ್ನು ಹೊಂದಿರುವ ಗವಿ ಶ್ರೀ ವಿಶಿಷ್ಟ ಮತ್ತು ವಿಶೇಷತೆಯ ಕ್ರಾಂತಿಯ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದ ಕಾಶಿಯನ್ನೇ ಶ್ರೀಮಠದಲ್ಲಿ ನಿರ್ಮಿಸಿದ್ದಾರೆ ಇದಕ್ಕೆಲ್ಲ ಸಾಕ್ಷಿಯೇ ಸದ್ಯ ನಡೆಯುತ್ತಿರುವ ಕೊಪ್ಪಳದ ದೊಡ್ಡ ಪ್ರಮಾಣದ ಸುಮಾರು ಎಂಟರಿಂದ ಹತ್ತು ಲಕ್ಷ ಜನರು ಜನರು ಒಂದೆಡೆ ಸಮ್ಮಿಲನವಾಗಿ ನಡೆಯುವ ಅದ್ಭುತ ಜಾತ್ರೆಗೆ ಕೊಪ್ಪಳದ ಗವಿಮಠ ಸಾಕ್ಷಿಯಾಗುತ್ತಿದೆ.
ಮೊದಲು ಶ್ರೀ ಮಠದ ವಿದ್ಯಾರ್ಥಿಯಾಗಿದ್ದ ಶ್ರೀಗಳು ಅಜ್ಜ ಹಾಕಿದ ಆಲದ ಮರ ಎಂಬಂತೆ ಗವಿಸಿದ್ದೇಶ್ವರರು ಹಾಗೂ ಶಿವಶಾಂತ ಶರಣರು ಬೆಳೆಸಿದ ಆಲದ ಮರವನ್ನು ಹೇಮ್ಮರವಾಗಿ ಗವಿಮಠವನ್ನು ವಿಭಿನ್ನ ವಿಶೇಷತೆ ವಿಶಿಷ್ಟತೆ ಯಿಂದ ಶಿಕ್ಷಣ ಮತ್ತು ದಾಸೋಹಕ್ಕೆ ಪ್ರಾತಿನಿಧ್ಯ ನೀಡಿ ಪ್ರಸಿದ್ಧಿ ಪಡೆದು ಭಾರತ ದೇಶದಲ್ಲಿಯೇ ವಿಭಿನ್ನ ಮಠವನ್ನಾಗಿ ಹೊರ ಹೊಮ್ಮುಸುತ್ತಿದ್ದಾರೆ ಪ್ರತಿ ನಿತ್ಯ 5000 ವಿದ್ಯಾರ್ಥಿಗಳಿಗೆ ಉಚಿತ ಪಾಠ ಪ್ರಸಾದ ನೀಡುವ ಶ್ರೀಗಳು ದಿನಾಲು ಮಠಕ್ಕೆ ಹರಸಿ ಬರುವ ಸಾವಿರಾರು ಭಕ್ತರಿಗೆ ಪ್ರತಿನಿತ್ಯ ದಾಸೋಹ ಸೇವೆ ಮಾಡುತ್ತಾ ಭಕ್ತರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದು ಬಿಟ್ಟಿದ್ದಾರೆ ಪ್ರತಿ ಅಮಾವಾಸ್ಯೆಗೆ ಸುಮಾರು 15 ರಿಂದ 18 ಕ್ವಿಂಟಲ್ವ ಅಕ್ಕಿ ಹಾಗೂ 04 ಕ್ವಿಂಟಲ್ ರವೆ, ಅನ್ನ ಸಜ್ಜಕ ಪ್ರಸಾದ ಉಣ ಬಡಿಸುವ ಗವಿ ಶ್ರೀಗಳ ದರ್ಶನಕ್ಕೆ ಬಂದ ಪ್ರತಿಯೊಬ್ಬರಿಗೂ ಆಶೀರ್ವಾದ ಪಡೆದು ಕೊಳ್ಳುವುದಕ್ಕಿಂತ ಮುಂಚೆನೇ ಭಕ್ತರಿಗೆ ಪ್ರಸಾದ ಮಾಡಿರಿ ಎನ್ನುವ ಮಾತು ಪ್ರತಿಯೊಬ್ಬರಿಗೂ ಮನ ಮುಟ್ಟುವಂತಿರುತ್ತದೆ. ಗವಿಮಠದ ಜಾತ್ರೆಯ ಸಂದರ್ಭದಲ್ಲಿ ವಿಶೇಷ ಅಡಿಗೆಯ ಮೂಲಕ ಪ್ರಸಾದವನ್ನು ಉಣ ಬಡಿಸುವ ಶ್ರೀಗಳು ಜಾತ್ರೆಗೆ ಸೇರಿದ್ದ ಸುಮಾರು ಎಂಟರಿಂದ ಹತ್ತು ಲಕ್ಷ ಜನರಿಗೆ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಪ್ರತಿ ವರ್ಷ ಒಂದೊಂದು ವಿಶೇಷ ಪ್ರಸಾದ ವ್ಯವಸ್ಥೆ ಮಾಡಿ ಜಾತ್ರೆಗೆ ಬಂದು ಪ್ರತಿಯೊಬ್ಬ ಭಕ್ತರಿಗೆ ಪ್ರಸಾದ ಸಿಗುವಂತೆ ನೋಡಿ ಕೊಂಡು. ಮಠದ ಕಾಯಕದಲ್ಲಿ ಸ್ವತ್ತ ಶ್ರೀಗಳೇ ನಿಂತು ಕಾಯಕ ಮಾಡುವುದರ ಜೊತೆಗೆ ಇಡೀ ಸಮಾಜಕ್ಕೆ ಮಾದರಿ ಯಾಗಿದ್ದಾರೆ.
ಸದಾ ಕಾಲ ಸರ್ವ ಜನಾಂಗವನ್ನು ತನ್ನತ್ತ ಕೈಬೀಸಿ ಕರೆಯುವ ಸಮಾಜ ಮುಖಿ ಕೆಲಸ ಮಾಡುವ ಶ್ರೀಗಳು ಯಾವತ್ತು ಶ್ರೀಮಠದಲ್ಲಿ ಜಾತಿ ಭೇದ ಭಾವ ಮಾಡದೆ ಗವಿಮಠವನ್ನು ಭಾವೈಕ್ಯತೆಯ ಮಠವನ್ನಾಗಿ ನಿರ್ಮಾಣ ಮಾಡಿದ್ದಾರೆ ಶ್ರೀಮಠಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು ಅದರಲ್ಲಿ ನೂರಾರು ಮುಸ್ಲಿಂ ಭಕ್ತರು ಇರುತ್ತಾರೆ ಪವಿತ್ರ ಕ್ಷೇತ್ರ ಕೊಪ್ಪಳದ ಗವಿಮಠಕ್ಕೆ ತೆರಳುವಾಗ ಅಲ್ಲಿ ಯಾವುದೇ ಜಾತಿ ಭೇದ ಭಾವ ಇಲ್ಲದೆ ಮುಸ್ಲಿಂ ಪುರುಷ ಮಹಿಳೆಯರು ಗವಿಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ ಪವಿತ್ರ ಕ್ಷೇತ್ರ ಕೊಪ್ಪಳದ ಗವಿಮಠ ಇಂತಹ ಸಾಮರಸ್ಯದ ಸ್ವಾರಸ್ಯ ಜನಗಳ ಮನಸ್ಸಿನಲ್ಲಿ ಅಚ್ಚಳೆಯುವಂತೆ ಬೇರೂರಿ ಸಮಾಜಕ್ಕೆ ಪರಿವರ್ತನೆಯ ದಾರಿ ತೋರಿಸುತ್ತಿದ್ದಾರೆ. ಹಿಂದೂ ದೇವಾಲಯಗಳ ಅಷ್ಟೇ ಅಲ್ಲದೆ ಅನೇಕ ಮುಸ್ಲಿಂ ಮಸೀದಿ ಮನೆಗಳಿಗೆ ತೆರಳಿ ಭಾವೈಕ್ಯತೆಯ ದೀಪವನ್ನು ಭಕ್ತರ ಮನದಲ್ಲಿ ಹಚ್ಚುತ್ತಿದ್ದಾರೆ. ಇತ್ತೀಚಿಗಂತೂ ಮಸೀದಿ ಉದ್ಘಾಟನೆಗೆ ತೆರಳಿ ಭಾವೈಕ್ಯತೆಯ ಸಂದೇಶ ಸಮಾಜಕ್ಕೆ ಸಾರಿ ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲಾ ಜಾತಿಯು ಒಂದೇ ಎನ್ನುವ ರೀತಿ ಜನರನ್ನು ಬಿಂಬಿಸುವಂತೆ ಪ್ರೇರೇಪಣೆ ಮಾಡಿರುತ್ತಾರೆ.

ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮ ಎಂಬ ಮಕ್ಕಳಿಲ್ಲದ ತಾಯಿಯನ್ನು ಗುರುತಿಸಿದರ ಫಲವಾಗಿ 2023 ನೇ. ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಮೂಲ ಕಾರಣವೇ ಗವಿಮಠದ ಶ್ರೀಗಳು ಎಂದರೆ ತಪ್ಪಾಗಲಿಕ್ಕಿಲ್ಲ. 2023 ರ ಜಾತ್ರಾ ಕಾರ್ಯಕ್ರಮದಲ್ಲಿ ಬುದ್ದಿ ಮಾಂದ್ಯ ಮಹಿಳೆ ಒಬ್ಬಳು ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಶ್ರೀಗಳ ಕೊಂಡಾಡಿದ್ದು ಸರ್ವ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬುದ್ಧಿ ಮಾಂದ್ಯರ ಮೇಲೆಯೂ ಇಷ್ಟೊಂದು ಪರಿಣಾಮ ಬೀರುವಂತೆ ಸಾಮಾಜಿಕ ಕಾರ್ಯ ಮಾಡುತ್ತಿರುವ ಗವಿಸಿದ್ದೇಶ್ವರ ಶ್ರೀಗಳು ಈ ಭೂಮಿಗೆ ಧಾವಿಸಿದ ನಡೆದಾಡುವ ದೇವರು ಪ್ರತಿ ವರ್ಷ ಜಾತ್ರೆಗೆ ಮಹಾನ ದೊಡ್ಡ ದೊಡ್ಡ ಸಾಧಕರನ್ನು ಕರೆಯಿಸಿ ಅವರಿಂದ ಉತ್ತರ ಕರ್ನಾಟಕದ ಭಕ್ತರ ಭಕ್ತಿಯನ್ನು ಅವರಿಗೆ ತೋರಿಸುತ್ತಿದ್ದಾರೆ ಅವರಿಂದ ಭಕ್ತರಿಗೆ ಸಾಧಕರಾಗುವಂತೆ ಪ್ರೇರೇಪಿಸುತ್ತಾರೆ ಮತ್ತು ಮಹಾನ್ ಸಾಧಕರನ್ನು ಉತ್ತರ ಕರ್ನಾಟಕದ ಭಕ್ತರಿಗೆ ಪರಿಚಯ ಮಾಡಿಸಿ ಪುನೀತರನ್ನಾಗಿ ಮಾಡುತ್ತಾರೆ ಇಂದಿನ ಆಧುನಿಕ ಜಗತ್ತಿನಲ್ಲಿ ಇಂತಹ ಸ್ವಾಮೀಜಿಗಳು ಸಿಗುವುದು ತುಂಬಾ ಅಪರೂಪ ಅಂತವರ ಜನಿಸಿದ ನಾಡಿನಲ್ಲಿಯೇ ನಾವು ಜನಿಸಿರುತ್ತೇವೆ ಎನ್ನುವುದೇ ನಮಗೆ ಹೇಮ್ಮ.
ಪ್ರತಿ ವರ್ಷದಂತೆ ಈ ವರ್ಷದ ಜಾತ್ರೆಯು ಕೂಡ ವಿಶೇಷತೆಯಿಂದ ನಡೆಸುತ್ತಿದ್ದು ಕಳೆದ 2023 ನೇ. ಸಾಲಿನಲ್ಲಿ ಅಂಗಾಂಗಗಳ ದಾನ ಮಾಡುವ ಮೂಲಕ ವಿಶೇಷ ಜಾಗೃತಿ ಜನರಲ್ಲಿ ಮೂಡಿಸುವ ಪ್ರಯತ್ನದಿಂದಾಗಿ ಸಾಕಷ್ಟು ಜನರು ಶ್ರೀಮಠದ ಕರೆಗೆ ಕೈಜೋಡಿಸಿ ಸಹಕರಿಸಿದ್ದು ಒಂದು ಸ್ಮರಣೀಯ ಒಂದೊಂದು ವಿಶೇಷತೆಯಿಂದ ಜಾತ್ರೋತ್ಸವವನ್ನು ನಿರ್ವಹಿಸುತ್ತಿರುವ ಗವಿಶ್ರೀಗಳು 2024 ರಲ್ಲಿ ಅಂಗವಿಕಲರ ಬಾಳಲ್ಲಿ ಕಂಕಣ ಭಾಗ್ಯ ನೀಡಿ ಇಬ್ಬರು ಅಂಗವಿಕಲರ ಮನಸ್ಸುಗಳನ್ನು ಒಂದು ಮಾಡುವ ಉದ್ದೇಶದಿಂದ ಅಂಗವಿಕಲರ ಮನಸ್ಸುಗಳನ್ನು ಒಂದು ಮಾಡಿ ಅಂಗವಿಕಲರ ಮದುವೆಗಳನ್ನು ಮಾಡಿರುವುದು ತುಂಬಾ ವಿಶೇಷತೆ ಪಡೆದು ಕೊಂಡಿದೆ ಈ ವರ್ಷದ ಜಾತ್ರೆಯನ್ನು ನೆರವೇರಿಸುವ ಗವಿ ಶ್ರೀಗಳು ಪ್ರಸಾದ ವ್ಯವಸ್ಥೆ ಇಡೀ ಭಾರತ ದೇಶಕ್ಕೆ ಮಾದರಿಯನ್ನುವಂತೆ ಅಚ್ಚರಿಯ ರೀತಿಯಲ್ಲಿ ಪ್ರಸಾದವನ್ನು ಅಚ್ಚು ಕಟ್ಟಾಗಿ ಸುಮಾರು 20 ಲಕ್ಷ ಭಕ್ತರಿಗೆ ಪರಿ ಪೂರ್ಣವಾಗಿ ಮುಟ್ಟುವಂತ ವ್ಯವಸ್ಥೆ ಮಾಡುವಲ್ಲಿ ಸ್ವತ ಶ್ರೀಗಳೇ ಜಾಗೃತ ಗೊಂಡು ಈ ಮೊದಲು ನಡೆದ ಜಾತ್ರೆಗಳಲ್ಲಿ ಆದ ಪ್ರಮಾದಗಳನ್ನು ಗಮನಿಸಿ ಈ ವರ್ಷ ನಡೆಯುವ ಜಾತ್ರೆಯಲ್ಲಿ ಹೋದ ವರ್ಷ ಆದ ತಪ್ಪುಗಳು ಪ್ರಮಾದಗಳು ಮತ್ತೊಮ್ಮೆ ನಡೆಯ ಬಾರದು ಎನ್ನುವ ನಿಟ್ಟಿನಲ್ಲಿ ತಾವೇ ಸ್ವತಃ ಮುಂದೆ ನಿಂತು ಪ್ರಸಾದ ವ್ಯವಸ್ಥೆಯ ಮಾಡುವ ಜವಾಬ್ದಾರಿ ವಹಿಸಿ ಕೊಳ್ಳುವುದರ ಜೊತೆಗೆ ಸವಿ ಸವಿಯಾದ ರುಚಿ ರುಚಿಯಾದ ಉತ್ತರ ಕರ್ನಾಟಕದ ವಿಶೇಷ ಊಟವನ್ನು ಜಾತ್ರೆ ಬರುವ ಭಕ್ತರಿಗೆ ಮೃಷ್ಟಾನ್ನ ಭೋಜನ ಉಣ ಬಡಿಸುತ್ತಿರುವುದು ಜಾತ್ರೆಗೆ ಬರುವ ಭಕ್ತರಿಗೆ ವಿಶೇಷವಾದ ಖುಷಿಯನ್ನು ನೀಡುತ್ತಿದೆ ಕೊಪ್ಪಳದ ಶ್ರೀಮಠದಲ್ಲಿ ಅನ್ನ ಅಕ್ಷರ ದಾಸೋಹಕ್ಕೆ ಒತ್ತು ನೀಡುವ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಬಡವರ ನಿರ್ಗತಿಕರ ಅಭಿವೃದ್ಧಿಗೆ ಶ್ರಮಿಸುತ್ತಾ ಯಾವುದೇ ಜಾತಿ ಭೇದ ಭಾವವನ್ನು ಮಾಡೋದೆ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುತ್ತಾ ಇಡೀ ಭಾರತ ದೇಶದ ಜನರನ್ನು ಕೊಪ್ಪಳ ಮಠದತ್ತ ಸೆಳೆಯುವಂತೆ ಮಾಡುತ್ತಿದ್ದಾರೆ.
ಕಾಯಕ ಯೋಗಿ ಗವಿಶ್ರೀ:-
ಪ್ರತಿ ವರ್ಷ ಜಾತ್ರೆ ಪ್ರಾರಂಭದಕ್ಕಿಂತ ಒಂದು ತಿಂಗಳ ಮುಂಚೆ ಜಾತ್ರೆ ಸಿದ್ಧತೆ ಪ್ರಾರಂಭಿಸುವ ಗವಿ ಶ್ರೀಗಳು ಸ್ವತಃ ಕಾಯಕ ಯೋಗಿಗಳಾಗಿ ಬಸವಣ್ಣನವರ ಉಕ್ತಿಯಂತೆ ಕಾಯಕವೇ ಕೈಲಾಸ ಎನ್ನುವಂತೆ ಮಠದ ಪ್ರತಿಯೊಂದು ಕಾಯಕದಲ್ಲಿ ಕಸ ಗೂಡಿಸುವುದರಿಂದ ಹಿಡಿದು ಮಠದ ಎಲ್ಲಾ ಕಾರ್ಯಗಳಲ್ಲಿ ಸ್ವತಃ ತಾವೇ ಭಾಗಿಯಾಗಿ ನಿರ್ವಹಣೆಯ ಜೊತೆಗೆ ಜವಾಬ್ದಾರಿತವಾಗಿ ಕೆಲಸ ನಡೆಯುವಂತೆ ನೋಡಿ ಕೊಳ್ಳುವ ಹವ್ಯಾಸ ಶ್ರೀಗಳು ಮೈಗೂಡಿಸಿ ಕೊಂಡಿದ್ದಾರೆ ಮಠದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಶ್ರೀಗಳು ಸ್ವಚ್ಛತೆಯ ಬಗ್ಗೆ ಸದಾ ಪಳ ಪಳನೆ ಹೊಳೆಯುವಂತೆ ಮಠವು ಕಂಗೊಳಿಸುತ್ತಿರುವಂತೆ ನೋಡಿ ಕೊಳ್ಳುತ್ತಿದ್ದಾರೆ ಇಷ್ಟೆಲ್ಲ ಸ್ವಚ್ಚತೆಯಿಂದ ಕೆಲಸ ಕಾರ್ಯ ಮಾಡುವ ಶ್ರೀಗಳು ಕಾಯಕವೇ ಕೈಲಾಸ ಎಂದು ನಂಬಿ ಇವತ್ತಿನ ಸಮಾಜಕ್ಕೆ ಕಾಯಕ ಯೋಗಿಗಳಾಗಿ ಭಕ್ತರ ಬಾಳಿನ ಭಾಗ್ಯ ಜ್ಯೋತಿಗಳಾಗಿ ಅಂಗವಿಕಲರ ಅನಾಥರ ಬಡವರ ದೀನ ದಲಿತರ ಆಶಾದಾಯಕರಾಗಿ ಸರ್ಕಾರಗಳು ಸಂಘ ಸಂಸ್ಥೆಗಳು ಮಾಡುವ ಕಾರ್ಯಗಳಲ್ಲಿ ಸಮನಾಗಿ ಸರಿ ದೂಗಿಸಿಕೊಂಡು ಹೋಗುವಲ್ಲಿ ಸದಾ ಆತೊರೆ ಯುತ್ತಿರುವ ಗವಿಶ್ರೀಗಳು ಸಮಾಜದ ಒಳತಿಗಾಗಿ ಸದಾ ಕಾಲವೂ ದುಡಿಮೆಯೇ ದೇವರು ಎಂದು ನಂಬಿ ಕಾಯಕದ ಕೈಲಾಸದಲ್ಲಿ ನಿರತ ರಾಗಿರುತ್ತಾರೆ.

ಚಿಕ್ಕೇನಕೊಪ್ಪ ಶ್ರೀಗಳ ಜೊತೆ ಅಸಂಖ್ಯಾತ ಭಕ್ತರ ದೀಡ ನಮಸ್ಕಾರ ಹಾಕುವ ಪರಂಪರೆ:-
ರಥೋತ್ಸವ ಮುಗಿದ ಮರು ದಿವಸ ಹಿರಿಯ ಚಿಕ್ಕೇನಕೊಪ್ಪ ಶ್ರೀಗಳ ಆಜ್ಞೆಯಂತೆ ಕಿರಿಯ ಶ್ರೀಗಳು ದೀಡು ನಮಸ್ಕಾರ ಹಾಕುವ ಸಂದರ್ಭದಲ್ಲಿ ಗವಿಸಿದ್ದೇಶ್ವರನ ಗದ್ದುಗೆಗೆ ಅಸಂಖ್ಯಾತ ಗವಿಸಿದ್ದೇಶನ ಭಕ್ತರು ದೀಡ ನಮಸ್ಕಾರ ಹಾಕುವ ಪರಂಪರೆಯು ಮೊದಲಿನಿಂದಲೂ ಬಂದಿದ್ದು ಚಿಕ್ಕೆನಕೊಪ್ಪ ಶ್ರೀಗಳ ಜೊತೆಗೆ ಅಸಂಖ್ಯಾತ ಭಕ್ತರು ಗದ್ದುಗೆಗೆ ದೀಡು ನಮಸ್ಕಾರ ಹಾಕುವ ಸಂಭ್ರಮ ನೋಡುವುದೇ ನಮ್ಮ ಭಾಗ್ಯ ಎಂಬುದು ಭಕ್ತರ ನಂಬಿಕೆ ಅಯ್ಯಪ್ಪ ಸ್ವಾಮಿಯ ಜ್ಯೋತಿಯನ್ನು ನೋಡಲು ಭಕ್ತರು ಹೇಗೆ ಕಾತುರದಿಂದ ಕಾಯುತ್ತಾರೆಯೋ ಅದೇ ರೀತಿ ಕೊಪ್ಪಳದ ಗವಿಮಠದಲ್ಲಿ ಅಸಂಖ್ಯಾತ ಭಕ್ತರು ದೀಡ ನಮಸ್ಕಾರ ಹಾಕುವ ದೃಶ್ಯವನ್ನು ನೋಡಿ ಕಣ್ತುಂಬಿ ಕೊಳ್ಳುತ್ತಾರೆ. ಜಾತ್ರೆಯ ಮಹೋತ್ಸವಕ್ಕೆ ಕೊಪ್ಪಳ ಸುತ್ತ ಮುತ್ತಲಿರುವ ಜಿಲ್ಲೆಗಳಿಂದ ಅಸಂಖ್ಯಾತ ಜನರು ಪಾದಯಾತ್ರೆ ಮಾಡಿಕೊಂಡು ಗವಿಸಿದ್ದೇಶ್ವರ ಮಹಾರಾಜ್ ಕಿ ಜೈ ಅನ್ನುವ ವಾಣಿವೊಂದಿಗೆ ಭಕ್ತರು ಗವಿಸಿದ್ದೇಶ್ವರನ ಮಠಕ್ಕೆ ಉಪವಾಸ ವೃತವನ್ನು ಕೈಗೊಂಡು ಚಪ್ಪಲಿ ಹಾಕದೆ ಬರಗಾಲನಿಂದ ನಡೆದುಕೊಂಡು ಬಂದು ಗವಿಸಿದ್ದಪ್ಪಜ್ಜನ ಗದ್ದುಗೆಯ ದರ್ಶನ ಪಡೆದುಕೊಂಡ ಪುನೀತರಾಗುತ್ತಾರೆ ನಂತರ ಪ್ರಸಾದ ಸ್ವೀಕರಿಸುವ ಮೂಲಕ ಉಪವಾಸ ವೃತ ಮುಗಿಸುತ್ತಾರೆ. ಈ ಬಾರಿ ಜಿಲೇಬಿ ಸವಿಯಲಿರುವ ಭಕ್ತರು:-ಪ್ರತಿ ವರ್ಷ ಜಾತ್ರೆಗೆ ಬರುವ ಪ್ರತಿಯೊಬ್ಬ ಭಕ್ತರಿಗೂ ಒಂದೊಂದು ವಿಶೇಷ ಪದಾರ್ಥವನ್ನು ಪ್ರಸಾದವನ್ನಾಗಿ ಉಣ ಬಡಿಸುವ ಗವಿಶ್ರೀಗಳು ಈಗಾಗಲೇ ಕರ್ಚಿಕಾಯಿ ಕಡುಬು ಸಿಂಗಾ ಹೋಳಿಗೆ ಎಳ್ಳು ಹೋಳಿಗೆ ಮಾದ್ಲಿ ಬುಂದೆ ಮೋತಿಚೂರ್ ಗೆ ಪ್ರತಿ ವರ್ಷ ಒಂದೊಂದು ವಿಶೇಷತೆ ಯೊಂದಿಗೆ ಪ್ರತಿ ವರ್ಷವೂ ಖಡಕ್ ರೊಟ್ಟಿ ಪಲ್ಲೆ ಬಿಸಿ ಬಿಸಿ ಮಿರ್ಚಿ ಚಟ್ನಿ ಉಪ್ಪಿನಕಾಯಿ ಹುಂಚಿ ಚಟ್ನಿ ಜೊತೆಗೆ ಅನ್ನ ಸಾಂಬಾರ್ ಜೊತೆಗೆ ಈ ವರ್ಷದ ವಿಶೇಷ ಜಿಲೇಬಿ ಜಾತ್ರೆಗೆ ಬರುವ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಕಟ್ಟಾದ ಪ್ರಸಾದ ಊಟ ಮಾಡುವ ಭಕ್ತರು ಅಜ್ಜನನ್ನು ನೆನೆಸದೆ ಯಾರು ಇರಲಾರರು.ರೊಟ್ಟಿ ಜಾತ್ರೇಯ ಸಂಭ್ರಮ:-ಭಕ್ತರಿಂದಲೇ ಭಕ್ತರಿಗಾಗಿ ಭಕ್ತರಿಗೋಸ್ಕರ ಅಸಂಖ್ಯಾತ ರೊಟ್ಟಿಗಳು ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ಬರುತ್ತಿದ್ದು ಸುಮಾರು 20 ಲಕ್ಷ ರೊಟ್ಟಿಗಳು ಪ್ರತಿ ವರ್ಷ ಜಾತ್ರೆಗೆ ಬರುತ್ತವೆ ಎಂದು ಅಂದಾಜಿಸಲಾಗಿದ್ದು ಇದನ್ನು ದಕ್ಷಿಣ ಭಾರತದ ಕುಂಭಮೇಳ ಉತ್ತರ ಕರ್ನಾಟಕದ ಸಿದ್ದಗಂಗೆ ಹೀಗೆ ಅನೇಕ ಪ್ರಸಿದ್ಧಿ ಜೊತೆಗೆ ಕೊಪ್ಪಳದ ಜಾತ್ರೆ ದಕ್ಷಿಣ ಭಾರತದ ರೊಟ್ಟಿಯ ಜಾತ್ರೆ ಎಂದು ಪ್ರಖ್ಯಾತಿ ಪಡೆದಿದೆ ಹೀಗೆ ಕೊಪ್ಪಳದ ಮಠವು ಹಲವಾರು ವಿಶೇಷತೆ ಯೊಂದಿಗೆ ಪ್ರತಿ ವರ್ಷದ ಜಾತ್ರೆಯು ವಿಭಿನ್ನ ವಿಶೇಷತೆ ಯಿಂದ ನಡೆಯುವ ಪ್ರತೀತೆಯನ್ನು ಮುಂದುವರಿಸಿ ಕೊಂಡು ಬಂದಿದೆ. ಕೊಪ್ಪಳ ಜಾತ್ರೆ ಒಂದುವರೆ ತಿಂಗಳ ಇರುವಾಗಲೇ ಕೊಪ್ಪಳ ರಾಯಚೂರ ಬಳ್ಳಾರಿ ಗದಗ ವಿಜಯನಗರ ಬಾಗಲಕೋಟೆ ಹಾವೇರಿ ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ಗವಿಶ್ರೀ ಮಠದ ಭಕ್ತರು ಅನೇಕ ಸಾಮಗ್ರಿಗಳ ಜೊತೆಗೆ ರೆಡಿಯಾದ ಅಡುಗೆ ತಂದು ಕೊಡುವ ಪ್ರತೀತೆಯನ್ನು ವರ್ಷ ದಿಂದ ವರ್ಷಕ್ಕೆ ಹೆಚ್ಚು ಮಾಡುತ್ತಿದ್ದಾರೆ ಗವಿಶ್ರೀಗಳು ಮಾಡುವ ಭಕ್ತರ ಸೇವೆಗೆ ಭಕ್ತರು ಮಾರು ಹೋಗಿ ಗವಿಮಠದ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲು ತಮ್ಮ ಕೈಲಾದಷ್ಟು ತನು ಮನ ಧನ ಸೇವೆಯನ್ನು ಸಲ್ಲಿಸಿ ಶ್ರೀಗಳ ಕೈಗಳನ್ನು ಬಲ ಪಡಿಸುತ್ತಾ ಕೊಪ್ಪಳದ ಜಾತ್ರೆಯನ್ನು ಇದೇ ಜಾತ್ರೆಯಲ್ಲೂ ಕುಂಭಮೇಳ ಎನ್ನುವಂತೆ ದಕ್ಷಿಣ ಭಾರತದ ಕುಂಭ ಮೇಳವನ್ನಾಗಿ ಜಾತ್ರೆಯ ಸಂಭ್ರಮವನ್ನು ಶ್ರೀಗಳು ಭಕ್ತರೊಂದಿಗೆ ಆಚರಿಸುತ್ತಿರುವುದು ಕೊಪ್ಪಳ ಮಠದ ಕೀರ್ತಿಯ ಸಾಧನೆಯ ಹಾದಿಯ ಮುಕುಟದ ಸಿರಿಯನ್ನ ಮುಗಿಲಿಗೆ ಮುಟ್ಟಿಸಿದ್ದಾರೆ.
••• ಜಗದೀಶ.ಎಸ್ ಗಿರಡ್ಡಿ.
ಲೇಖಕರು ಗೊರಬಾಳ.
ಇಲಕಲ್ಲ.9902470856
ತಾಲೂಕ ವರದಿಗಾರರು , ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್. ಕಳ