ದಲಿತ ಮುಖಂಡ ಡಿ.ರಾಮು ವಿರುದ್ಧ – ಪೊಲೀಸ್ ಗೆ ದೂರು.

ನರಸಿಂಹರಾಜಪುರ ಜ .12

ದಲಿತ ಸಮುದಾಯ ದವರಿಂದ ಅಟ್ರಾಸಿಟಿ ಕೇಸ್ ದಾಖಲಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನರಸಿಂಹರಾಜಪುರ ಪೊಲೀಸ್ ಠಾಣೆಗೆ ಮಂಜುನಾಥ್ ದೂರು ನೀಡಿದ್ದಾರೆ. ರಾಧಾ ಎಂಬುವವರಿಂದ ಎನ್.ಆರ್ ಪುರ ತಾಲೂಕು ಮೆಣಸೂರು ಗ್ರಾಮದ ಸಿಬ್ಬಿರವರ ಮೇಲೆ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿ, ಅವರನ್ನು ಜಾಮೀನಿನ ಮೇಲೆ ಬಿಡುಸುತ್ತೇನೆ ಎಂದು ಸಿಬ್ಬಿ ಅವರ ಅಕ್ಕನ ಬಳಿ ಹಣದ ಬೇಡಿಕೆ ಇಟ್ಟಿರುವುದಾಗಿ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಮಂಜುನಾಥ್ ರವರು ದೂರು ನೀಡಿದ ಹಿನ್ನೆಲೆ ಇನ್ನೂ ಮುಂದೆ ಯಾರ ಬಳಿಯೂ ಹಣದ ಬೇಡಿಕೆ ಇಡುವುದಿಲ್ಲ ಹಾಗೇನಾದರೂ ಕಂಡು ಬಂದರೆ ನನ್ನ ಮೇಲೆ ಕಾನೂನು ಕ್ರಮ ಕೈಗೊಳ್ಳ ಬಹುದು ಎಂದು ನಕಲಿ ದಲಿತ ಮುಖಂಡ ಡಿ.ರಾಮು, ಹಾಗೂ ಜಾರ್ಜ್ ಎಂಬ ವ್ಯಕ್ತಿಯು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿರುವುದು ತಿಳಿದು ಬಂದಿದೆ.

ರಾಮು ಸಿಬ್ಬಿರವರ ಅಕ್ಕನ ಬಳಿ ಮೊಬೈಲ್ ಸಂಭಾಷಣೆಯಲ್ಲಿ ಸರ್ಕಾರಿ ವಕೀಲರಿಗೆ ಮತ್ತು ಜಿಲ್ಲಾ ಸಂಚಾಲಕರಿಗೆ ಹಣ ಕೊಡಬೇಕೆಂದು ಎರಡುವರೆ ಲಕ್ಷ ಹಣ ತೆಗೆದು ಕೊಂಡು ಬನ್ನಿ ಎಂದು ಮಾತನಾಡಿರುವ ಆಡಿಯೋ ರೆಕಾರ್ಡ್ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ, ಇನ್ನೂ ಮುಂದಾದರೂ ಸಾರ್ವಜನಿಕರು ಈತನ ಬಗ್ಗೆ ಎಚ್ಚರ ವಹಿಸಿ, ಮೋಸ ವಂಚನೆಗೆ ಒಳಗಾಗದಿರಿ ಹಾಗೇನಾದರೂ ಕಂಡು ಬಂದರೆ ಪೋಲೀಸಿಗೆ ದೂರು ನೀಡಿರಿ ಎಂದು ಮಂಜುನಾಥ್ ಅವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button