“ಭಾವನೆಗೆ ತಕ್ಕ ಭಾಗ್ಯ”…..

ನಗುವಿಗೆ ಇರುವ ಮೌಲ್ಯ
ಯಾವ ಒಡವೆಗೂ ಇಲ್ಲ
ನಂಬಿಕೆಗಿರುವ ಗೌರವ
ಯಾವ ಪದವಿಗೂ ಇಲ್ಲ
ಸಹಾಯಕ್ಕಿರುವ ಧನ್ಯತೆ
ಯಾವ ಕಾರ್ಯಕ್ಕೂ ಇಲ್ಲ
ಅಸತ್ಯಕಿರುವ ಕಪ್ಪು ಚುಕ್ಕೆ
ನಾಟಕೀಯತನ ನಿಜ ಮರೆಯಾಗದು
ಪ್ರತಿಭೆಗೆ ತಕ್ಕ ಫಲ ತಪ್ಪಿಗೆ ತಕ್ಕ ಶಿಕ್ಷೆ
ಭಾವನೆಗೆ ತಕ್ಕ ಭಾಗ್ಯ
ಸಾಧನಿಗೆ ತಕ್ಕ ಚಪ್ಪಾಳೆ
ಸ್ನೇಹದಂತೆ ಸೌಕರ್ಯ
ಗುರುವಿನಂತೆ ಶಿಕ್ಷಣ ನಡತೆಗೆ ತಕ್ಕ ಶಿಷ್ಯ
ಶ್ರಮಕ್ಕೆ ತಕ್ಕ ಫಲ ಜ್ಞಾನಕ್ಕೆ ತಕ್ಕ ಬಲ
ಸಂಸ್ಕಾರ ಸಂಸ್ಕೃತಿ ಮಾನವನ ಆಚರಣೆ
ಅಹಂಕಾರ ದುರಂಕಾರ ಜಗದ ದಿಕ್ಕಾರ
ಒಳ್ಳೆಯತನಕ್ಕೆ ಅದೃಷ್ಟವಿಲ್ಲ
ಕಷ್ಟದ ಜೀವನವೇ ಬಾಳಿನ ಬೆಳಕು

ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.