ಶ್ರೀ ಸಿದ್ದರಾಮೇಶ್ವರ 852.ನೇಯ ಜಯಂತಿಯನ್ನು ಕೂಡ್ಲಿಗಿ ತಾಲೂಕಾ ಆಡಳಿತದ ನೇತ್ರತ್ವದಲ್ಲಿ ಜರುಗಿತು.

ಕೂಡ್ಲಿಗಿ ಜನೇವರಿ.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ತಾಲೂಕಾ ಆಡಳಿತ ಕಚೇರಿಯಲ್ಲಿ ಸರ್ಕಾರದ ಆದೇಶದಂತೆ ಸೋಮವಾರ ರಂದು ಶ್ರೀ ಜಗದ್ಗುರು ಶಿವಯೋಗಿ ಸಿದ್ದರಾಮೇಶ್ವರರ 852.ನೇ ಜಯಂತಿಯನ್ನು ಬೋವಿ ಸಮುದಾಯದ ಮುಖಂಡರುಗಳು ಹಾಗೂ ಮಾನ್ಯ ತಹಸೀಲ್ದಾರ್ ಶ್ರೀ ಮತಿ ಎಂ ರೇಣುಕಾರವರ ನೇತೃತ್ವದಲ್ಲಿ ನಡೆಯಿತು.ಈ ಸಂರ್ಭದಲ್ಲಿ ಬೋವಿ ಸಮುದಾಯದ ಜಿಲ್ಲಾ ಉಪಾಧ್ಯಕ್ಷರು ಬುಡ್ಡರೆಡ್ಡಿ ಹಾಗೂ ತಾಲೂಕು ಅಧ್ಯಕ್ಷರಾದ ವಿ. ಮಾರೇಶ್ ಮತ್ತು ಸಂಘಟನೆ ಪದಾಧಿಕಾರಿಗಳು ಹಾಗೂ ತಾಲೂಕಾ ಕಚೇರಿ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮದ ಕುರಿತು ಮಾತನಾಡುತ ಶ್ರೀ ಶಿವಯೋಗಿ ಶರಣ ಸಿದ್ದರಾಮೇಶ್ವರವರ ಕುರಿತು ಸಮುದಾಯದ ಮುಖಂಡರು ಮಾತನಾಡಿದರು. ಈ ಸಂರ್ಭದಲ್ಲಿ ಬಿ ಹನುಮಂತಪ್ಪ, ಆರ್. ವೈ. ತಿಪ್ಪೇಸ್ವಾಮಿ ಪಿ. ಆರ್. ಹನುಮಂತಪ್ಪ, ಹುಲಿಕುಂಟೆಪ್ಪ, ಚoದ್ರಶೇಖರ್ ಪ್ಪ, ರಮೇಶ, ಕೊಲ್ಲಪ್ಪ, ಡಿ. ಟಿ. ಹನುಮಂತಪ್ಪ, ವಿ ಮಾರಣ್ಣ, ಅ. ಅಂಜಿನಪ್ಪ, ವೀರೇಶ್, ಕೊಟ್ರೇಶ್, ಇನ್ನೂ ಮುಂತಾದವರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button