ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಬೇಡಿಕೆಗಳ ಕುರಿತು ಸರ್ಕಾರದ ಹಂತದಲ್ಲಿ – ಮಾತನಾಡುವುದಾಗಿ ಭರವಸೆ ನೀಡಿದ ಡಾ, ಎನ್.ಟಿ.ಎಸ್ ಶಾಸಕರು.
ಕೂಡ್ಲಿಗಿ ಫೆ.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ತಾಲೂಕ ಆಡಳಿತ ಸೌಧದ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಈಡೇರುಸುವಂತೆ ಎರಡನೇ ಹಂತದ ಅನಿರ್ದಿಷ್ಟವಾದಿ ಮುಷ್ಕರದ ಪ್ರತಿಭಟನೆಯಲ್ಲಿ ಸೋಮವಾರ ದಿಂದ ಪ್ರಾರಂಭವಾದಂತ ಮುಷ್ಕರ ಎರಡನೇ ದಿನಕ್ಕೆ ಆಡಳಿತ ಅಧಿಕಾರಿಗಳ ಪ್ರತಿಭಟನೆಯ ಮುಷ್ಕರ ಮುಂದುವರೆದಿದ್ದು. ಎರಡನೇ ದಿನವಾದ ಮಂಗಳವಾರ ರಂದು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎನ್.ಟಿ ಶ್ರೀನಿವಾಸ್ ರವರು ಆಡಳಿತ ಸೌಧದ ಆವರಣದಲ್ಲಿರುವ ಆಡಳಿತ ಅಧಿಕಾರಿಗಳ ಸರ್ಕಾರದ ವಿರುದ್ಧ ಪ್ರತಿಭಟನೆಯ ಮುಷ್ಕರದಲ್ಲಿ ಭಾಗವಹಿಸಿ. ಹೋರಾಟಗಾರರ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಸರ್ಕಾರದ ಮಂತ್ರಿಗಳ ಮುಂದೆ ಪ್ರಸ್ತಾವನೆ ಮಾಡುವುದಾಗಿ ಭರವಸೆ ಮಾತುಗಳನ್ನಾಡಿದರು. ಬೇಡಿಕೆ ಈಡೇರಿಸು ಕುರಿತು ಮುಷ್ಕರದಲ್ಲಿ ಭಾಗವಹಿಸುವ ಬಗ್ಗೆ ಕರೆ ನೀಡುತ್ತಿರುವ ಬಗ್ಗೆ ಮಾನ್ಯ ಶಾಸಕರು ಕೂಡ್ಲಿಗಿ ಇವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕ ಅಧ್ಯಕ್ಷರು ಮರುಳಸಿದ್ದಪ್ಪ ಎನ್.ಯು ಕಾರ್ಯದರ್ಶಿ ಇಮ್ರಾನ್, ನೌಕರರ ಸಂಘದ ನಿರ್ದೇಶಕ ಪ್ರಭು ತಳವಾರ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳಾದ ದೇವೇಂದ್ರ ನಾಯ್ಕ್, ಚೌಡಪ್ಪ, ಚನ್ನಬಸಯ್ಯ, ಸಿದ್ದಪ್ಪ, ಅಜ್ಜಯ್ಯ, ಕೊಟ್ರೇಶ್, ವೀರೇಶ್, ಶೋಭಾ, ಯಶವಂತ್, ನೇತ್ರಾವತಿ, ಸಂಪ್ರೀತಾ, ಮಧುಬಾಲ, ಚೈತ್ರ, ಶ್ವೇತಾ, ಮಮತಾ ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ