ಜೈ ಭಾಪೋ ಜೈ ಭೀಮ್ ಜೈ ಸಂವಿಧಾನ ಅಧಿವೇಶನದ ಪೂರ್ವಭಾವಿ ಸಭೆ.

ದೇವರ ಹಿಪ್ಪರಗಿ ಜ.16

ಪಟ್ಟಣದ ಪ್ರವಾಸ ಮಂದಿರದಲ್ಲಿ ಜ. 21 ರಂದು ಬೆಳಗಾವಿನ ಜೈ ಭಾಪೋ ಜೈ ಭೀಮ್ ಜೈ ಸಂವಿಧಾನ ಅಧಿವೇಶನದ ಪೂರ್ವಭಾವಿ ಸಭೆಯನ್ನು ನಡೆಸಿತು, ಈ ಸಭೆಯಲ್ಲಿ ದೇವರ ಹಿಪ್ಪರಗಿ ಮತ ಕ್ಷೇತ್ರ ಉಸ್ತುವಾರಿಗಳು ಹಾಗೂ ರಾಯಚೂರ ಶಾಸಕರಾದ ಬಸವರಾಜ ದದ್ದಲ್, ಇವರ ನೇತೃತ್ವದಲ್ಲಿ, ಬೆಳಗಾವಿಯಲ್ಲಿ ನಡೆದ ಮಹಾತ್ಮ ಗಾಂಧಿ ಯವರು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ 100 ವರ್ಷ ತುಂಬಿದ ಪ್ರಯುಕ್ತ ನಡೆಯಲಿರುವ. ಈ ಸಭೆಯಲ್ಲಿ ಮತ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಕೂಡಿ ತಮ್ಮ ಸಲಹೆ ಸೂಚಕಗಳು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಭುಗೌಡ, ಪಾಟೀಲ ಲಿಂಗದಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸಿರ್ ಶೇಟ್ ಬೇಪಾರಿ ಬಾಳನಗೌಡ ಪಾಟೀಲ, ಹಾಗೂ ಸಂಗಮೇಶ ಛಾಯಗೋಳ, ಪ್ರಕಾಶ ಗುಡಿಮನಿ ಲಲಿತಾ ದೊಡ್ಡಮನಿ ಮಾಂತೇಶ ಮೂರಕನಾಳ ರಾಜಪಟೇಲ ಕಣಮೇಶ್ರರ ಮಶಾಕ ನಧಾಪ ಹಾಗೂ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಮತ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಭೀಮಪ್ಪ. ಹಚ್ಯಾಳ. ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button