ಗಣರಾಜ್ಯೋತ್ಸವ ಹಾಗೂ ಸಂವಿಧಾನ ಜಾರಿ ದಿನದ ಅಂಗವಾಗಿ – ಭೀಮ ಗಾಯನ ಕಾರ್ಯಕ್ರಮ.

ಹೊಸಪೇಟೆ ಜ.27

ವಿಜಯನಗರ ಜಿಲ್ಲೆಯ ಡಾ, ಬಿ.ಆರ್ ಅಂಬೇಡ್ಕರ್ ಸಂಘ ಹಾಗೂ ವಿಜಯನಗರ ಜಿಲ್ಲೆಯ ಮಾದಿಗ ಸಮಾಜ ಹೊಸಪೇಟೆ ವತಿಯಿಂದ ಗಣರಾಜ್ಯೋತ್ಸವ ಹಾಗೂ ಸಂವಿಧಾನ ಜಾರಿ ದಿನದ ಅಂಗವಾಗಿ ಭೀಮ ಗಾಯನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಭಾರತ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು. ಮತ್ತು ಪ್ರಕೃತಿ ಎಂಬ ಭರತನಾಟ್ಯ ಕಲಾವಿದೆಯಿಂದ ಭರತ ನಾಟ್ಯದ ಮೂಲಕ ಉದ್ಘಾಟನೆ ಮಾಡಲಾಯಿತು. ಭೀಮ ಗಾಯನ ಕಾರ್ಯಕ್ರಮದಲ್ಲಿ ಗಾಯಕರಾದಂತಹ ಎಲ್ಲಪ್ಪ ಬಂಡಾರ, ವಿಜಯ ಕುಮಾರ್ ಇಂದಿರಾ ನಗರ, ತಿಪ್ಪೇಸ್ವಾಮಿ ಕಮಲಾಪುರ, ಶ್ರೀನಿವಾಸ, ಪಂಪಾಪತಿ, ಹನುಮಂತ, ಹನುಮೇಶ, ಹನುಂಮತಪ್ಪ, ಹನುಮಂತ ಬಾಬಾ ಸಾಹೇಬ್ ಅಂಬೇಡ್ಕರ್ ಗೀತೆಗಳನ್ನ, ಕ್ರಾಂತಿ ಗೀತೆಗಳನ್ನು, ಹೋರಾಟದ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ವಿಜಯನಗರ ಜಿಲ್ಲೆಯ ಡಾ, ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು ಮಾತನಾಡಿ 76 ನೇ. ಗಣರಾಜ್ಯೋತ್ಸವದ ಹಾಗೂ ಸಂವಿಧಾನದ ದಿನದ ಶುಭಾಶಯಗಳು ಬಾಬಾ ಸಾಹೇಬ್ ಅವರು ಬರೆದು ಸಂವಿಧಾನವು ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಮತ್ತು ಎಲ್ಲಾ ವರ್ಗದ ಜನರ ಏಳಿಗೆಗಾಗಿ ಹಾಗೂ ಬಾಬಾ ಸಾಹೇಬರು ಈ ದೇಶದಲ್ಲಿ ಖಂಡ ಕನಸು ನನಸಾಗಲಿ ಅಂಬೇಡ್ಕರ್ ತತ್ವ ಆದರ್ಶಗಳು ನಮ್ಮಲ್ಲಿ ಮೊಳಗಲಿ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಜಗನ್ನಾಥ, ಲಕ್ಷ್ಮಣ, ಹೆಚ್.ಎಸ್ ವೆಂಕಪ್ಪ, ವಿಜಯ್ ಕುಮಾರ್, ಮರಿದಾಸ, ಹೆಚ್.ಬಿ.ಶ್ರೀನಿವಾಸ, ಭರತ್ ಕುಮಾರ್ ಸಿಆರ್, ಕೊಲ್ಲಾಪುರಿ, ಕರಿಯಪ್ಪ, ರಾಜಶೇಖರ, ಗಂಗಾ, ಈರಣ್ಣ, ರವಿ, ಶಣ್ಮುಖ, ಯರ್ರಿಸ್ವಾಮಿ, ಭೀಮ ಬಂಧುಗಳು ಮತ್ತು ಪ್ರೇಕ್ಷಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button