ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಅವರ – ಗ್ರಾಮದಲ್ಲಿ ಕನ್ನಡ ಸಂಭ್ರಮ.

ಜಕ್ಕಲಿ ಜ.21

ಜಕ್ಕಲಿಯಲ್ಲಿ ನುಡಿ ಜಾತ್ರೆಯ ಸಂಭ್ರಮೋತ್ಸವ ಸಾಹಿತ್ಯ ಸಮ್ಮೇಳನದ ತೇರಿಗೆ ಅದ್ಧೂರಿ ಚಾಲನೆ ವಾದ್ಯ ಮೇಳಗಳಿಂದ ಮಾರ್ದನಿಸಿದ ಜಕ್ಕಲಿ ಗ್ರಾಮ ಕನ್ನಡಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿ ಕೊಂಡಿದ್ದ ಅಂದಾನಪ್ಪ ದೊಡ್ಡಮೇಟ ಅವರ ಜನ್ಮಸ್ಥಳ ಜಕ್ಕಲಿಯಲ್ಲಿ ಗದಗ ಜಿಲ್ಲಾ 10 ನೇ. ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಥಕ್ಕೆ ಭಾನುವಾರ ರೋಣ ಮತ ಕ್ಷೇತ್ರದ ಶಾಸಕ ಜಿ.ಎಸ್ ಪಾಟೀಲ್ ಚಾಲನೆ ನೀಡಿದರು.ತದನಂತರ ಮಾತನಾಡಿದ ಅವರು ಕನ್ನಡಕ್ಕಾಗಿ ಶ್ರಮಿಸಿದ ಏಕೀಕರಣದ ರೂವಾರಿ ಧೀಮಂತ. ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಸಮ್ಮೇಳನದ ಜ್ಯೋತಿ ಹಾಗೂ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ಸಿಕ್ಕಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಕನ್ನಡ ಕಟ್ಟಾಳುವಿನ ಕುರಿತು ಹಾಗೂ ಭುವನೇಶ್ವರಿಯ ಕುರಿತು ಈಗಿನ ಯುವ ಪೀಳಿಗೆಗೆ ತಿಳಿಯಲಿದೆ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು. ಈ ಹಿನ್ನೆಲೆಯಲ್ಲಿ ಜಕ್ಕಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಉದ್ದಕ್ಕೂ ಕಂಗೊಳಿಸುವ ರಂಗೋಲಿ ಎಲ್ಲೆಂದರಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದು, ಗ್ರಾಮದುದ್ದಕ್ಕೂ ತಳಿರು ತೋರಣಗಳಿಂದ ಅಲಂಕೃತ ಗೊಂಡಿದೆ.

ಪಂಚಾಯಿತಿ ಆವರಣ, ದೊಡ್ಡಮೇಟಿ ಅವರ ಮನೆಯ ಮುಂಭಾಗದಿಂದ ಅನ್ನದಾನೇಶ್ವರ ಮಠದ ವರೆಗೆ ತೆಂಗಿನ ಗರಿ, ಕನ್ನಡದ ಧ್ವಜಗಳು ಹಾರಾಡುತ್ತಿದ್ದವು. ರಥ ಬೀದಿಯುದ್ದಕ್ಕೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯ ಕರ್ತೆಯರು ರಂಗೋಲಿಯಿಂದ ಶೃಂಗರಿಸಿದ್ದರು. ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಭಾನುವಾರ ಜಕ್ಕಲಿ ಗ್ರಾಮ ಸಂಪೂರ್ಣ ಕನ್ನಡಮಯವಾಗಿತ್ತು. ವಾದ್ಯಮೇಳಗಳು ಮೆರವಣಿಗೆಯುದ್ದಕ್ಕೂ ಕೊಣ್ಣೂರಿನ ಬೊಂಬೆ ವೇಷ ಧಾರಿಗಳು ನೃತ್ಯ ಮಾಡುತ್ತಾ ಕನ್ನಡದ ಮನಸ್ಸುಗಳನ್ನು ತಣಿಸಿದರು ಹೊಸಳ್ಳಿಯ ಮಹಿಳಾ ಹಾಗೂ ಪುರುಷರ ಡೊಳ್ಳಿನ ತಂಡಗಳು ಹುಬ್ಬೇರಿಸುವಂತೆ ನೃತ್ಯದ ಜೊತೆ ಡೊಳ್ಳು ನುಡಿಸಿದರು, ಜೊತೆಗೆ ಕರಡಿ ಮಜಲು, ಜಾಂಜಮೇಳ, ಶಾಲಾ ಮಕ್ಕಳಿಂದ ಡ್ರಮ್ ಸೆಟ್ ಹೀಗೆ ಹತ್ತು ಹಲವಾರು ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ವಿಶೇಷವಾಗಿ ಹಿರಿಯ ಕಾಲದ ಅಲಂಕೃತ ಚಕ್ಕಡಿ. ಕನ್ನಡಾಭಿಮಾನ ಎತ್ತಿ ಹಿಡಿಯಲು ರೈತರು ಆದ ಯಲ್ಲಪ್ಪ ಮಡಿವಾಳರ. ಇಬ್ರಾಹಿಂ ಸಾಹೇಬ್ ಹದ್ಲಿ. ಬಸವರಾಜ್ ಕೊಡಿಕೊಪ್ಪ ಇನ್ನೂ ಅನೇಕರು ಚಕ್ಕಡಿಗಳನ್ನು ಕನ್ನಡ ಧ್ವಜ ದಿಂದ ಅಲಂಕರಿಸಿ ಜಗಮಗಿಸುವಂತೆ ತಾವು ಕೂಡ ತಲೆ ಮೇಲೆ ರುಮಾಲ ಧರಿಸಿ ಅದರಲ್ಲಿ ಮಕ್ಕಳನ್ನು ಕುಳ್ಳರಿಸಿ ಕೊಂಡು ರಥವನ್ನು ಬೀದಿಯುದ್ದಕ್ಕೂ ಸಾಗಿದ ರೈತರ ಕನ್ನಡ ಪ್ರೇಮ ನೋಡುಗರ ಗಮನ ಸೆಳೆಯಿತು. ಇದೆ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡಕ್ಕಾಗಿ ಹೋರಾಟ ಮಾಡಿದ ಹಲವಾರು ಮಹನೀಯರ ವೇಷ ಭೂಷಣದಲ್ಲಿ ಪ್ರದರ್ಶನ ತೋರ್ಪಡಿಸುವ ಮೂಲಕ ದಾರಿಯುದ್ದಕ್ಕೂ ಪುಷ್ಪಾರ್ಚನೆ ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರೆಲ್ಲರೂ ರಥ ಬೀದಿ ಯುದ್ದಕ್ಕೂ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪ ವೃಷ್ಟಿಗೈದರು. ಮೆರವಣಿಗೆಯುದ್ದಕ್ಕೂ ಶಾಸಕರನ್ನೊಳ ಗೊಂಡಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು, ಕನ್ನಡಾಭಿಮಾನಿಗಳು. ಪೊಲೀಸ್ ಇಲಾಖೆಯ ಅಧಿಕಾರಿಗಳು. ತಾಲೂಕು ದಂಡಾಧಿಕಾರಿ ನಾಗರಾಜ ಕೆ. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು. ಶಿಕ್ಷಣ ಇಲಾಖೆ. ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು . ಶಿಕ್ಷಣ ಇಲಾಖೆ ಅಧಿಕಾರಿಗಳು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು. ರೋಣ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಿಥುನ್ ಜಿ.ಪಾಟೀಲ, ರವೀಂದ್ರನಾಥ್ ದೊಡ್ಡಮೇಟಿ, ಎಚ್‌.ಎಸ್‌ ಸೊಂಪೂರ. ಎಂ.ಎಸ್. ದಡೇಸೂರಮಠ. ಮಲ್ಲಿಕಾರ್ಜುನ್ ಮೇಟಿ.ತಾಲ್ಲೂಕು ಘಟಕದ ಕಸಾಪ ಅಧ್ಯಕ್ಷ ಎ.ಪಿ ಗಾಣಗೇರ, ರೋಣ ತಾಲ್ಲೂಕು ಘಟಕದ ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ, ಎಂ.ಎಸ್ ಧಡೆಸೂರಮಠ, ಎಸ್.ಬಿ ಹಿರೇಮಠ, ಬಸವರಾಜ ಕುರಿ, ಮೈಲಾರಪ್ಪ ವೀ. ಚಳ್ಳಮರದ, ಹನಮಂತಪ್ಪ ದ್ವಸಲ್. ಬಸವರಾಜ ತಳವಾರ. ಮುತ್ತು ಮೇಟಿ ವೀರಭದ್ರಪ್ಪ ಗಾಣಿಗೇರ. ವಿ.ಬಿ ಸೋಮನಕಟ್ಟಿಮಠ, ಕೆ.ಬಿ ಧನ್ನೂರ, ರಾಜು ಸಾಂಗ್ಲಿಕರ. ಯಲ್ಲಪ್ಪ ಮಾದರ. ಫಕೀರಪ್ಪ ಮಾದರ. ಬಂದೆನವಾಜ್ ಗಡಾದ್.ಹರ್ಷವರ್ಧನ್ ದೊಡ್ಡಮೇಟಿ. ಇನ್ನೂ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button