ಹಾಲುಮತದ ಮೂಲ ಪೀಠ, ಶ್ರೀಮದ ಜಗದ್ಗುರು ಅಮೋಘ – ಸಿದ್ದೇಶ್ವರ ಜಾತ್ರಾ ಮಹೋತ್ಸವ.
ಸಿದ್ದಾಪುರ ಮೇ.25

ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿ.ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮದ ಜಗದ್ಗುರು ಶ್ರೀ ಅಮೋಘ ಸಿದ್ದೇಶ್ವರ ಜಾತ್ರೆ ಜರಗುವುದು. ಮೇ 26 ಸೋಮವಾರ ದಂದು ಮುಂಜಾನೆ 7.00 ಗಂಟೆಗೆ ತೋನಸ್ಯಾಳ ಗ್ರಾಮದಿಂದ ಆಗಮಿಸಿದ ದೇವರನ್ನು ಸಕಲವಾದ್ಯ ವೈಭವಗಳೊಂದಿಗೆ ಹಾಗೂ ಸುಮಂಗಲಿಯರ ಕುಂಭ ಮೇಳದೊಂದಿಗೆ ಬರಮಾಡಿ ಕೊಳ್ಳುವುದು. ನಂತರ ಶ್ರೀ ಅಮೋಘ ಸಿದ್ದೇಶ್ವರ ಗದ್ದುಗೆ ಮೇಲೆ ಪ್ರತಿಷ್ಠಾಪಿಸುವದು. ಅಂದೇ ರಾತ್ರಿ 9: 00 ಗಂಟೆಗೆ ಸ್ವರ ಸಿಂಚನ ಮತ್ತು ವಿರಾಟ ವೇದಾಂತ ಮೆಲೋಡಿಸ್ ಆರ್ಕೆಸ್ಟ್ ಮುದ್ದೇಬಿಹಾಳ ಇವರಿಂದ. ನೃತ್ಯ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು. ಅಂದೇ ರಾತ್ರಿ 10. ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ನಡೆಯುತ್ತವೆ. ಮೇ 27 ಮಂಗಳವಾರ ದಂದು ಮುಂಜಾನೆ 7.00 ಗಂಟೆಗೆ ಶ್ರೀ ಅಮೋಘ ಸಿದ್ದೇಶ್ವರ ಮೂರ್ತಿಗೆ ಮಹಾಭಿಷೇಕ. ನಂತರ ಶ್ರೀ ಶ್ರೀ ಶ್ರೀ ಶ್ರೋ. ಬ್ರ.ನಿ.ಸ ಸಿದ್ದರತ್ನ ಮದ ಗೊಂಡೇಶ್ವರ ಮಹಾರಾಜರ 15 ನೇ. ಪುಣ್ಯರಾಧನೆ. ಮಧ್ಯಾಹ್ನ 3 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಮತ್ತು ಸಾರವಾಡದ ಗೊಂಬೆ ಹಾಗೂ ಡಿಜೆ ಸೌಂಡ್ ಸಿಸ್ಟಮ್ ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಅಮೋಘ ಸಿದ್ದೇಶ್ವರ ಭಾವಚಿತ್ರ ಮೆರವಣಿಗೆ.

ಅಂದೇ ರಾತ್ರಿ 10 ಗಂಟೆಗೆ ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರಿಂದ ಸುಪ್ರಸಿದ್ಧ ಡೊಳ್ಳಿನ ಪದಗಳು ಹಾಗೂ ಡೊಳ್ಳಿನ ಓಲಗ. ಅಂದೇ ನಸುಕಿನ 4. ಗಂಟೆಗೆ ಶಿವ ವಾಣಿ ಹೇಳಿಕೆಗಳು. ಮೇ 28 ಬುಧವಾರ ದಂದು ಮುಂಜಾನೆ 6. ಗಂಟೆಗೆ ಡೊಳ್ಳಿನ ವಾದ್ಯ ವೈಭವಗಳೊಂದಿಗೆ ದೇವರ ಪಲ್ಲಕ್ಕಿ ಉತ್ಸವ. ಮಧ್ಯಾಹ್ನ 12 .ಗಂಟೆಗೆ ಅನ್ನಸಂತರ್ಪಣೆ. ಅಂದೆ ರಾತ್ರಿ 10 ಗಂಟೆಗೆ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ಇವರಿಂದ. ಅಕ್ಕ ಅಂಗಾರ ತಂಗಿ ಬಂಗಾರ ಎಂಬ ಸಾಮಾಜಿಕ ನಾಟಕ ನಡೆಯಲಾಗುತ್ತದೆ. ನಾಟಕದ ಮುಂಚೆ ಮಹಾ ದಾನಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಾಗುತ್ತದೆ. ಎಂದು ಜಾತ್ರಾ ಕಮಿಟಿಯವರು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ