ತಗ್ಗು ದಿನ್ನೆಗಳ ರಸ್ತೆ ಸ್ಥಿತಿ ಕಂಡು ಶಾಸಕ ಬಸನಗೌಡ ದದ್ದಲ್ ಗೆ – ಶಾಪ್ ಹಾಕುತ್ತಿರುವ ಜನರು.
ಗೋರ್ಕಲ್ ಜ.15

ಗ್ರಾಮೀಣ ಜನರಿಗೆ ಡಾಂಬರೀಕರಣ ರಸ್ತೆ ಮಾಡುತ್ತೇನೆಂದು ಸುಳ್ಳು ಭರವಸೆ ಕೊಟ್ಟು ಮತ ಪಡೆದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಾಹೇಬ್ರ ಕ್ಷೇತ್ರದ ಕುರ್ಡಿಯಿಂದ ಗೋರ್ಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ಶಾಸಕ ಬಸನಗೌಡ ದದ್ದಲ್ ರನ್ನ ವಿಧಾನ ಸೌಧದ ಮೂರನೆ ಮಹಡಿಯಲ್ಲಿ ಸನ್ಮಾನಿಸ ಬೇಕು.

ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಿಂದ ಗೋರ್ಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಂಡು ಎಷ್ಟೋ ವರ್ಷಗಳಾಗಿವೆ. ಆದರೆ ಶಾಸಕ ಬಸನಗೌಡ ದದ್ದಲ್ ಇದೆ ಮಾರ್ಗವಾಗಿ ಸಂಚಾರ ಮಾಡಿದರು ಸಹ ಅಭಿವೃದ್ಧಿ ಮಾಡುವ ವಿಚಾರ ಇಲ್ಲವಾಗಿದೆ ಎಂದು ಗೋರ್ಕಲ್ ಗ್ರಾಮಸ್ಥರ ಆರೋಪವಾಗಿದೆ.
ಈ ಮಾರ್ಗದಲ್ಲಿ ಗರ್ಭಿಣಿ ಮಹಿಳೆಯರು ಕುರ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಮೂಲಕ ತೆರಳಿದರೆ ತಗ್ಗು ದಿನ್ನೆಗಳಿಗೆ ಮಾರ್ಗದಲ್ಲಿಯೇ ಸಾವು ಅಥವಾ ಡೆಲಿವರಿ ಯಾಗೋದು ಪಕ್ಕಾ. ಇಂತಹ ರಸ್ತೆ ಇನ್ನೂ ಇದೆ ಅಂದ ಮೇಲೆ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿಲ್ಲವೆಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ