ನಮಗೆ ಸೌಲಭ್ಯ ನೀಡುವಂತೆ ಹಾಸ್ಟೇಲ್ ಗೆ ಬೀಗ – ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ.
ಮಾನ್ವಿ ಫೆ.12

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗ ಬಾರದು ಎಂದು ಸರಕಾರ ಹಾಸ್ಟೇಲ್ ಗಳನ್ನು ಪ್ರಾರಂಭಿಸಿದೆ. ಆದರೆ ಮಾನ್ವಿಯಲ್ಲಿರುವ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡದ ಕಾರಣ ವಿದ್ಯಾರ್ಥಿಗಳೆ ಹಾಸ್ಟೇಲ್ ಗೆ ಬೀಗ ಹಾಕಿ ನಮಗೆ ನ್ಯಾಯಬೇಕು ಎಂದು ಹೋರಾಟ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮುಸ್ಟೂರು ರಸ್ತೆಯಲ್ಲಿರುವ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿಯ ವಿದ್ಯಾರ್ಥಿಗಳು ನ್ಯಾಯ ಬೇಕು ಎಂದು ಕೇಳುತ್ತಾರೆಂದ ಮೇಲೆ ಜಿಲ್ಲಾ ಅಧಿಕಾರಿ ಸಂಗಮೇಶಪ್ಪ ಅದೇನು ಕೆಲಸ ಮಾಡುತ್ತಿದ್ದಾರೆಂದು ವಿದ್ಯಾರ್ಥಿಗಳ ನೋವು ತೋರಿಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಬೇಕು ಎಂದು ನೀವು ಬಯಸಿದರೆ ವಿದ್ಯಾರ್ಥಿಗಳ ಹೆಸರಲ್ಲಿ ಲೂಟಿ ಮಾಡುವ ಅಧಿಕಾರಿಗಳು ಯಾರು ಎಂದು ನೀವೆ ಸಮಾಜಕ್ಕೆ ಹೇಳ ಬೇಕಾಗಿದೆ. ಸರಕಾರ ಕೊಡುವ ಅನುದಾನ ಯಾರ ಪಾಲಾಗುತ್ತಿದೆ ಎಂದು ವಿದ್ಯಾರ್ಥಿಗಳ ಕೂಗಿಗೆ ಸಾಕ್ಷಿಯಾಗಿ ಕಾಣುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ