ಹೊಸಟ್ಟಿ ಗ್ರಾಮದಲ್ಲಿ ಕೋಣವೊಂದು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದನ್ನು ಕಾಪಾಡಿದ ಅಗ್ನಿಶಾಮಕ ದಳ.
ಹೊಸಟ್ಟಿ ಜೂನ್.20

ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಶ್ರೀಯಲ್ಲಾಲಿಂಗ್ ಐಹೊಳೆರವರ ಕೋಣ ಸೇದು ಬಾವಿಯಲ್ಲಿ ಅಂದಾಜು 30×30 ಅಡಿ ವಿಸ್ತಾರವಾದ 50 ರಿಂದ 55 ಅಡಿ ಆಳದ ಅದರಲ್ಲಿ 10 ಅಡಿ ಆಳದ ತೇರೆದ ನೀರಿರುವ ಭಾವಿ ಆಕಸ್ಮಿಕವಾಗಿ ಕಾಲುಜಾರಿ ಕೋಣ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಅಥಣಿ ಅಗ್ನಿಶಾಮಕ ಠಾಣೆ ದೂರವಾಣಿಗೆ ಕರೆ ಮಾಡಿ ತಿಳಿಸಿದರು, ಕರೆ ಬಂದ ತಕ್ಷಣ ಜಲ ವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 50 ರಿಂದ 55 ಅಡಿ ಆಳದ ಸೇದು ಬಾವಿಯಲ್ಲಿ ಹೋಸ ಹಗ್ಗಗಳ ಸಹಾಯ ದಿಂದ ಕೆಳಗಿಳಿದು ಸುಮಾರು 01:05 ಒಂದು ಘಂಟೆ ಐದು ನಿಮಿಷಗಳ ಕಾಲ ಶ್ರಮವಹಿಸಿ ಸಿಬ್ಬಂದಿಯವರು ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ಕೋಣಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡಧವರು ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಹೊಸಟ್ಟಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ಕೋಣದ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.ಅಗ್ನಿಶಾಮಕ ತಂಡದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರಾದ ಮಲ್ಲಿಕಾರ್ಜುನ ಬಂದಾಳ ರವರ ನೇತ್ರತ್ವದಲ್ಲಿ ಪ್ರಶಾಂತ.ಚವಾಣ ,ಸಚಿನ್ ಹಲ್ಯಾಳ ಮೊಹಸಿನ್ ಪಠಾಣ, ಸಂತೋಷ್ ಧರ್ಮಟ್ಟಿ , ಭಾಗವಹಿಸಿದ್ದರು.