“ಸರ್ವಜನ ಭಕ್ತರಿಗೆ ಶುಭತರಲಿ ಜಯ ಶ್ರೀರಾಮಚಂದ್ರ”…..

ದೇವನಾಗರಿ ವಿಷ್ಣು ದೇವತಾ ಅವತಾರಿ
ಶ್ರೀರಾಮಚಂದ್ರ
ವಿಶ್ವ ಆದರ್ಶ ಪುರುಷೋತ್ತಮ ರಘು ಕುಲ
ತಿಲಕ ಶ್ರೀರಾಮ
ದಶರತ ಕೌಶಲ್ಯ ಶ್ರೀರಾಮ ವರಪುತ್ರ ವಸಿಷ್ಠ
ವಿಶ್ವಾಮಿತ್ರ ಇರ್ವರ ಶಿಷ್ಯೋತ್ತಮ ಶ್ರೀರಾಮ
ಸೀತಾಮಾತೆಯ ವಲ್ಲಭ ಶ್ರೀರಾಮಚಂದ್ರ
ಲಕ್ಷ್ಮಣ ಭರತರ ಅಗ್ರಜ ಶ್ರೀರಾಮಶಾಂತ
ಸಹೋದರಿ ಅಚ್ಚುಮೆಚ್ಚು
ಜಗದಿ ಭಾರತ ದೇಶದ ಮಾತಾ ಪಿತೃ
ವಾಕ್ಯಪರಿಪಾಲಕ ಶ್ರೀರಾಮ
ದಂಡಕಾರುಣ್ಯ ವನವಾಸ
ಶ್ರೀರಾಮಚಂದ್ರ
ಜಯ ಹನುಮಾನ ಆತ್ಮಬಲ ರಘುರಾಮ
ದುಷ್ಟ ಸಂಹಾರಕ ಶಿಷ್ಟರ ರಕ್ಷಕ ಶ್ರೀರಾಮ
ರಾವಣ ಯುದ್ಧ
ನೀತಿವಂತ ಸಮರ್ಥ ಕೃತಜ್ಞ ಶೂರ ಸಮಾನ
ಸರ್ವಹಿತ ರಕ್ಷಕ
ನೈತಿಕ ಮೌಲ್ಯ ಮಾನವೀಯಗುಣ
ಶ್ರೀರಾಮಚಂದ್ರ ಜನಮನ ಮನೋಬಲ
ಸಹೋದರತ್ವ ಜಗದಿ ಅಜರಾಮರ
ಧರ್ಮಜ್ಞ ನಿರ್ಮೋಹಿ ಪ್ರಜಾಹಿತ ಶ್ರೀರಾಮ
ಭಕ್ತರ ಭಗವಂತ ಶ್ರೀರಾಮ ಕೃಪೆ
ಸರ್ವಜನ ಭಕ್ತರಿಗೆ ಶುಭತರಲಿ ಜಯ
ಶ್ರೀರಾಮಚಂದ್ರ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ..