“ಬೇದ ಅರಿಯದ ಸೃಷ್ಟಿಯ ಸಿರಿಗಳು”…..

ಬೇದ ಅರಿಯದ ಸೃಷ್ಠಿಯ ಸಿರಿಗಳು”

ವಿಶ್ವದಲಿ ಸೂರ್ಯೋದಯವು

ಸುಂದರತೆಯ ಸೋಗಸು

ಕೋಗಿಲೆಯ ಕೂಹು ಕೂಹು ಧ್ವನಿಗೆ

ಮನುಜ ಮೂಖ ವಿಶ್ಮಿತ

ಅರಳಿದ ಪುಷ್ಪಗಳು ನೋಡುವ ಮನ

ಮುಗುಳು ನಗೆಗೆ ಮೂಲವು

ಶ್ರೀಗಂಧದ ಸುವಾಸನೆ ಜಗದ ತುಂಬಾ

ಮಲ್ಲಿಗೆಯ ಪರಿಮಳ ಮನ ಮನೆ ಸೆಳೆತ

ಜೇನು ಮಧು ಸವಿಗಳಲಿ ಸಿಹಿ

ಕಾಮನ ಬಿಲ್ಲಿನ ಸಪ್ತ ಬಣ್ಣಗಳು

ಕಣ್ಮನ ಸೆಳೆವವು

ಭೂತಾಯಿಯ ಹಸಿರು

ಸಕಲ ಜೀವರಾಶಿಗಳ ಉಸಿರು

ಶ್ವಾನಗಳು ನಂಬಿಕೆಗೆ

ವಿಶ್ವಾಸದ ಅರ್ಹತೆಯು

ಇರುವೆಗಳ ಒಗ್ಗಟ್ಟಿನ ಬಲ

ಅರಿಯದ ಮನುಜನು

ಪಾರಿವಾಳಗಳು ಸಂದೇಶಗಳ

ರವಾನೆಯ ರೂವಾರಿಗಳು

ಅರಗಿಣಿಗಳ ಸಿಹಿ ಮುತ್ತು ಸವಿಮಾತು

ಮಂಗಗಳ ಕುಚೇಷ್ಠೆ ಚಲ್ಲಾಟ

ನೈಜ ಹಾಸ್ಯತನವು

ಗೋವುಗಳು ಪೂಜ್ಯತೆಗೆ ಸಾಕ್ಷಾತ್ಕಾರ

ಎರೆಹುಳು ನಿಜ ರೈತಮಿತ್ರ

ನೇಗಿಲು ಯೋಗಿಗಳು

ನಿಸ್ವಾರ್ಥ ಶ್ರಮದವರು

ನೆಲ ಜಲ ಅಗ್ನಿ ಬೆಳಕು ವಾಯು ಬೇದ

ಅರಿಯದ ಸೃಷ್ಠಿಯ ಸಿರಿಗಳು

-ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ಆರೋಗ್ಯ ನಿರೀಕ್ಷಣಾಧಿಕಾರಿ

ಬಾಗಲಕೋಟ..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button