ಸ್ವಚ್ಛತೆ ಕಾಣದೆ ಗಬ್ಬೆದ್ದು ನಾರುತ್ತಿರುವ ಹರನಾಳ ಗ್ರಾಮ ಕಣ್ಮುಚ್ಚಿ ಕುಳಿತ ಅಧಿಕಾರಿಗಳು!
ವಿಜಯಪುರ ಫೆಬ್ರುವರಿ.1

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಯವರು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸಬೇಕು ಎಂದು ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದ್ದಾರೆ.ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ, ದೇಶಾದ್ಯಂತ ಸಾಮೂಹಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಯವರು ಖುದ್ದು ಪೊರಕೆ ಹಿಡಿದು ಸ್ವಚ್ಛತೆ ಆರಂಭಿಸಿದ್ದಾರೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ನಾವು ಗಲೀಜು ಮಾಡುವುದಿಲ್ಲ, ಗಲೀಜು ಮಾಡಲೂ ಬಿಡುವುದಿಲ್ಲ ಎನ್ನುವುದು ಮಂತ್ರವಾಗಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ ದೇಶಾದ್ಯಂತ ಸಂಗೀತ, ನಾಟಕಗಳ ಮೂಲಕವೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ಆದರೆ ಇಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಅದಕ್ಕೆ ವಿರುದ್ಧವಾಗಿ ಸ್ವಚ್ಛತೆಗೂ ನಮಗೂ ಸಂಬಂಧವೇ ವಿಲ್ಲವೆಂಬಂತ್ತೆ ನಿದ್ರೆಗೆ ಜಾರಿದ್ದಾರೆ.ಇದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಹರಾನಾಳ ಗ್ರಾಮದ ದುಸ್ಥಿತಿ.ಜನ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ಮುಖ್ಯ ರಸ್ತೆಯ ಮೇಲೆ ಗಟಾರ ನೀರು ಹರಿಯುತ್ತಿದ್ದು. ಬಸ್ ನಿಲ್ದಾಣ ದಿಂದ ಹಿಡಿದು ತಮ್ಮ ಆಡಳಿತ ಇಲಾಖೆ ಗ್ರಾಮ ಪಂಚಾಯತಿಗೆ ಹೋಗಬೇಕಾದರೆ ಈ ಹೊಲಸು ನೀರಿನ ಮೇಲೆ ನಡೆದು ಕೊಂಡೆ ಹೋಗಬೇಕು ಅಧಿಕಾರಿಗಳಿಗೆ, ಅಧ್ಯಕ್ಷರಿಗೆ, ಸದಸ್ಯರಿಗೆ,ನಾಚಿಕೆಯಾಗಬೇಕು.

ಎಂದು ಪ್ರಜ್ಞಾವಂತ ಗ್ರಾಮಸ್ಥರ ಆರೋಪವಾಗಿದೆ.ಗಲೀಜು ನೀರು ರಸ್ತೆಯ ಮೇಲೆ ಹರಿದು ಬರುತ್ತಿದೆ. ಇದರಿಂದ ಗ್ರಾಮದ ತುಂಬೆಲ್ಲಾ ಗಬ್ಬು ವಾಸನೆ ಹೊಡೆಯುತ್ತಿದೆ.ಮನೆಯಲ್ಲಿ ಇದ್ದರು ಮೂಗು ಮುಚ್ಚಿಕೊಂಡು ಕುಳಿತು ಕೊಳ್ಳುವಂತಾಗಿದೆ.ಗಟಾರ ನೀರು ನಿಂತು ಗಬ್ಬು ವಾಸನೆ ಬಿರುತ್ತಿದೆ.ಮನೆಯಲ್ಲಿ ಕುಳಿತು ಊಟ ಮಾಡುವುದು ದುಸ್ತರವಾಗುತ್ತಿದೆ ಎಂದು ಇಲ್ಲಿನ ಗ್ರಾಮಸ್ಥರು ಎನ್ನುತ್ತಿದ್ದಾರೆ.ಅನಾರೋಗ್ಯದಿಂದ ಆಸ್ಪತ್ರೆ ಸೇರುವಂತಾಗಿದೆ. ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ,ಕಾಲರ್, ಟೈಪಡ್,ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.ಗಟಾರ ನೀರು ರಸ್ತೆ ಮೇಲೆ. ಥೂ ಗಬ್ಬುನಾಥ, ವ್ಯಾಕ್ ವಾಸನೆಯ ತೊಂದರೆ ಅನುಭವಿಸುತ್ತಿದ್ದಾರೆ.ಇಂತಹ ಅವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಈ ನಿರ್ಲಕ್ಷ್ಯತನವನ್ನು ಗ್ರಾಮಸ್ಥರು ಖಾರವಾದ ಶಬ್ದಗಳಿಂದ ಖಂಡಿಸುತ್ತಿದ್ದಾರೆ.ಅಧಿಕಾರಿಗಳಿಗೆ ಸರ್ಕಾರಿ ಸಂಬಳ ಪಡೆಯುವ ಅವರಿಗೆ,ಮನಸಾಕ್ಷಿ ಇದ್ದಿರುವುದು ನಿಜವಾದಲ್ಲಿ ಸ್ವಚ್ಛತೆ ವ್ಯವಸ್ಥೆ ಮಾಡಲಿ ಎಂದು ಗ್ರಾಮದ ಜನರು ದೂರುತ್ತಿದ್ದಾರೆ. ಗ್ರಾಮಕ್ಕೆ ಯಾರೇ ಬಂದರು ತ್ಯಾಜ್ಯ ನೀರು,ಅವರನ್ನು ಸ್ವಾಗತಿಸಿ ಅವರ ಪಾದಗಳನ್ನು ಆಲಂಗಿಸುತ್ತವೆ . ಇದರಿಂದಾಗಿ ಇಡೀ ಊರೇ ದುರ್ನಾಥದ ಸಿಂಚನವಾಗುತ್ತಿದೆ.ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದು ಇನ್ನಾದರೂ ಎಚ್ಚೆತ್ತು ಅಗತ್ಯ ಕ್ರಮಗಳನ್ನು ಕೈಗೊಂಡು ಸೂಕ್ತ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಾರೋ ಇಲ್ಲವೋ ಕಾಯ್ದು ನೋಡಬೇಕಾಗಿದೆ.
ಮಹಾಂತೇಶ. ಹಾದಿಮನಿ. ವಿಜಯಪುರ.
ಜಿಲ್ಲಾ ಅಧ್ಯಕ್ಷರು. ಜಾಂಭವ ಯುವ ಸೇನಾ ಸಮಿತಿ,